<p><strong>ಗುಡಿಬಂಡೆ:</strong> ರಾಷ್ಟ್ರೀಯ ಹೆದ್ದಾರಿ 44ರ ಜಯಂತಿ ಗ್ರಾಮದ ಬಳಿಯ ಹೋಟೆಲ್ ಬಳಿ ನಿಂತಿದ್ದ ಕಂಟೈನರ್ನಲ್ಲಿ ಕಳ್ಳತನವಾಗಿದೆ. ಈ ಸಂಬಂಧ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಟೈನರ್ ಚಾಲಕರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. </p><p>ಸಂದೀಪ್ ಟಾನ್ಸ್ಪೋರ್ಟ್ ಕಂಪನಿಗೆ ಸೇರಿದ ಕಂಟೈನರ್ ಹರಿಯಾಣ ರಾಜ್ಯದ ಗುರುಗ್ರಾಮದಿಂದ ತಮಿಳುನಾಡಿನ ಹೊಸೂರಿಗೆ ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ರಾಜಸ್ತಾನದ ನಜೀರ್ ಹುಸೇನ್ ಮತ್ತು ಹಬೀದ್ ಕಂಟೈನರ್ ಚಾಲಕರಾಗಿದ್ದರು.</p><p>ಸಾಮಗ್ರಿಗಳು ನಿಗದಿತ ಸ್ಥಳ ತಲುಪಿಲ್ಲ.ಅಮೆಜಾನ್ ಕಂಪನಿಯವರು ಕಂಟೈನರ್ ಜಿಪಿಎಸ್ ಮಾಹಿತಿ ಪರಿಶೀಲಿಸಿದಾಗ ಗುಡಿಬಂಡೆ ತಾಲ್ಲೂಕಿನ ಜಯಂತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಹೋಟೆಲ್ವೊಂದರ ಬಳಿ ನಿಂತಿರುವುದು ಪತ್ತೆಯಾಗಿದೆ.</p><p>ಟ್ರಾನ್ಸ್ಪೋರ್ಟ್ ಸಂಸ್ಥೆ ಪ್ರತಿನಿಧಿ ಸ್ಥಳಕ್ಕೆ ಬಂದಿದ್ದು ಕಂಟೈನರ್ ಬೀಗ ಮುರಿದು ಬಾಗಿಲು ತೆರೆದರು. ಪರಿಶೀಲಿಸಿದಾಗ ₹4.80 ಲಕ್ಷ ಮೌಲ್ಯದ ವಸ್ತು ಕಳ್ಳತನ ಆಗಿವೆ. ಚಾಲಕ ಪರಾರಿ ಆಗಿದ್ದಾನೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ:</strong> ರಾಷ್ಟ್ರೀಯ ಹೆದ್ದಾರಿ 44ರ ಜಯಂತಿ ಗ್ರಾಮದ ಬಳಿಯ ಹೋಟೆಲ್ ಬಳಿ ನಿಂತಿದ್ದ ಕಂಟೈನರ್ನಲ್ಲಿ ಕಳ್ಳತನವಾಗಿದೆ. ಈ ಸಂಬಂಧ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಟೈನರ್ ಚಾಲಕರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. </p><p>ಸಂದೀಪ್ ಟಾನ್ಸ್ಪೋರ್ಟ್ ಕಂಪನಿಗೆ ಸೇರಿದ ಕಂಟೈನರ್ ಹರಿಯಾಣ ರಾಜ್ಯದ ಗುರುಗ್ರಾಮದಿಂದ ತಮಿಳುನಾಡಿನ ಹೊಸೂರಿಗೆ ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ರಾಜಸ್ತಾನದ ನಜೀರ್ ಹುಸೇನ್ ಮತ್ತು ಹಬೀದ್ ಕಂಟೈನರ್ ಚಾಲಕರಾಗಿದ್ದರು.</p><p>ಸಾಮಗ್ರಿಗಳು ನಿಗದಿತ ಸ್ಥಳ ತಲುಪಿಲ್ಲ.ಅಮೆಜಾನ್ ಕಂಪನಿಯವರು ಕಂಟೈನರ್ ಜಿಪಿಎಸ್ ಮಾಹಿತಿ ಪರಿಶೀಲಿಸಿದಾಗ ಗುಡಿಬಂಡೆ ತಾಲ್ಲೂಕಿನ ಜಯಂತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಹೋಟೆಲ್ವೊಂದರ ಬಳಿ ನಿಂತಿರುವುದು ಪತ್ತೆಯಾಗಿದೆ.</p><p>ಟ್ರಾನ್ಸ್ಪೋರ್ಟ್ ಸಂಸ್ಥೆ ಪ್ರತಿನಿಧಿ ಸ್ಥಳಕ್ಕೆ ಬಂದಿದ್ದು ಕಂಟೈನರ್ ಬೀಗ ಮುರಿದು ಬಾಗಿಲು ತೆರೆದರು. ಪರಿಶೀಲಿಸಿದಾಗ ₹4.80 ಲಕ್ಷ ಮೌಲ್ಯದ ವಸ್ತು ಕಳ್ಳತನ ಆಗಿವೆ. ಚಾಲಕ ಪರಾರಿ ಆಗಿದ್ದಾನೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>