ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದೆ. ಬಿತ್ತನೆಯಾಗಿರುವ ನೆಲಗಡಲೆ ಮತ್ತು ತೊಗರಿ ಬೆಳೆಯು ಸಹ ಮಳೆ ಇಲ್ಲದೆ ಒಣಗುತ್ತಿದೆ. ಅಲ್ಪಾವಳಿ ತಳಿಗಳಾದ ರಾಗಿ ಜೋಳ ಹುರಳಿ ಅಲಸಂದೆಯನ್ನು ಆಗಸ್ಟ್ ಕೊನೆವರೆಗೂ ಬಿತ್ತನೆ ಮಾಡಬಹುದು.
ಅಮರನಾಥರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ. ಚಿಂತಾಮಣಿ
ಕಳೆದ ವರ್ಷವೂ ಬರಗಾಲದಿಂದ ಬೆಳೆಗಳು ನಾಶವಾಗಿದ್ದವು. ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆ ಕೃಷಿಗೆ ನೀರಿನ ಕೊರತೆ ಇದೆ. ಬೆಲೆ ಕುಸಿತದಿಂದ ರೈತರು ಜರ್ಜರಿತರಾಗುತ್ತಿದ್ದಾರೆ