ಗೌನಿವಾರಪಲ್ಲಿ ಗ್ರಾಮದ ಪ್ರಭಾಕರ್ ಎಂಬುವವರ ಮಗ ಜಿ.ಪಿ.ಚೇತನ್ ಗೌಡ (4), ಮಗು ಮನೆ ಮುಂದೆ ನಿಂತಿದ್ದಾಗ ಸೋಮಶೇಖರ್ ಎಂಬುವವರು ಟ್ರ್ಯಾಕ್ಟರ್ ಅನ್ನು ಅತಿ ವೇಗವಾಗಿ ಚಾಲನೆ ಮಾಡಿದ್ದಾರೆ. ಆ ವೇಳೆ ಟ್ರ್ಯಾಕ್ಟರ್ ಚಕ್ರ ಮಗುವಿಗೆ ತಾಗಿ, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪ್ರಭಾಕರ್ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.