<p><strong>ಚಿಕ್ಕಬಳ್ಳಾಪುರ</strong>: ನಗರ ಹೊರವಲಯದ ಅಣಕನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p>ಹೈದರಾಬಾದ್ನ ರಾಹುಲ್ ಕುಮಾರ್ ಶರ್ಮಾ, ನಲ್ಲೂರಿನ ಹನುಮ ಸಮುದ್ರಪೇಟದ ಸೈಯದ್ ದಾವೂದ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಜಾತವಾರ ಗ್ರಾಮದ ಅಲ್ಲಾಭಕ್ಷ್ ಬಂಧಿತರು.</p>.<p>ಆರೋಪಿಗಳಿಂದ 20 ಗ್ರಾಂನ ಚಿನ್ನದ ನಕ್ಲೇಸ್, ₹25,000 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಅಣಕನೂರಿನ ನಾಗರಾಜು ಎಂಬುವವರ ಮನೆಯಲ್ಲಿ ನ.27ರಂದು ಬೆಳಗಿನ ಸಮಯದಲ್ಲಿ ಚಿನ್ನಾಭರಣ ಮತ್ತು ₹2.50 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. </p>.<p>ಆರೋಪಿಗಳ ಪತ್ತೆಗೆ ಸಿಪಿಐ ರಂಜನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. </p>
<p><strong>ಚಿಕ್ಕಬಳ್ಳಾಪುರ</strong>: ನಗರ ಹೊರವಲಯದ ಅಣಕನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p>ಹೈದರಾಬಾದ್ನ ರಾಹುಲ್ ಕುಮಾರ್ ಶರ್ಮಾ, ನಲ್ಲೂರಿನ ಹನುಮ ಸಮುದ್ರಪೇಟದ ಸೈಯದ್ ದಾವೂದ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಜಾತವಾರ ಗ್ರಾಮದ ಅಲ್ಲಾಭಕ್ಷ್ ಬಂಧಿತರು.</p>.<p>ಆರೋಪಿಗಳಿಂದ 20 ಗ್ರಾಂನ ಚಿನ್ನದ ನಕ್ಲೇಸ್, ₹25,000 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಅಣಕನೂರಿನ ನಾಗರಾಜು ಎಂಬುವವರ ಮನೆಯಲ್ಲಿ ನ.27ರಂದು ಬೆಳಗಿನ ಸಮಯದಲ್ಲಿ ಚಿನ್ನಾಭರಣ ಮತ್ತು ₹2.50 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. </p>.<p>ಆರೋಪಿಗಳ ಪತ್ತೆಗೆ ಸಿಪಿಐ ರಂಜನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. </p>