ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ‘ರಾಜ್ಯದಲ್ಲಿ 30 ಲಕ್ಷದಷ್ಟು ಜನರು ಇದ್ದೇವೆ. ಸಮುದಾಯವು ಪ್ರವರ್ಗ-1ರಲ್ಲಿ ಬರುತ್ತಿದ್ದು, ರಾಜಕೀಯ , ಶೈಕ್ಷಣಿಕ , ಆರ್ಥಿಕವಾಗಿ ತೀರ ಹಿಂದುಳಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಉಪ್ಪಾರರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದೇವೆ’ ಎಂದರು.