<p><strong>ಚಿಕ್ಕಬಳ್ಳಾಪುರ</strong>: ನಗರಸಭೆಗೆ ಸೇರಿದ ಮೂಲೆ ನಿವೇಶನವನ್ನು ಪೌರಾಯುಕ್ತರು ಅಕ್ರಮವಾಗಿ ಪರಭಾರೆ ಮಾಡುತ್ತಿರುವುದನ್ನು ಕೂಡಲೇ ರದ್ದುಮಾಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್ ದೂರು ಸಲ್ಲಿಸಿದ್ದಾರೆ.</p>.<p>ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಮತ್ತು ನಗರ ಯೋಜನಾ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದಾರೆ.</p>.<p>ಚಿಕ್ಕಬಳ್ಳಾಪುರ ನಗರಸಭೆಯ ವಾರ್ಡ್ ಸಂಖ್ಯೆ 6ರ ಮುನ್ಸಿಪಲ್ ಬಡಾವಣೆಯ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿರುವ ನಗರಸಭೆ ಆಸ್ತಿಸಂಖ್ಯೆ: 1478, 41*28 ಅಡಿಗಳ ಮೂಲೆ ನಿವೇಶನವನ್ನು ಪೌರಾಯುಕ್ತ ಮನ್ಸೂರ್ ಅಲಿ ಕೇವಲ ₹26,268 ಪಾವತಿಸಿ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ. ಈ ನಿವೇಶನ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.</p>.<p>ನಿವೇಶನ ಪರಭಾರೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವಂತಹ ವಿಷಯಗಳ ಅಂತಿಮ ವಿಷಯವನ್ನಾಗಿ ಸೇರಿಸಿ, ನಗರಸಭಾ ಮಾಜಿ ಸದಸ್ಯ ಜಿ.ಮುನಿಕೃಷ್ಣಪ್ಪ ಎಂಬುವರ ಹೆಸರಿಗೆ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ.</p>.<p>ಈ ಬಗ್ಗೆ ಈ ಅವಧಿಯ ಅಧ್ಯಕ್ಷ ಎ.ಗಜೇಂದ್ರ ಅವರನ್ನು ವಿಚಾರಿಸಲಾಗಿ ‘ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಭೆಯಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಇದು ಪೌರಾಯುಕ್ತ ಮನ್ಸೂರ್ ಅಲಿ ಅವರ ಕೈವಾಡ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಸದಸ್ಯರನ್ನು ವಿಚಾರಿಸಿದಾಗ ಸಭೆ ಅಥವಾ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಲ್ಲ ಸದಸ್ಯರು ಹಾಗೂ ಅಧ್ಯಕ್ಷರ ವಿಚಾರಣೆ ನಡೆಸಲು ತಮ್ಮಲ್ಲಿ ಕೋರುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<p>ಈ ನಿವೇಶನ ಪಡೆಯಲು ಈ ಹಿಂದೆ ಕೆಲವರು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯ ಸಾರ್ವಜನಿಕ ಪ್ರಕಟಣೆ ಸಹ ಹೊರಡಿಸಿತ್ತು.</p>.<p>ಈ ಸ್ವತ್ತು 1988-89ನೇ ಸಾಲಿನ ಅಸೆಸ್ಮೆಂಟ್ ಪುಸ್ತಕದಲ್ಲಿ 30*40 ಅಡಿ ಅಳತೆಯ ನಿವೇಶನಕ್ಕೆ ಕೆಲವು ವ್ಯಕ್ತಿಗಳ ಹೆಸರನ್ನು ಅಕ್ರಮವಾಗಿ ನಮೂದಿಸಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಈ ಸ್ವತ್ತಿನ ಹಕ್ಕುಳ್ಳವರು (ಕ್ಲೈಮ್ದಾರರು) ಯಾರಾದರೂ ಇದ್ದರೆ, ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ದಾಖಲಾತಿ ಸಲ್ಲಿಸಲು ಮತ್ತು ಈ ಅವಧಿ ಮುಗಿದ ಮೇಲೆ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳಾಗಲೀ ಈ ಸ್ವತ್ತಿನ ಬಗ್ಗೆ ಹಕ್ಕುದಾರರು ಎಂದು ಪ್ರತಿಪಾದಿಸಿದರೆ ಪರಿಗಣಿಸುವುದಿಲ್ಲ ಎಂಬ ಅಂಶದೊಂದಿಗೆ ಪ್ರಕಟಣೆ ಸಹ ಹೊರಡಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಹಿಂದಿನ ಪತ್ರಿಕಾ ಪ್ರಕಟಣೆಯನ್ನೂ ಅಡಕಗೊಳಿಸಿದ್ದಾರೆ.</p>.<p>ತದನಂತರ ಯಾರೂ ದಾಖಲೆಗಳನ್ನು ಕಾಲಾವಧಿಯಲ್ಲಿ ಸಲ್ಲಿಸದ ಕಾರಣ ನಗರಸಭೆಯಿಂದ ‘ಇದು ನಗರಸಭೆ ಆಸ್ತಿ’ ಎಂದು ನಾಮಫಲಕ ಅಳವಡಿಸಲಾಗಿದೆ. ಇಂದಿಗೂ ನಾಮಫಲಕ ಹಾಗೆಯೇ ಇದೆ.</p>.<p>ಈ ಬಡಾವಣೆಯು 50 ವರ್ಷಗಳ ಹಿಂದಿನ ಬಡಾವಣೆಯಾಗಿದೆ. ಮುನಿಸಿಫಲ್ ಬಡಾವಣೆ ಎಂದು ನಾಮಕರಣವಾಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರತಿಷ್ಠಿತ ಬಡಾವಣೆ ಆಗಿರುತ್ತದೆ. ಸದರಿ ಮೂಲೆ ನಿವೇಶನದ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಅಂದಾಜು ₹70 ಲಕ್ಷಕ್ಕೂ ಹೆಚ್ಚಿಗೆ ಇರುತ್ತದೆ. ಆದರೆ ಈ ಪರಭಾರೆ ವ್ಯವಹಾರದಲ್ಲಿ ಪೌರಾಯುಕ್ತರು ಅವ್ಯವಹಾರ ಮಾಡಿರಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.</p>.<p>ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿವೇಶನ ಮಂಜೂರಾತಿಯನ್ನು ರದ್ದುಗೊಳಿಸಬೇಕು ಎಂದು ಅಮೀರ್ ಮಹಮದ್ ಸಾಧಿಕ್ ದೂರಿನಲ್ಲಿ ವಿವರಿಸಿದ್ದಾರೆ. </p>
<p><strong>ಚಿಕ್ಕಬಳ್ಳಾಪುರ</strong>: ನಗರಸಭೆಗೆ ಸೇರಿದ ಮೂಲೆ ನಿವೇಶನವನ್ನು ಪೌರಾಯುಕ್ತರು ಅಕ್ರಮವಾಗಿ ಪರಭಾರೆ ಮಾಡುತ್ತಿರುವುದನ್ನು ಕೂಡಲೇ ರದ್ದುಮಾಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್ ದೂರು ಸಲ್ಲಿಸಿದ್ದಾರೆ.</p>.<p>ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಮತ್ತು ನಗರ ಯೋಜನಾ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದಾರೆ.</p>.<p>ಚಿಕ್ಕಬಳ್ಳಾಪುರ ನಗರಸಭೆಯ ವಾರ್ಡ್ ಸಂಖ್ಯೆ 6ರ ಮುನ್ಸಿಪಲ್ ಬಡಾವಣೆಯ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿರುವ ನಗರಸಭೆ ಆಸ್ತಿಸಂಖ್ಯೆ: 1478, 41*28 ಅಡಿಗಳ ಮೂಲೆ ನಿವೇಶನವನ್ನು ಪೌರಾಯುಕ್ತ ಮನ್ಸೂರ್ ಅಲಿ ಕೇವಲ ₹26,268 ಪಾವತಿಸಿ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ. ಈ ನಿವೇಶನ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.</p>.<p>ನಿವೇಶನ ಪರಭಾರೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವಂತಹ ವಿಷಯಗಳ ಅಂತಿಮ ವಿಷಯವನ್ನಾಗಿ ಸೇರಿಸಿ, ನಗರಸಭಾ ಮಾಜಿ ಸದಸ್ಯ ಜಿ.ಮುನಿಕೃಷ್ಣಪ್ಪ ಎಂಬುವರ ಹೆಸರಿಗೆ ಬದಲಿ ನಿವೇಶನವನ್ನು ನೀಡಲು ಅನುಮೋದಿಸಿರುವುದಾಗಿ ದೃಢೀಕರಿಸಿದ್ದಾರೆ.</p>.<p>ಈ ಬಗ್ಗೆ ಈ ಅವಧಿಯ ಅಧ್ಯಕ್ಷ ಎ.ಗಜೇಂದ್ರ ಅವರನ್ನು ವಿಚಾರಿಸಲಾಗಿ ‘ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಭೆಯಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಇದು ಪೌರಾಯುಕ್ತ ಮನ್ಸೂರ್ ಅಲಿ ಅವರ ಕೈವಾಡ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಸದಸ್ಯರನ್ನು ವಿಚಾರಿಸಿದಾಗ ಸಭೆ ಅಥವಾ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಲ್ಲ ಸದಸ್ಯರು ಹಾಗೂ ಅಧ್ಯಕ್ಷರ ವಿಚಾರಣೆ ನಡೆಸಲು ತಮ್ಮಲ್ಲಿ ಕೋರುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<p>ಈ ನಿವೇಶನ ಪಡೆಯಲು ಈ ಹಿಂದೆ ಕೆಲವರು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯ ಸಾರ್ವಜನಿಕ ಪ್ರಕಟಣೆ ಸಹ ಹೊರಡಿಸಿತ್ತು.</p>.<p>ಈ ಸ್ವತ್ತು 1988-89ನೇ ಸಾಲಿನ ಅಸೆಸ್ಮೆಂಟ್ ಪುಸ್ತಕದಲ್ಲಿ 30*40 ಅಡಿ ಅಳತೆಯ ನಿವೇಶನಕ್ಕೆ ಕೆಲವು ವ್ಯಕ್ತಿಗಳ ಹೆಸರನ್ನು ಅಕ್ರಮವಾಗಿ ನಮೂದಿಸಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಈ ಸ್ವತ್ತಿನ ಹಕ್ಕುಳ್ಳವರು (ಕ್ಲೈಮ್ದಾರರು) ಯಾರಾದರೂ ಇದ್ದರೆ, ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ದಾಖಲಾತಿ ಸಲ್ಲಿಸಲು ಮತ್ತು ಈ ಅವಧಿ ಮುಗಿದ ಮೇಲೆ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳಾಗಲೀ ಈ ಸ್ವತ್ತಿನ ಬಗ್ಗೆ ಹಕ್ಕುದಾರರು ಎಂದು ಪ್ರತಿಪಾದಿಸಿದರೆ ಪರಿಗಣಿಸುವುದಿಲ್ಲ ಎಂಬ ಅಂಶದೊಂದಿಗೆ ಪ್ರಕಟಣೆ ಸಹ ಹೊರಡಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಹಿಂದಿನ ಪತ್ರಿಕಾ ಪ್ರಕಟಣೆಯನ್ನೂ ಅಡಕಗೊಳಿಸಿದ್ದಾರೆ.</p>.<p>ತದನಂತರ ಯಾರೂ ದಾಖಲೆಗಳನ್ನು ಕಾಲಾವಧಿಯಲ್ಲಿ ಸಲ್ಲಿಸದ ಕಾರಣ ನಗರಸಭೆಯಿಂದ ‘ಇದು ನಗರಸಭೆ ಆಸ್ತಿ’ ಎಂದು ನಾಮಫಲಕ ಅಳವಡಿಸಲಾಗಿದೆ. ಇಂದಿಗೂ ನಾಮಫಲಕ ಹಾಗೆಯೇ ಇದೆ.</p>.<p>ಈ ಬಡಾವಣೆಯು 50 ವರ್ಷಗಳ ಹಿಂದಿನ ಬಡಾವಣೆಯಾಗಿದೆ. ಮುನಿಸಿಫಲ್ ಬಡಾವಣೆ ಎಂದು ನಾಮಕರಣವಾಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರತಿಷ್ಠಿತ ಬಡಾವಣೆ ಆಗಿರುತ್ತದೆ. ಸದರಿ ಮೂಲೆ ನಿವೇಶನದ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಅಂದಾಜು ₹70 ಲಕ್ಷಕ್ಕೂ ಹೆಚ್ಚಿಗೆ ಇರುತ್ತದೆ. ಆದರೆ ಈ ಪರಭಾರೆ ವ್ಯವಹಾರದಲ್ಲಿ ಪೌರಾಯುಕ್ತರು ಅವ್ಯವಹಾರ ಮಾಡಿರಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.</p>.<p>ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿವೇಶನ ಮಂಜೂರಾತಿಯನ್ನು ರದ್ದುಗೊಳಿಸಬೇಕು ಎಂದು ಅಮೀರ್ ಮಹಮದ್ ಸಾಧಿಕ್ ದೂರಿನಲ್ಲಿ ವಿವರಿಸಿದ್ದಾರೆ. </p>