ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಾಥ್ ಮಾತನಾಡಿ, ‘ಪ್ರತಿ ಸೋಮವಾರ ಸುರಕ್ಷತಾ ಸಭೆ ನಡೆಸಿ ಸುರಕ್ಷತಾ ಕಿಟ್ ಉಪಯೋಗಿಸುತ್ತೇವೆ ಎಂದು ಪ್ರಮಾಣ ವಚನ ಮಾಡಿಸುತ್ತೇವೆ. ಕಡ್ಡಾಯವಾಗಿ ಸುರಕ್ಷತಾ ಕಿಟ್ಗಳನ್ನು ಬಳಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೂ ಕೆಲವರು ಸುರಕ್ಷತಾ ಕಿಟ್ ಉಪಯೋಗಿಸುವುದಿಲ್ಲ. ತೊಂದರೆಯಾದರೆ ನಮ್ಮ ಮೇಲೆ ಕ್ರಮ ಜರುಗಿಸುತ್ತಾರೆ. ಹೀಗಾಗಿ ಸುರಕ್ಷತಾ ಕಿಟ್ ಬಳಸದವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.