<p><strong>ಶಿಡ್ಲಘಟ್ಟ:</strong> ಸಂಕ್ರಾಂತಿ ಕೃಷಿಕರ ಹಬ್ಬವೂ ಹೌದು. ಬೆಳೆದ ಪೈರು ಫಲಬಿಟ್ಟು ಬಿಸಿಲಿಗೆ ಬಾಗಿ ಕಟಾವಿಗೆ ಬರುವ ಕಾಲವೇ ಮಕರ ಸಂಕ್ರಾಂತಿಯ ಕಾಲ. ರೈತಾಪಿ ವರ್ಗ ಈ ಸಂಕ್ರಾಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.</p>.<p>ಸಂಕ್ರಾಂತಿ ಕೃಷಿ ಪ್ರಧಾನ ಹಬ್ಬವಾದ್ದರಿಂದ ಕೃಷಿ ಕಾರ್ಯದಲ್ಲಿ ರೈತರ ಸಂಗಾತಿಗಳಾದ ಎತ್ತುಗಳನ್ನು ಸಂಕ್ರಾಂತಿಯ ಸಂದರ್ಭದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಹೀಗೆ ಮಾಡುವುದರಿಂದ ಅವುಗಳ ಮೈಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಾಗ ಹಿಡಿದಿರುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂಬ ಭಾವನೆ ಕೂಡ ಇದೆ.</p>.<p>ಎತ್ತುಗಳ ಕೊಂಬುಗಳನ್ನು ಜೀವಿ ಅದಕ್ಕೆ ಬಣ್ಣ ಬಣ್ಣದ ಟೇಪನ್ನು ಕಟ್ಟಿ, ಬಲೂನುಗಳು ಹಾಗೂ ಗೆಜ್ಜೆಯನ್ನು ಕಟ್ಟುತ್ತಾರೆ. ಹೊಸ ಮೂಗುದಾರ, ಹಗ್ಗ, ಕುತ್ತಿಗೆಗೆ ಕರಿದಾರ ಹಾಕಿ ಅಲಂಕರಿಸುವರು.</p>.<p>ಎತ್ತುಗಳು ಕಡಿಮೆಯಾಗುತ್ತಿರುವ ಈ ದಿನಮಾನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯ ರೈತ ನಾರಾಯಣಸ್ವಾಮಿ ಅವರು ತಮ್ಮ ಹಿಂದಿನವರಿಂದ ಬಳುವಳಿಯಾಗಿ ಬಂದ ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಹೊದ್ದಿಕೆ (ಬುರುಕಾ) ಹಾಕಿ ತಮ್ಮ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿದ್ದರು.</p>.<p>‘ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಬುರುಕಾ ನಮ್ಮ ತಾತ ಅಕ್ಕಲಪ್ಪನವರ ಕಾಲದ್ದು. ತಂದೆ ಹನುಮಂತರಾಯಪ್ಪ ಸಹ ಎತ್ತುಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಸಂಕ್ರಾಂತಿಯಂದು ಎತ್ತುಗಳನ್ನು ಅಲಂಕರಿಸುವುದನ್ನು ನಾನು ಅವರಿಂದಲೇ ಕಲಿತದ್ದು. ನಮ್ಮ ತಾತ ಈ ಬಣ್ಣದ ಹೊದಿಕೆಯನ್ನು ನಮ್ಮದೇ ಗ್ರಾಮದ ವೆಂಕಟರೆಡ್ಡಿ ಅವರ ಮನೆಯಿಂದ ತಂದಿದ್ದರು. ಈಗಲೂ ಅದನ್ನು ನಾನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ’ ಎಂದು ಹರಳಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ಸಂಕ್ರಾಂತಿ ಕೃಷಿಕರ ಹಬ್ಬವೂ ಹೌದು. ಬೆಳೆದ ಪೈರು ಫಲಬಿಟ್ಟು ಬಿಸಿಲಿಗೆ ಬಾಗಿ ಕಟಾವಿಗೆ ಬರುವ ಕಾಲವೇ ಮಕರ ಸಂಕ್ರಾಂತಿಯ ಕಾಲ. ರೈತಾಪಿ ವರ್ಗ ಈ ಸಂಕ್ರಾಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.</p>.<p>ಸಂಕ್ರಾಂತಿ ಕೃಷಿ ಪ್ರಧಾನ ಹಬ್ಬವಾದ್ದರಿಂದ ಕೃಷಿ ಕಾರ್ಯದಲ್ಲಿ ರೈತರ ಸಂಗಾತಿಗಳಾದ ಎತ್ತುಗಳನ್ನು ಸಂಕ್ರಾಂತಿಯ ಸಂದರ್ಭದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಹೀಗೆ ಮಾಡುವುದರಿಂದ ಅವುಗಳ ಮೈಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಾಗ ಹಿಡಿದಿರುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂಬ ಭಾವನೆ ಕೂಡ ಇದೆ.</p>.<p>ಎತ್ತುಗಳ ಕೊಂಬುಗಳನ್ನು ಜೀವಿ ಅದಕ್ಕೆ ಬಣ್ಣ ಬಣ್ಣದ ಟೇಪನ್ನು ಕಟ್ಟಿ, ಬಲೂನುಗಳು ಹಾಗೂ ಗೆಜ್ಜೆಯನ್ನು ಕಟ್ಟುತ್ತಾರೆ. ಹೊಸ ಮೂಗುದಾರ, ಹಗ್ಗ, ಕುತ್ತಿಗೆಗೆ ಕರಿದಾರ ಹಾಕಿ ಅಲಂಕರಿಸುವರು.</p>.<p>ಎತ್ತುಗಳು ಕಡಿಮೆಯಾಗುತ್ತಿರುವ ಈ ದಿನಮಾನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯ ರೈತ ನಾರಾಯಣಸ್ವಾಮಿ ಅವರು ತಮ್ಮ ಹಿಂದಿನವರಿಂದ ಬಳುವಳಿಯಾಗಿ ಬಂದ ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಹೊದ್ದಿಕೆ (ಬುರುಕಾ) ಹಾಕಿ ತಮ್ಮ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿದ್ದರು.</p>.<p>‘ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಬುರುಕಾ ನಮ್ಮ ತಾತ ಅಕ್ಕಲಪ್ಪನವರ ಕಾಲದ್ದು. ತಂದೆ ಹನುಮಂತರಾಯಪ್ಪ ಸಹ ಎತ್ತುಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಸಂಕ್ರಾಂತಿಯಂದು ಎತ್ತುಗಳನ್ನು ಅಲಂಕರಿಸುವುದನ್ನು ನಾನು ಅವರಿಂದಲೇ ಕಲಿತದ್ದು. ನಮ್ಮ ತಾತ ಈ ಬಣ್ಣದ ಹೊದಿಕೆಯನ್ನು ನಮ್ಮದೇ ಗ್ರಾಮದ ವೆಂಕಟರೆಡ್ಡಿ ಅವರ ಮನೆಯಿಂದ ತಂದಿದ್ದರು. ಈಗಲೂ ಅದನ್ನು ನಾನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ’ ಎಂದು ಹರಳಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>