‘ಈ ಕಾರ್ಯಕ್ರಮಕ್ಕೆ ಒಟ್ಟಾರೆ ₹ 5 ಕೋಟಿ ವೆಚ್ಚವಾಗಲಿದೆ. ಕಾಂಗ್ರೆಸ್ ಮುಖಂಡರು, ಶಾಸಕರು, ಹಿತೈಷಿಗಳು ನೀಡಿದ ದೇಣಿಗೆಯನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ. ‘ಸೇನಾನಿಗಳು’ ಮನೆಮನೆಗೆ ತೆರಳಿ ದೇಹದ ಉಷ್ಣತೆ, ಆಮ್ಲಜನಕ ಪ್ರಮಾಣ ಸಹಿತ ಪ್ರಾಥಮಿಕ ತಪಾಸಣೆ ಮಾಡುವರು. ಅನಾರೋಗ್ಯ, ಸೋಂಕಿನ ಲಕ್ಷಣಗಳಿದ್ದರೆ ಆರೋಗ್ಯ ಸಿಬ್ಬಂದಿ, ಸ್ಥಳೀಯ ಆಡಳಿತ, ಸಂಬಂಧಪಟ್ಟವರಿಗೆ ಮಾಹಿತಿ ನೀಡುವರು’ ಎಂದರು.