ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕೋವಿಡ್ ಲಸಿಕೆ ಅಭಿಯಾನ, ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿದ್ದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿಯೇ ಈ ಕಾರ್ಯಕ್ರಮ ನಡೆಯಿತು. ಸಚಿವರು ಲಸಿಕೆ ಅಭಿಯಾನ ಉದ್ಘಾಟಿಸುವ ವೇಳೆ ಲಸಿಕೆ ಪಡೆಯಲು ಬಂದವರು ಹಾಗೂ ಸಚಿವರ ಬೆಂಬಲಿಗರು ಹೇರಳ ಸಂಖ್ಯೆಯಲ್ಲಿ ನೆರೆದಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಜನರು ಹೆಚ್ಚು ಗುಂಪುಗೂಡಿದ್ದರು. ಸಚಿವರು ತಮ್ಮ ಭಾಷಣದಲ್ಲಿ ಇಷ್ಟು ಸಂಖ್ಯೆ ಯಲ್ಲಿ ಜನರು ಸೇರಿದ್ದರೂ ಮಾಸ್ಕ್ ಧರಿಸಿದ್ದಿರಿ ಎಂದರು.
ಸಚಿವರು ವೇದಿಕೆಯಿಂದ ನಿರ್ಗಮಿಸುವ ವೇಳೆಯಲ್ಲಿಯೂ ಅವರ ಬೆಂಬಲಿಗರು ಹಾಗೂ ಕಿಟ್ ಗಾಗಿ ಬಂದಿದ್ದ ಕಾರ್ಮಿಕರು ಗುಂಪು ಗುಂಪಾಗಿದ್ದರು.
ಸಚಿವರ ನಿರ್ಗಮನದ ನಂತರ ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರನ್ನು ಉದ್ದೇಶಿಸಿ ಅಧಿಕಾರಿಗಳು ಅಂತರ ಕಾಪಾಡಿಕೊಳ್ಳಿ. ದೂರ ನಿಲ್ಲಿ ಎಂದು ಹೇಳುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.