<p>ಚಿಕ್ಕಬಳ್ಳಾಪುರ: ಲಂಟಾನ ಕಾಡನ್ನು ನಾಶ ಮಾಡುತ್ತಿರುವ ಪ್ರಬೇಧ. ಬೇಲಿಯಂತೆ ಬೆಳೆಯುತ್ತಿರುವ ಇದರ ಹಾವಳಿ ನಂದಿಬೆಟ್ಟದ ಸುತ್ತಮುತ್ತ ಹೆಚ್ಚಿದೆ. ಇಂತಿಪ್ಪ ಲಂಟಾನ ಕಳೆಯನ್ನು ನಾಶ ಮಾಡಲು ಜಿಲ್ಲಾ ಅರಣ್ಯ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ.</p>.<p>ನಂದಿಬೆಟ್ಟ ಸಮೀಪದ ಸಿಂಗಾಟ ಕದಿರೇನಹಳ್ಳಿ ಗ್ರಾಮದ ಸ್ತ್ರೀ ಶಕ್ತಿ ಸಂಘಗಳ 15 ಮಹಿಳೆಯರಿಗೆ ‘ಕರಕುಶಲ ಕಲೆ–ಸ್ವಯಂ ಉದ್ಯೋಗ’ ಯೋಜನೆಯಡಿ ನಂದಿಗಿರಿಧಾಮದಲ್ಲಿ ತರಬೇತಿ ನೀಡಲಾಗುತ್ತಿದೆ.</p>.<p>ಲಂಟಾನದಿಂದಬುಟ್ಟಿ, ಮಂಕರಿ, ಹೂದಾನಿ, ಕುರ್ಚಿ, ಟೀಪಾಯಿ, ಹೂವಿನ ಬುಟ್ಟಿ, ಮಂಚ, ಪೆನ್ ಮತ್ತು ಪುಸ್ತಕಗಳನ್ನಿಡಕು ಕಪಾಟು ಸೇರಿದಂತೆ ವಿವಿಧಪೀಠೋಪಕರಣಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ.</p>.<p>ಈ ತರಬೇತಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ನಿತ್ಯ ₹ 400 ಗೌರವ ಧನ ನೀಡಲಾಗುತ್ತಿದೆ. ಪರಿಣತರಿಂದ ಪೀಠೋಪಕರಣಗಳ ತಯಾರಿಕೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಮಹಿಳೆಯರು ಕಾಡಿನಲ್ಲಿರುವ ಲಂಟಾನವನ್ನು ತಂದು ಇಲ್ಲಿ ಅವುಗಳಿಗೆ ಹೊಸ ರೂಪು ನೀಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರಿ ಪೀಠೋಪಕರಣಗಳ ತಯಾರಿಕೆಗೆ ಅಗತ್ಯವಿರುವ ಕಿಟ್ ಹಾಗೂಬಾಯ್ಲರ್ ಸಹ ನೀಡಲಾಗಿದೆ.45 ದಿನಗಳ ತರಬೇತಿಯ ನಂತರ ಮಹಿಳೆಯರು ಸ್ವ ಉದ್ಯೋಗದಲ್ಲಿ<br />ತೊಡಗಬಹುದು.</p>.<p>ಅಲಂಕಾರಿಕ ಮತ್ತು ಪೀಠೋಪಕರಣಗಳ ತಯಾರಿಕೆ ತರಬೇತಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎನ್ನುವ ಆಶಯ ಯೋಜನೆಯಲ್ಲಿದೆ. ಕಸದಿಂದ ರಸ ಎನ್ನುವಂತೆ ಕಾಡಿನ ಕಳೆ ವಸ್ತುಗಳ ರೂಪು ಪಡೆಯುತ್ತಿದೆ.</p>.<p>ನಂದಿಬೆಟ್ಟದ ಸುತ್ತಮುತ್ತ ಹೇರಳವಾಗಿ ಲಂಟಾನ ದೊರೆಯುತ್ತದೆ. ಇದನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದರಿಂದ ಲಂಟಾನ ಕಳೆ ಸಹ ನಾಶವಾಗುತ್ತದೆ. ಮಹಿಳೆಯರಿಗೆ ಉದ್ಯೋಗ ದೊರೆಯುತ್ತದೆ. ಆ ಮೂಲಕ ಆರ್ಥಿಕ ಅನುಕೂಲವಾಗುತ್ತದೆ.</p>.<p>ಗಿರಿಧಾಮಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ಜನರು ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ಸಹ ಅಧಿಕಾರಿಗಳು<br />ಆಲೋಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಲಂಟಾನ ಕಾಡನ್ನು ನಾಶ ಮಾಡುತ್ತಿರುವ ಪ್ರಬೇಧ. ಬೇಲಿಯಂತೆ ಬೆಳೆಯುತ್ತಿರುವ ಇದರ ಹಾವಳಿ ನಂದಿಬೆಟ್ಟದ ಸುತ್ತಮುತ್ತ ಹೆಚ್ಚಿದೆ. ಇಂತಿಪ್ಪ ಲಂಟಾನ ಕಳೆಯನ್ನು ನಾಶ ಮಾಡಲು ಜಿಲ್ಲಾ ಅರಣ್ಯ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ.</p>.<p>ನಂದಿಬೆಟ್ಟ ಸಮೀಪದ ಸಿಂಗಾಟ ಕದಿರೇನಹಳ್ಳಿ ಗ್ರಾಮದ ಸ್ತ್ರೀ ಶಕ್ತಿ ಸಂಘಗಳ 15 ಮಹಿಳೆಯರಿಗೆ ‘ಕರಕುಶಲ ಕಲೆ–ಸ್ವಯಂ ಉದ್ಯೋಗ’ ಯೋಜನೆಯಡಿ ನಂದಿಗಿರಿಧಾಮದಲ್ಲಿ ತರಬೇತಿ ನೀಡಲಾಗುತ್ತಿದೆ.</p>.<p>ಲಂಟಾನದಿಂದಬುಟ್ಟಿ, ಮಂಕರಿ, ಹೂದಾನಿ, ಕುರ್ಚಿ, ಟೀಪಾಯಿ, ಹೂವಿನ ಬುಟ್ಟಿ, ಮಂಚ, ಪೆನ್ ಮತ್ತು ಪುಸ್ತಕಗಳನ್ನಿಡಕು ಕಪಾಟು ಸೇರಿದಂತೆ ವಿವಿಧಪೀಠೋಪಕರಣಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ.</p>.<p>ಈ ತರಬೇತಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ನಿತ್ಯ ₹ 400 ಗೌರವ ಧನ ನೀಡಲಾಗುತ್ತಿದೆ. ಪರಿಣತರಿಂದ ಪೀಠೋಪಕರಣಗಳ ತಯಾರಿಕೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಮಹಿಳೆಯರು ಕಾಡಿನಲ್ಲಿರುವ ಲಂಟಾನವನ್ನು ತಂದು ಇಲ್ಲಿ ಅವುಗಳಿಗೆ ಹೊಸ ರೂಪು ನೀಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರಿ ಪೀಠೋಪಕರಣಗಳ ತಯಾರಿಕೆಗೆ ಅಗತ್ಯವಿರುವ ಕಿಟ್ ಹಾಗೂಬಾಯ್ಲರ್ ಸಹ ನೀಡಲಾಗಿದೆ.45 ದಿನಗಳ ತರಬೇತಿಯ ನಂತರ ಮಹಿಳೆಯರು ಸ್ವ ಉದ್ಯೋಗದಲ್ಲಿ<br />ತೊಡಗಬಹುದು.</p>.<p>ಅಲಂಕಾರಿಕ ಮತ್ತು ಪೀಠೋಪಕರಣಗಳ ತಯಾರಿಕೆ ತರಬೇತಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎನ್ನುವ ಆಶಯ ಯೋಜನೆಯಲ್ಲಿದೆ. ಕಸದಿಂದ ರಸ ಎನ್ನುವಂತೆ ಕಾಡಿನ ಕಳೆ ವಸ್ತುಗಳ ರೂಪು ಪಡೆಯುತ್ತಿದೆ.</p>.<p>ನಂದಿಬೆಟ್ಟದ ಸುತ್ತಮುತ್ತ ಹೇರಳವಾಗಿ ಲಂಟಾನ ದೊರೆಯುತ್ತದೆ. ಇದನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದರಿಂದ ಲಂಟಾನ ಕಳೆ ಸಹ ನಾಶವಾಗುತ್ತದೆ. ಮಹಿಳೆಯರಿಗೆ ಉದ್ಯೋಗ ದೊರೆಯುತ್ತದೆ. ಆ ಮೂಲಕ ಆರ್ಥಿಕ ಅನುಕೂಲವಾಗುತ್ತದೆ.</p>.<p>ಗಿರಿಧಾಮಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ಜನರು ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ಸಹ ಅಧಿಕಾರಿಗಳು<br />ಆಲೋಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>