<p><strong>ಕೊಳ್ಳೇಗಾಲ</strong>: ಇಲ್ಲಿನ ನಗರಸಭೆಯ 2ನೇ ವಾರ್ಡ್ ವ್ಯಾಪ್ತಿಗೆ ಬರುವ ಆನಂದಜ್ಯೋತಿ ಕಾಲೊನಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೆ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.</p>.<p>ಈ ವಾರ್ಡ್ನಿಂದ ಆಯ್ಕೆಯಾಗಿದ್ದ ನಾಗಮಣಿ ಅವರ ಸದಸ್ಯತ್ವ ಪಕ್ಷದ ವಿಪ್ ಉಲ್ಲಂಘನೆ ಪ್ರಕರಣದಿಂದ ಅನರ್ಹಗೊಂಡಿದೆ.</p>.<p>ಬಡಾವಣೆಯಲ್ಲಿ 750ಕ್ಕೂ ಹೆಚ್ಚು ಕುಟುಂಬಗಳಿದ್ದು, 2500 ಕ್ಕೂ ಹೆಚ್ಚು ಜನರಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವವರ ಸಂಖ್ಯೆಯೇ ಇಲ್ಲಿ ಹೆಚ್ಚಿದೆ. ಬಹುತೇಕ ಮನೆಗಳು ಕಿರಿದಾಗಿದ್ದು, ಹಲವು ಮನೆಗಳಲ್ಲಿ10ಕ್ಕೂ ಹೆಚ್ಚು ಮಂದಿ ಜನರು ವಾಸಿಸುತ್ತಿದ್ದಾರೆ.</p>.<p>ಬಡಾವಣೆಯಲ್ಲಿ ನೀರಿನ ಸೌಲಭ್ಯ ಇದೆ. ರಸ್ತೆಯೂ ತಕ್ಕಮಟ್ಟಿಗೆ ಇದೆ. ಚರಂಡಿ ಸ್ವಚ್ಛವಾಗಿಲ್ಲ. ಚರಂಡಿ ಪೂರ್ತಿ ಬಚ್ಚಲು ಹುಳುಗಳ ಹಾವಳಿ. ಕೆಲ ಚರಂಡಿಗಳಲ್ಲಿ ಕಸಗಳು ಸಿಲುಕಿ ಕೊಳೆತು ಗಬ್ಬು ನಾರುತ್ತಿದೆ.</p>.<p>ಚರಂಡಿಯನ್ನು ಸ್ವಚ್ಛ ಮಾಡುವ ಕೆಲಸ ನಡೆದರೂ, ಚರಂಡಿಯಿಂದ ತೆಗೆದ ಹೂಳು, ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p class="Subhead"><strong>ಕಸದ ರಾಶಿಗಳು:</strong> ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಕಸ ರಾರಾಜಿಸುತ್ತದೆ. ಬಡಾವಣೆಗೆ ಭೇಟಿ ನೀಡುವವರನ್ನು ಕಸದ ರಾಶಿಗಳೇ ಸ್ವಾಗತ ಕೋರುತ್ತವೆ. ಜೋರಾಗಿ ಗಾಳಿ ಬೀಸುವಾಗ ಬೇರೆ ಕಡೆಗೂ ಈ ಕಸ ಹಾರುತ್ತಿದೆ.</p>.<p>‘ಕಸದ ಜೊತೆ ಪ್ಲಾಸ್ಟಿಕ್ ಹಾವಳಿಯೂ ಮೀತಿ ಮೀರಿದೆ. ಪ್ರತಿಯೊಂದು ಮನೆಯ ಮುಂದೆಯೂ ಪ್ಲಾಸ್ಟಿಕ್ ಬಿದ್ದಿರುತ್ತದೆ. ಕಸವನ್ನು ಸಂಗ್ರಹಿಸಲು ನಗರಸಭೆಯವರು ಬರುವುದಿಲ್ಲ’ ಎಂದು ಬಡಾವಣೆಯ ನಿವಾಸಿ ರಂಗಕ್ಕ ದೂರಿದರು.</p>.<p>‘ನಮ್ಮ ಬಡಾವಣೆಯಲ್ಲಿ ಕಸವನ್ನು ಸರಿಯಾಗಿ ತೆಗೆಯುವುದಿಲ್ಲ. ಬೇರೆ ಬಡಾವಣೆಯಲ್ಲಿ ಕಸವನ್ನು ನಿತ್ಯವೂ ಸಂಗ್ರಹಿಸಲಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡುತ್ತಾರೆ’ ಎಂದು ನಿವಾಸಿ ರಾಜು ಆರೋಪಿಸಿದರು.</p>.<p class="Briefhead"><strong>ಗಬ್ಬು ನಾರುವ ಬಡಾವಣೆ</strong></p>.<p>‘ಈ ವಾರ್ಡ್ನಲ್ಲಿ ಪ್ರಾಣಿ ಖಾನೆಗಳಿವೆ. ಇಲ್ಲಿ ಸ್ವಚ್ಛತೆ ಇಲ್ಲ. ಮಾಂಸದ ತ್ಯಾಜ್ಯಗಳನ್ನು ಚರಂಡಿಗೆ ಮತ್ತು ಬಡಾವಣೆಯ ಸಮೀಪದಲ್ಲಿ ಎಸೆಯಲಾಗುತ್ತದೆ. ಈ ಕಾರಣದಿಂದ ಇಡೀ ಬಡಾವಣೆ ಗಬ್ಬು ನಾರುತ್ತಿದೆ. ನಾಯಿಗಳು, ಹದ್ದುಗಳು ಮತ್ತು ಕಾಗೆಗಳು ತ್ಯಾಜ್ಯಗಳನ್ನು ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಂದು ತಿನ್ನುತ್ತವೆ. ಇದರಿಂದ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.</p>.<p><em>ಬಡಾವಣೆಗೆ ಭೇಟಿ ನೀಡಿ ಅಲ್ಲಿನ ವಾಸ್ಥವ್ಯವನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇನೆ. ವಾರ್ಡ್ನ ಅಭಿವೃದ್ಧಿಯೇ ನಮ್ಮ ಆದ್ಯತೆ.</em><br /><strong>ನಂಜುಂಡಸ್ವಾಮಿ, ನಗರಸಭೆ ಆಯುಕ್ತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ</strong>: ಇಲ್ಲಿನ ನಗರಸಭೆಯ 2ನೇ ವಾರ್ಡ್ ವ್ಯಾಪ್ತಿಗೆ ಬರುವ ಆನಂದಜ್ಯೋತಿ ಕಾಲೊನಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೆ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.</p>.<p>ಈ ವಾರ್ಡ್ನಿಂದ ಆಯ್ಕೆಯಾಗಿದ್ದ ನಾಗಮಣಿ ಅವರ ಸದಸ್ಯತ್ವ ಪಕ್ಷದ ವಿಪ್ ಉಲ್ಲಂಘನೆ ಪ್ರಕರಣದಿಂದ ಅನರ್ಹಗೊಂಡಿದೆ.</p>.<p>ಬಡಾವಣೆಯಲ್ಲಿ 750ಕ್ಕೂ ಹೆಚ್ಚು ಕುಟುಂಬಗಳಿದ್ದು, 2500 ಕ್ಕೂ ಹೆಚ್ಚು ಜನರಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವವರ ಸಂಖ್ಯೆಯೇ ಇಲ್ಲಿ ಹೆಚ್ಚಿದೆ. ಬಹುತೇಕ ಮನೆಗಳು ಕಿರಿದಾಗಿದ್ದು, ಹಲವು ಮನೆಗಳಲ್ಲಿ10ಕ್ಕೂ ಹೆಚ್ಚು ಮಂದಿ ಜನರು ವಾಸಿಸುತ್ತಿದ್ದಾರೆ.</p>.<p>ಬಡಾವಣೆಯಲ್ಲಿ ನೀರಿನ ಸೌಲಭ್ಯ ಇದೆ. ರಸ್ತೆಯೂ ತಕ್ಕಮಟ್ಟಿಗೆ ಇದೆ. ಚರಂಡಿ ಸ್ವಚ್ಛವಾಗಿಲ್ಲ. ಚರಂಡಿ ಪೂರ್ತಿ ಬಚ್ಚಲು ಹುಳುಗಳ ಹಾವಳಿ. ಕೆಲ ಚರಂಡಿಗಳಲ್ಲಿ ಕಸಗಳು ಸಿಲುಕಿ ಕೊಳೆತು ಗಬ್ಬು ನಾರುತ್ತಿದೆ.</p>.<p>ಚರಂಡಿಯನ್ನು ಸ್ವಚ್ಛ ಮಾಡುವ ಕೆಲಸ ನಡೆದರೂ, ಚರಂಡಿಯಿಂದ ತೆಗೆದ ಹೂಳು, ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p class="Subhead"><strong>ಕಸದ ರಾಶಿಗಳು:</strong> ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಕಸ ರಾರಾಜಿಸುತ್ತದೆ. ಬಡಾವಣೆಗೆ ಭೇಟಿ ನೀಡುವವರನ್ನು ಕಸದ ರಾಶಿಗಳೇ ಸ್ವಾಗತ ಕೋರುತ್ತವೆ. ಜೋರಾಗಿ ಗಾಳಿ ಬೀಸುವಾಗ ಬೇರೆ ಕಡೆಗೂ ಈ ಕಸ ಹಾರುತ್ತಿದೆ.</p>.<p>‘ಕಸದ ಜೊತೆ ಪ್ಲಾಸ್ಟಿಕ್ ಹಾವಳಿಯೂ ಮೀತಿ ಮೀರಿದೆ. ಪ್ರತಿಯೊಂದು ಮನೆಯ ಮುಂದೆಯೂ ಪ್ಲಾಸ್ಟಿಕ್ ಬಿದ್ದಿರುತ್ತದೆ. ಕಸವನ್ನು ಸಂಗ್ರಹಿಸಲು ನಗರಸಭೆಯವರು ಬರುವುದಿಲ್ಲ’ ಎಂದು ಬಡಾವಣೆಯ ನಿವಾಸಿ ರಂಗಕ್ಕ ದೂರಿದರು.</p>.<p>‘ನಮ್ಮ ಬಡಾವಣೆಯಲ್ಲಿ ಕಸವನ್ನು ಸರಿಯಾಗಿ ತೆಗೆಯುವುದಿಲ್ಲ. ಬೇರೆ ಬಡಾವಣೆಯಲ್ಲಿ ಕಸವನ್ನು ನಿತ್ಯವೂ ಸಂಗ್ರಹಿಸಲಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡುತ್ತಾರೆ’ ಎಂದು ನಿವಾಸಿ ರಾಜು ಆರೋಪಿಸಿದರು.</p>.<p class="Briefhead"><strong>ಗಬ್ಬು ನಾರುವ ಬಡಾವಣೆ</strong></p>.<p>‘ಈ ವಾರ್ಡ್ನಲ್ಲಿ ಪ್ರಾಣಿ ಖಾನೆಗಳಿವೆ. ಇಲ್ಲಿ ಸ್ವಚ್ಛತೆ ಇಲ್ಲ. ಮಾಂಸದ ತ್ಯಾಜ್ಯಗಳನ್ನು ಚರಂಡಿಗೆ ಮತ್ತು ಬಡಾವಣೆಯ ಸಮೀಪದಲ್ಲಿ ಎಸೆಯಲಾಗುತ್ತದೆ. ಈ ಕಾರಣದಿಂದ ಇಡೀ ಬಡಾವಣೆ ಗಬ್ಬು ನಾರುತ್ತಿದೆ. ನಾಯಿಗಳು, ಹದ್ದುಗಳು ಮತ್ತು ಕಾಗೆಗಳು ತ್ಯಾಜ್ಯಗಳನ್ನು ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಂದು ತಿನ್ನುತ್ತವೆ. ಇದರಿಂದ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.</p>.<p><em>ಬಡಾವಣೆಗೆ ಭೇಟಿ ನೀಡಿ ಅಲ್ಲಿನ ವಾಸ್ಥವ್ಯವನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇನೆ. ವಾರ್ಡ್ನ ಅಭಿವೃದ್ಧಿಯೇ ನಮ್ಮ ಆದ್ಯತೆ.</em><br /><strong>ನಂಜುಂಡಸ್ವಾಮಿ, ನಗರಸಭೆ ಆಯುಕ್ತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>