<p><strong>ಚಿಕ್ಕಬಳ್ಳಾಪುರ:</strong> ಕಳಪೆ ಟೊಮೆಟೊ ಸಸಿಗಳನ್ನು ರೈತರಿಗೆ ನೀಡಿದ ನರ್ಸರಿ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.</p>.<p>ಗುಡಿಬಂಡೆ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ರೈತ ಆದಿನಾರಾಯಣರೆಡ್ಡಿ ಟೊಮೆಟೊ ಬೆಳೆಯುವ ಸಲುವಾಗಿ ನರ್ಸರಿ ಮಾಲೀಕ ಚಲಪತಿ ಅವರಿಂದ 8 ಸಾವಿರ ಟೊಮೆಟೊ ಸಸಿಗಳನ್ನು ಖರೀದಿಸಿದ್ದರು. </p>.<p>ನಾಟಿ ಮಾಡಿದ ನಂತರ ನಿಗದಿತ ಬೇಸಾಯ ಕ್ರಮಗಳನ್ನು ಅನುಸರಿಸಿದರು. ಆದರೂ ಸಣ್ಣ ಗಾತ್ರದ ಟೊಮೆಟೊ ಫಸಲು ಬಂದಿತು. ಇದರಿಂದ ನಷ್ಟವಾಗಿದೆ. ನ್ಯಾಯದೊರಕಿಸಿಕೊಡಿ ಎಂದು ಆದಿನಾರಾಯಣರೆಡ್ಡಿ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ಮತ್ತು ಸದಸ್ಯರಾದ ಎಚ್.ಜನಾರ್ದನ, ನರ್ಸರಿ ಮಾಲೀಕ ಚಲಪತಿ ಮತ್ತು ಟೊಮೆಟೊ ಬೀಜ ಸರಬರಾಜು ಮಾಡಿದ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. </p>.<p>ವಿಚಾರಣೆ ವೇಳೆ ನರ್ಸರಿ ಮಾಲೀಕರು ಕಳಪೆ ಟೊಮೆಟೊ ಸಸಿಗಳನ್ನು ಆದಿನಾರಾಯಣರೆಡ್ಡಿ ಅವರಿಗೆ ನೀಡಿರುವುದು ದೃಢವಾಗಿದೆ. ಚಲಪತಿ ಅವರ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಸಾಬೀತಾಗಿದೆ.</p>.<p>ಆದಿನಾರಾಯಣರೆಡ್ಡಿ ಅವರಿಗೆ ಟೊಮೆಟೊ ಬೆಳೆಯಲ್ಲಿ ಆದ ನಷ್ಟಕ್ಕೆ ಚಲಪತಿ ₹ 1,66,871 ಮತ್ತು ಇದಕ್ಕೆ 2024ರ ಜೂ.18ರಿಂದ ಶೇ 8ರ ಬಡ್ಡಿ ಮತ್ತು ದಾವೆ ವೆಚ್ಚ ₹ 8 ಸಾವಿರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಕಳಪೆ ಟೊಮೆಟೊ ಸಸಿಗಳನ್ನು ರೈತರಿಗೆ ನೀಡಿದ ನರ್ಸರಿ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.</p>.<p>ಗುಡಿಬಂಡೆ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ರೈತ ಆದಿನಾರಾಯಣರೆಡ್ಡಿ ಟೊಮೆಟೊ ಬೆಳೆಯುವ ಸಲುವಾಗಿ ನರ್ಸರಿ ಮಾಲೀಕ ಚಲಪತಿ ಅವರಿಂದ 8 ಸಾವಿರ ಟೊಮೆಟೊ ಸಸಿಗಳನ್ನು ಖರೀದಿಸಿದ್ದರು. </p>.<p>ನಾಟಿ ಮಾಡಿದ ನಂತರ ನಿಗದಿತ ಬೇಸಾಯ ಕ್ರಮಗಳನ್ನು ಅನುಸರಿಸಿದರು. ಆದರೂ ಸಣ್ಣ ಗಾತ್ರದ ಟೊಮೆಟೊ ಫಸಲು ಬಂದಿತು. ಇದರಿಂದ ನಷ್ಟವಾಗಿದೆ. ನ್ಯಾಯದೊರಕಿಸಿಕೊಡಿ ಎಂದು ಆದಿನಾರಾಯಣರೆಡ್ಡಿ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ಮತ್ತು ಸದಸ್ಯರಾದ ಎಚ್.ಜನಾರ್ದನ, ನರ್ಸರಿ ಮಾಲೀಕ ಚಲಪತಿ ಮತ್ತು ಟೊಮೆಟೊ ಬೀಜ ಸರಬರಾಜು ಮಾಡಿದ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. </p>.<p>ವಿಚಾರಣೆ ವೇಳೆ ನರ್ಸರಿ ಮಾಲೀಕರು ಕಳಪೆ ಟೊಮೆಟೊ ಸಸಿಗಳನ್ನು ಆದಿನಾರಾಯಣರೆಡ್ಡಿ ಅವರಿಗೆ ನೀಡಿರುವುದು ದೃಢವಾಗಿದೆ. ಚಲಪತಿ ಅವರ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಸಾಬೀತಾಗಿದೆ.</p>.<p>ಆದಿನಾರಾಯಣರೆಡ್ಡಿ ಅವರಿಗೆ ಟೊಮೆಟೊ ಬೆಳೆಯಲ್ಲಿ ಆದ ನಷ್ಟಕ್ಕೆ ಚಲಪತಿ ₹ 1,66,871 ಮತ್ತು ಇದಕ್ಕೆ 2024ರ ಜೂ.18ರಿಂದ ಶೇ 8ರ ಬಡ್ಡಿ ಮತ್ತು ದಾವೆ ವೆಚ್ಚ ₹ 8 ಸಾವಿರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>