ಚಿಕ್ಕಬಳ್ಳಾಪುರ: ನಗರಸಭೆ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ 4ನೇ ಸ್ಥಾನ ಪಡೆದಿದೆ ಎಂಬ ಸುದ್ದಿ ಕೇಳಿ ಖುಷಿಯ ಬದಲು ಆಶ್ಚರ್ಯವಾಯಿತು. ನಗರದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಕೊಂಚವೂ ಬದಲಾಗಿಲ್ಲ. ನಗರವನ್ನು ಒಂದು ಸುತ್ತು ಹಾಕಿದರೆ ಇಂದಿಗೂ ಗಲ್ಲಿಗಲ್ಲಿಗಳಲ್ಲಿ ಕಸ ರಾಶಿಗಳು ಗೋಚರಿಸುತ್ತವೆ.