ಚೇಳೂರು: ತಾಲ್ಲೂಕಿನ ನಿವೃತ್ತ ವೈದ್ಯಾಧಿಕಾರಿ ಡಾ.ಆರ್. ಸುಬ್ರಮಣ್ಯಂ ಅಯ್ಯರ್ ಅವರ ನಿಧನದ ಹಿನ್ನೆಲೆಯಲ್ಲಿ ಗ್ರಾಮದ ಎಂ.ಜಿ. ವೃತ್ತದಲ್ಲಿ ಅವರ ಅಭಿಮಾನಿಗಳಿಂದ ಅನ್ನದಾನ ಕಾರ್ಯಕ್ರಮ ನಡೆಯಿತು.
‘ಅಯ್ಯರ್ ಅವರು ಗ್ರಾಮ ಪಂಚಾಯಿತಿಯಲ್ಲಿ ಗೆದ್ದು ಜನಪರ ಕೆಲಸ ಮಾಡಿ ಉತ್ತಮ ಹೆಸರುಗಳಿಸಿದ್ದರು. ರಾಜಕೀಯದ ಜೊತೆಗೆ ವೈದ್ಯ ವೃತ್ತಿಯನ್ನೂ ಮಾಡುತ್ತಿದ್ದರು. ರೋಗಗಳ ನೋವಿಗೆ ಸ್ಪಂದಿಸುತ್ತಿದ್ದ ಅವರ ಮಾನವೀಯ ಮೌಲ್ಯಗಳು ಎಲ್ಲರಿಗೂ ಮಾದರಿಯಾಗಿವೆ’ ಎಂದು ಅಭಿಮಾನಿಗಳು ಸ್ಮರಿಸಿದರು.