<p><strong>ಚಿಂತಾಮಣಿ: </strong>ನಗರದ ಹೊರವಲಯದ ಗಾಂಧಿನಗರ ಊಲವಾಡಿ ರಸ್ತೆಯಲ್ಲಿರುವ ಹಳೆಯ ಕಟ್ಟಡದಲ್ಲಿ ₹ 2 ಸಾವಿರ ಮುಖಬೆಲೆಯ ಖೋಟಾ ನೋಟುಗಳ ಮುದ್ರಣವಾಗುತ್ತಿದ್ದು ಮತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ನಗರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಗರ ಮತ್ತು ತಾಲ್ಲೂಕಿನ ಹಳ್ಳಿಗಳಲ್ಲಿ ಖೋಟಾ ನೋಟುಗಳ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಖೋಟಾ ನೋಡು ಜಾಲ ಮತ್ತಷ್ಟು ವಿಸ್ತಾರವಾಗಿದೆಯೇ ಎನ್ನುವ ಅನುಮಾನಗಳು<br />ಮೂಡಿಸಿದೆ.</p>.<p>ದೂರದ ನಗರಗಳಲ್ಲಿ ಖೋಟಾ ನೋಟುಗಳ ಮುದ್ರಣ, ಚಲಾವಣೆ, ಬಂಧನ ಮತ್ತಿತರ ವರದಿಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದ ನಾಗರಿಕರಿಗೆ ನಮ್ಮ ನಗರದಲ್ಲಿ ಇಂತಹ ಜಾಲ ನಡೆಯುತ್ತಿದೆ ಎಂಬ ಸುದ್ದಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕ ಸಂತೋಷ್ ಬಾಬು.</p>.<p>ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿ ಆಗಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಬಾರ್ನ್ ಫೌಂಡೇಶನ್ ಹಳೆಯ ಪಾಳುಬಿದ್ದ ಕಟ್ಟಡದಂತಿದೆ. ಕಾಂಪೌಂಡ್ ಒಂದು ಭಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವಿದೆ. ಅದು ಪೂರ್ಣಗೊಂಡಿಲ್ಲ. ಸುತ್ತಮುತ್ತಲು ಯಾವ ಮನೆಗಳಿಲ್ಲ. ಪಕ್ಕದಲ್ಲಿ ಒಂದು ಚರ್ಚ್ ಇದೆ. ಆ ಕಡೆ ಯಾರು ಸುಳಿಯುವುದಿಲ್ಲ ಎಂದು ಈ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು<br />ಹೇಳುತ್ತಾರೆ.</p>.<p>ಹೆಚ್ಚಿನ ಹಣದ ಆಸೆಗಾಗಿ ಸ್ಥಳೀಯರು ಈ ಕೆಲಸ ಮಾಡುತ್ತಿರಬಹುದು. ಇದರ ಹಿಂದೆ ದೊಡ್ಡ ಮತ್ತು ವಿಸ್ತಾರವಾದ ಜಾಲ ಇರಬೇಕು. ಪೊಲೀಸರ ತನಿಖೆಯಿಂದ ಇವರನ್ನು ಮಟ್ಟ ಹಾಕಬೇಕಾಗಿದೆ. ಯಾರಿಗೂ ಯಾವುದೇ ಅನುಮಾನ ಬರದಂತೆ ಒಬ್ಬ ಕಾವಲುಗಾರ ಮಾತ್ರ ಕಟ್ಟಡ ಕಾಯುವವನಂತೆ ನಟಿಸುತ್ತಿದ್ದನು ಎನ್ನುವುದು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ನುಡಿಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ನಗರದ ಹೊರವಲಯದ ಗಾಂಧಿನಗರ ಊಲವಾಡಿ ರಸ್ತೆಯಲ್ಲಿರುವ ಹಳೆಯ ಕಟ್ಟಡದಲ್ಲಿ ₹ 2 ಸಾವಿರ ಮುಖಬೆಲೆಯ ಖೋಟಾ ನೋಟುಗಳ ಮುದ್ರಣವಾಗುತ್ತಿದ್ದು ಮತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ನಗರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಗರ ಮತ್ತು ತಾಲ್ಲೂಕಿನ ಹಳ್ಳಿಗಳಲ್ಲಿ ಖೋಟಾ ನೋಟುಗಳ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಖೋಟಾ ನೋಡು ಜಾಲ ಮತ್ತಷ್ಟು ವಿಸ್ತಾರವಾಗಿದೆಯೇ ಎನ್ನುವ ಅನುಮಾನಗಳು<br />ಮೂಡಿಸಿದೆ.</p>.<p>ದೂರದ ನಗರಗಳಲ್ಲಿ ಖೋಟಾ ನೋಟುಗಳ ಮುದ್ರಣ, ಚಲಾವಣೆ, ಬಂಧನ ಮತ್ತಿತರ ವರದಿಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದ ನಾಗರಿಕರಿಗೆ ನಮ್ಮ ನಗರದಲ್ಲಿ ಇಂತಹ ಜಾಲ ನಡೆಯುತ್ತಿದೆ ಎಂಬ ಸುದ್ದಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕ ಸಂತೋಷ್ ಬಾಬು.</p>.<p>ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿ ಆಗಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಬಾರ್ನ್ ಫೌಂಡೇಶನ್ ಹಳೆಯ ಪಾಳುಬಿದ್ದ ಕಟ್ಟಡದಂತಿದೆ. ಕಾಂಪೌಂಡ್ ಒಂದು ಭಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವಿದೆ. ಅದು ಪೂರ್ಣಗೊಂಡಿಲ್ಲ. ಸುತ್ತಮುತ್ತಲು ಯಾವ ಮನೆಗಳಿಲ್ಲ. ಪಕ್ಕದಲ್ಲಿ ಒಂದು ಚರ್ಚ್ ಇದೆ. ಆ ಕಡೆ ಯಾರು ಸುಳಿಯುವುದಿಲ್ಲ ಎಂದು ಈ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು<br />ಹೇಳುತ್ತಾರೆ.</p>.<p>ಹೆಚ್ಚಿನ ಹಣದ ಆಸೆಗಾಗಿ ಸ್ಥಳೀಯರು ಈ ಕೆಲಸ ಮಾಡುತ್ತಿರಬಹುದು. ಇದರ ಹಿಂದೆ ದೊಡ್ಡ ಮತ್ತು ವಿಸ್ತಾರವಾದ ಜಾಲ ಇರಬೇಕು. ಪೊಲೀಸರ ತನಿಖೆಯಿಂದ ಇವರನ್ನು ಮಟ್ಟ ಹಾಕಬೇಕಾಗಿದೆ. ಯಾರಿಗೂ ಯಾವುದೇ ಅನುಮಾನ ಬರದಂತೆ ಒಬ್ಬ ಕಾವಲುಗಾರ ಮಾತ್ರ ಕಟ್ಟಡ ಕಾಯುವವನಂತೆ ನಟಿಸುತ್ತಿದ್ದನು ಎನ್ನುವುದು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ನುಡಿಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>