<p><strong>ಚಾಮರಾಜನಗರ: </strong>ಕೋವಿಡ್ ಎರಡನೇ ಅಲೆ ಭೀತಿಯ ನಡುವೆಯೇ, ಬೇವು ಬೆಲ್ಲದ ಹಬ್ಬ ಯುಗಾದಿ ಹಬ್ಬದ ಆಚರಣೆಗೆ ಜನರು ಸಿದ್ಧತೆ ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಏರಿಕೆ ಕಂಡಿದೆ.</p>.<p>ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಬಾರಿ ಹೂವು ಬಿಟ್ಟು ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ.</p>.<p>ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷವಾಗಿರುವುದರಿಂದ ಕರಾವಳಿ ಭಾಗದಲ್ಲಿ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ (ಇದನ್ನು ವಿಷು ಹಬ್ಬ ಎಂದು ಕರೆಯಲಾಗುತ್ತದೆ).</p>.<p>ಯುಗಾದಿಯಲ್ಲಿ ಪೂಜೆ ಪುನಸ್ಕಾರಗಳಿಗೆ ಪ್ರಾಮುಖ್ಯ ಇರುವುದರಿಂದ ಹೂವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ದರದಲ್ಲೂ ಏರಿಕೆ ಕಂಡು ಬರುತ್ತದೆ.</p>.<p>ಬಿಡಿ ಹೂವುಗಳ ಮಾರುಕಟ್ಟೆಯಲ್ಲಿ ಕಳೆದವಾರದ ಧಾರಣೆಗೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಹಬ್ಬ ಮುಗಿದು ಎರಡು ಮೂರು ದಿನಗಳ ಕಾಲ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಕಳೆದ ವಾರ ₹400 ಇದ್ದ ಕೆಜಿ ಕನಕಾಂಬರ, ಈ ವಾರ ₹600 ಆಗಿದೆ. ₹240 ಇದ್ದ ಮಲ್ಲಿಗೆ, ಕಾಕಡದ ಬೆಲೆ ₹400 ಆಗಿದೆ. ಸುಗಂಧರಾಜ ಹೂವಿಗೆ ಕೆಜಿಗೆ ₹160ರಿಂದ ₹200ವರೆಗೆ ಇದೆ. ₹100ರಷ್ಟಿದ್ದ ಕೆಜಿ ಸೇವಂತಿಗೆ ₹200ರಿಂದ ₹240 ಆಗಿದೆ. ಚೆಂಡು ಹೂವಿನ ಬೆಲೆ ₹10ರಿಂದ ₹40ಕ್ಕೆ ಏರಿದೆ.</p>.<p>‘ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಹಬ್ಬಕ್ಕೆ ಒಂದೆರಡು ದಿನದ ಮೊದಲು ಹಾಗೂ ಹಬ್ಬ ಕಳೆದ ಒಂದೆರಡು ದಿನಗಳ ವರೆಗೆ ಬೆಲೆ ಹೆಚ್ಚಿರುತ್ತದೆ. ಯುಗಾದಿ ಕಾರಣಕ್ಕೆ ಹೂವನ್ನು ಖರೀದಿಸುವವರು ಹೆಚ್ಚಾಗಿದ್ದಾರೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಬೀನ್ಸ್ ತುಟ್ಟಿ: ಹಬ್ಬದ ಕಾರಣದಿಂದಾಗಿ ತರಕಾರಿಗಳ ಪೈಕಿ ಬೀನ್ಸ್ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹಾಪ್ಕಾಮ್ಸ್ನಲ್ಲಿ ಕಳೆದವಾರದವರೆಗೂ ಬೀನ್ಸ್ ಬೆಲೆ ಕೆಜಿಗೆ ₹40 ಇತ್ತು. ಈ ವಾರ ₹60ಕ್ಕೆ ತಲುಪಿದೆ.₹50 ಇದ್ದ ಹಸಿಮೆಣಸಿನಕಾಯಿ ಬೆಲೆ ₹55ಕ್ಕೆ ಏರಿದೆ. ಉಳಿದಂತೆ ಯಾವ ತರಕಾರಿಗಳ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ.</p>.<p>‘ಟೊಮೆಟೊ, ಕ್ಯಾರೆಟ್, ಈರುಳ್ಳಿಯ ದರ ಯಥಾಸ್ಥಿತಿ ಮುಂದುವರಿದಿದೆ. ಹಬ್ಬದ ಸಂದರ್ಭದಲ್ಲಿ ಬೀನ್ಸ್ಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ಪೂರೈಕೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ತಿಳಿಸಿದರು.</p>.<p class="Briefhead"><strong>ಬಟ್ಟೆ ಖರೀದಿ ಜೋರು</strong></p>.<p>ಯುಗಾದಿ ದಿನ ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸುವುದು ವಾಡಿಕೆ. ಹೀಗಾಗಿ, ಹಬ್ಬಕ್ಕೂ ಮೊದಲು ಹೊಸ ಬಟ್ಟೆಗಳ ಖರೀದಿ ಭರಾಟೆ ಜೋರಾಗಿರುತ್ತದೆ.</p>.<p>ಈ ಬಾರಿ ಅಂತಹ ಉತ್ಸಾಹ ಕಂಡು ಬಾರದಿದ್ದರೂ, ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಪೋಷಕರು ಮಕ್ಕಳಿಗಾಗಿ ಹೊಸ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದು ಕಂಡು ಬಂತು.</p>.<p class="Briefhead"><strong>ಸರಳ ಆಚರಣೆಗೆ ಡಿ.ಸಿ ಮನವಿ</strong></p>.<p>ಕೋವಿಡ್ ಪರಿಸ್ಥಿತಿಯ ಕಾರಣಕ್ಕೆ ಯುಗಾದಿ ಹಬ್ಬವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.</p>.<p>‘ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡಬೇಡಿ ಹಬ್ಬದ ಹೆಸರಿನಲ್ಲಿ ಮೈಮರೆಯುವುದು ಬೇಡ. ಎಲ್ಲರೂ ಮನೆಯಲ್ಲೇ ಇದ್ದು ಕುಟುಂಬದ ಸದಸ್ಯರೊಂದಿಗೆ ಯುಗಾದಿ ಆಚರಿಸಿ’ ಎಂದು ಫೇಸ್ಬುಕ್ ಪೈವ್ನಲ್ಲಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಕೋವಿಡ್ ಎರಡನೇ ಅಲೆ ಭೀತಿಯ ನಡುವೆಯೇ, ಬೇವು ಬೆಲ್ಲದ ಹಬ್ಬ ಯುಗಾದಿ ಹಬ್ಬದ ಆಚರಣೆಗೆ ಜನರು ಸಿದ್ಧತೆ ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಏರಿಕೆ ಕಂಡಿದೆ.</p>.<p>ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಬಾರಿ ಹೂವು ಬಿಟ್ಟು ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ.</p>.<p>ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷವಾಗಿರುವುದರಿಂದ ಕರಾವಳಿ ಭಾಗದಲ್ಲಿ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ (ಇದನ್ನು ವಿಷು ಹಬ್ಬ ಎಂದು ಕರೆಯಲಾಗುತ್ತದೆ).</p>.<p>ಯುಗಾದಿಯಲ್ಲಿ ಪೂಜೆ ಪುನಸ್ಕಾರಗಳಿಗೆ ಪ್ರಾಮುಖ್ಯ ಇರುವುದರಿಂದ ಹೂವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ದರದಲ್ಲೂ ಏರಿಕೆ ಕಂಡು ಬರುತ್ತದೆ.</p>.<p>ಬಿಡಿ ಹೂವುಗಳ ಮಾರುಕಟ್ಟೆಯಲ್ಲಿ ಕಳೆದವಾರದ ಧಾರಣೆಗೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಹಬ್ಬ ಮುಗಿದು ಎರಡು ಮೂರು ದಿನಗಳ ಕಾಲ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಕಳೆದ ವಾರ ₹400 ಇದ್ದ ಕೆಜಿ ಕನಕಾಂಬರ, ಈ ವಾರ ₹600 ಆಗಿದೆ. ₹240 ಇದ್ದ ಮಲ್ಲಿಗೆ, ಕಾಕಡದ ಬೆಲೆ ₹400 ಆಗಿದೆ. ಸುಗಂಧರಾಜ ಹೂವಿಗೆ ಕೆಜಿಗೆ ₹160ರಿಂದ ₹200ವರೆಗೆ ಇದೆ. ₹100ರಷ್ಟಿದ್ದ ಕೆಜಿ ಸೇವಂತಿಗೆ ₹200ರಿಂದ ₹240 ಆಗಿದೆ. ಚೆಂಡು ಹೂವಿನ ಬೆಲೆ ₹10ರಿಂದ ₹40ಕ್ಕೆ ಏರಿದೆ.</p>.<p>‘ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಹಬ್ಬಕ್ಕೆ ಒಂದೆರಡು ದಿನದ ಮೊದಲು ಹಾಗೂ ಹಬ್ಬ ಕಳೆದ ಒಂದೆರಡು ದಿನಗಳ ವರೆಗೆ ಬೆಲೆ ಹೆಚ್ಚಿರುತ್ತದೆ. ಯುಗಾದಿ ಕಾರಣಕ್ಕೆ ಹೂವನ್ನು ಖರೀದಿಸುವವರು ಹೆಚ್ಚಾಗಿದ್ದಾರೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಬೀನ್ಸ್ ತುಟ್ಟಿ: ಹಬ್ಬದ ಕಾರಣದಿಂದಾಗಿ ತರಕಾರಿಗಳ ಪೈಕಿ ಬೀನ್ಸ್ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹಾಪ್ಕಾಮ್ಸ್ನಲ್ಲಿ ಕಳೆದವಾರದವರೆಗೂ ಬೀನ್ಸ್ ಬೆಲೆ ಕೆಜಿಗೆ ₹40 ಇತ್ತು. ಈ ವಾರ ₹60ಕ್ಕೆ ತಲುಪಿದೆ.₹50 ಇದ್ದ ಹಸಿಮೆಣಸಿನಕಾಯಿ ಬೆಲೆ ₹55ಕ್ಕೆ ಏರಿದೆ. ಉಳಿದಂತೆ ಯಾವ ತರಕಾರಿಗಳ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ.</p>.<p>‘ಟೊಮೆಟೊ, ಕ್ಯಾರೆಟ್, ಈರುಳ್ಳಿಯ ದರ ಯಥಾಸ್ಥಿತಿ ಮುಂದುವರಿದಿದೆ. ಹಬ್ಬದ ಸಂದರ್ಭದಲ್ಲಿ ಬೀನ್ಸ್ಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ಪೂರೈಕೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ತಿಳಿಸಿದರು.</p>.<p class="Briefhead"><strong>ಬಟ್ಟೆ ಖರೀದಿ ಜೋರು</strong></p>.<p>ಯುಗಾದಿ ದಿನ ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸುವುದು ವಾಡಿಕೆ. ಹೀಗಾಗಿ, ಹಬ್ಬಕ್ಕೂ ಮೊದಲು ಹೊಸ ಬಟ್ಟೆಗಳ ಖರೀದಿ ಭರಾಟೆ ಜೋರಾಗಿರುತ್ತದೆ.</p>.<p>ಈ ಬಾರಿ ಅಂತಹ ಉತ್ಸಾಹ ಕಂಡು ಬಾರದಿದ್ದರೂ, ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಪೋಷಕರು ಮಕ್ಕಳಿಗಾಗಿ ಹೊಸ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದು ಕಂಡು ಬಂತು.</p>.<p class="Briefhead"><strong>ಸರಳ ಆಚರಣೆಗೆ ಡಿ.ಸಿ ಮನವಿ</strong></p>.<p>ಕೋವಿಡ್ ಪರಿಸ್ಥಿತಿಯ ಕಾರಣಕ್ಕೆ ಯುಗಾದಿ ಹಬ್ಬವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.</p>.<p>‘ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡಬೇಡಿ ಹಬ್ಬದ ಹೆಸರಿನಲ್ಲಿ ಮೈಮರೆಯುವುದು ಬೇಡ. ಎಲ್ಲರೂ ಮನೆಯಲ್ಲೇ ಇದ್ದು ಕುಟುಂಬದ ಸದಸ್ಯರೊಂದಿಗೆ ಯುಗಾದಿ ಆಚರಿಸಿ’ ಎಂದು ಫೇಸ್ಬುಕ್ ಪೈವ್ನಲ್ಲಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>