<p><strong>ಶಿಡ್ಲಘಟ್ಟ:</strong> ವರ್ಷದಿಂದ ವರ್ಷಕ್ಕೆ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಾ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಎಂದು ತಾಲ್ಲೂಕಿನಲ್ಲಿ ಹೆಸರಾಗಿದೆ ಆಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.</p>.<p>34 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊಂದಿರುವ ಈ ಶಾಲೆಯಲ್ಲಿ ಗ್ರಾಮದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಈ ಗ್ರಾಮದಿಂದ ಯಾವುದೇ ಮಗುವು ಸಹ ಖಾಸಗಿ ಶಾಲೆಗೆ ದಾಖಲಾಗಿಲ್ಲ ಎಂಬುದೊಂದು ವಿಶೇಷ.</p><p>1-5 ರ ತನಕ ಓದಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 6ನೇ ತರಗತಿಗೆ ಈ ಶಾಲೆಯ ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆ ಯಾಗುತ್ತಿ ರುತ್ತಾರೆ. ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಬಹಳ ಶಾಲೆಯೆಡೆಗಿನ ಪ್ರೀತಿ ಮತ್ತು ದೇಶಭಕ್ತಿ ಎರಡನ್ನೂ ಇಲ್ಲಿ ಮೆರೆಯಲಾಗುತ್ತದೆ.</p><p>ಶಾಲೆಗೆ ಹೆಚ್ಚು ಜಾಗವಿರದಿದ್ದರೂ ನೇರಳೆ, ಬೇವು, ಗಸಗಸೆ, ಸೀಬೆ, ಗುಲ್ಮೊಹರ್, ಕರಿಬೇವು, ನಿಂಬೆ, ಬಾಳೆ, ಸಂಪಿಗೆ, ನೆಲ್ಲಿ, ನುಗ್ಗೆ ಮುಂತಾದ ಮರಗಳನ್ನು ಬೆಳೆಯಲಾಗಿದೆ. ಮಕ್ಕಳಿಗಾಗುವಷ್ಟು ಬಾಳೆಹಣ್ಣು, ತರಕಾರಿ, ಸೊಪ್ಪುಗಳನ್ನು ಶಾಲೆಯ ಆವರಣದಲ್ಲಿಯೇ ಬೆಳೆಯುತ್ತಾರೆ.</p><p>‘ಶಾಲಾ ಕೊಠಡಿ ದುರಸ್ತಿ ಹಾಗೂ ಶೌಚಾಲಯಗಳ ಅಗತ್ಯವಿದೆ. ಪೀಠೋಪಕರಣ, ಕುಡಿಯುವ ನೀರಿನ ಫಿಲ್ಟರ್, ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಮೂಡಿಸಲು ಕಂಪ್ಯೂಟರ್ ಅಗತ್ಯವಿದೆ. ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ಶಾಲಾ ಅಗತ್ಯತೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ವಿ.ಎನ್.ಗಜೇಂದ್ರ.</p>.<p><strong>ಅಭಿವೃದ್ಧಿಗೆ ಕೈ ಜೋಡಿಸುವೆ</strong></p><p>ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತದಿಂದಾಗಿ ಹಲವು ಶಾಲೆಗಳು ಮುಚ್ಚಿವೆ. ನಮ್ಮೂರ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಂಡು ಸಂತಸವಾಯಿತು. ಶಾಲಾ ಅಭಿವೃದ್ಧಿಗೆ ಕೈ ಜೋಡಿಸಲು ನಿರ್ಧರಿಸಿದ್ದೇನೆ. ಶಾಲೆಯ ಅಗತ್ಯತೆಗಳನ್ನು ಹಂತ ಹಂತವಾಗಿ ಪೂರೈಸುವ ಗುರಿ ಹೊಂದಿದ್ದೇನೆ</p><p><strong>ಚೌಡಪ್ಪ, ಹಳೆ ವಿದ್ಯಾರ್ಥಿ</strong></p>.<p><strong>ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ</strong></p><p>ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆ. ಪಾಠದ ಜೊತೆಗೆ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರೀಕ್ಷೆಗೆ ವಿಶೇಷ ಆಸಕ್ತಿ ವಹಿಸಿ ತರಬೇತಿ ನೀಡುತ್ತಾರೆ.</p><p><strong>ಜಾನವಿ.ಎ.ಆರ್, 5ನೇ ತರಗತಿ ವಿದ್ಯಾರ್ಥಿನಿ</strong></p>.<div><blockquote>22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೋಷಕರ ಮತ್ತು ಗ್ರಾಮಸ್ಥರ ಸಹಕಾರದಿಂದ ಉತ್ತಮ ದಾಖಲಾತಿ ಇದೆ. ಯಾವ ಮಕ್ಕಳೂ ಖಾಸಗಿ ಶಾಲೆಗೆ ಹೋಗುವುದಿಲ್ಲ</blockquote><span class="attribution">ನಾಗರತ್ನಮ್ಮ.ಎನ್, ಮುಖ್ಯ ಶಿಕ್ಷಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ವರ್ಷದಿಂದ ವರ್ಷಕ್ಕೆ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಾ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಎಂದು ತಾಲ್ಲೂಕಿನಲ್ಲಿ ಹೆಸರಾಗಿದೆ ಆಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.</p>.<p>34 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊಂದಿರುವ ಈ ಶಾಲೆಯಲ್ಲಿ ಗ್ರಾಮದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಈ ಗ್ರಾಮದಿಂದ ಯಾವುದೇ ಮಗುವು ಸಹ ಖಾಸಗಿ ಶಾಲೆಗೆ ದಾಖಲಾಗಿಲ್ಲ ಎಂಬುದೊಂದು ವಿಶೇಷ.</p><p>1-5 ರ ತನಕ ಓದಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 6ನೇ ತರಗತಿಗೆ ಈ ಶಾಲೆಯ ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆ ಯಾಗುತ್ತಿ ರುತ್ತಾರೆ. ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಬಹಳ ಶಾಲೆಯೆಡೆಗಿನ ಪ್ರೀತಿ ಮತ್ತು ದೇಶಭಕ್ತಿ ಎರಡನ್ನೂ ಇಲ್ಲಿ ಮೆರೆಯಲಾಗುತ್ತದೆ.</p><p>ಶಾಲೆಗೆ ಹೆಚ್ಚು ಜಾಗವಿರದಿದ್ದರೂ ನೇರಳೆ, ಬೇವು, ಗಸಗಸೆ, ಸೀಬೆ, ಗುಲ್ಮೊಹರ್, ಕರಿಬೇವು, ನಿಂಬೆ, ಬಾಳೆ, ಸಂಪಿಗೆ, ನೆಲ್ಲಿ, ನುಗ್ಗೆ ಮುಂತಾದ ಮರಗಳನ್ನು ಬೆಳೆಯಲಾಗಿದೆ. ಮಕ್ಕಳಿಗಾಗುವಷ್ಟು ಬಾಳೆಹಣ್ಣು, ತರಕಾರಿ, ಸೊಪ್ಪುಗಳನ್ನು ಶಾಲೆಯ ಆವರಣದಲ್ಲಿಯೇ ಬೆಳೆಯುತ್ತಾರೆ.</p><p>‘ಶಾಲಾ ಕೊಠಡಿ ದುರಸ್ತಿ ಹಾಗೂ ಶೌಚಾಲಯಗಳ ಅಗತ್ಯವಿದೆ. ಪೀಠೋಪಕರಣ, ಕುಡಿಯುವ ನೀರಿನ ಫಿಲ್ಟರ್, ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಮೂಡಿಸಲು ಕಂಪ್ಯೂಟರ್ ಅಗತ್ಯವಿದೆ. ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ಶಾಲಾ ಅಗತ್ಯತೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ವಿ.ಎನ್.ಗಜೇಂದ್ರ.</p>.<p><strong>ಅಭಿವೃದ್ಧಿಗೆ ಕೈ ಜೋಡಿಸುವೆ</strong></p><p>ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತದಿಂದಾಗಿ ಹಲವು ಶಾಲೆಗಳು ಮುಚ್ಚಿವೆ. ನಮ್ಮೂರ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಂಡು ಸಂತಸವಾಯಿತು. ಶಾಲಾ ಅಭಿವೃದ್ಧಿಗೆ ಕೈ ಜೋಡಿಸಲು ನಿರ್ಧರಿಸಿದ್ದೇನೆ. ಶಾಲೆಯ ಅಗತ್ಯತೆಗಳನ್ನು ಹಂತ ಹಂತವಾಗಿ ಪೂರೈಸುವ ಗುರಿ ಹೊಂದಿದ್ದೇನೆ</p><p><strong>ಚೌಡಪ್ಪ, ಹಳೆ ವಿದ್ಯಾರ್ಥಿ</strong></p>.<p><strong>ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ</strong></p><p>ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆ. ಪಾಠದ ಜೊತೆಗೆ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರೀಕ್ಷೆಗೆ ವಿಶೇಷ ಆಸಕ್ತಿ ವಹಿಸಿ ತರಬೇತಿ ನೀಡುತ್ತಾರೆ.</p><p><strong>ಜಾನವಿ.ಎ.ಆರ್, 5ನೇ ತರಗತಿ ವಿದ್ಯಾರ್ಥಿನಿ</strong></p>.<div><blockquote>22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೋಷಕರ ಮತ್ತು ಗ್ರಾಮಸ್ಥರ ಸಹಕಾರದಿಂದ ಉತ್ತಮ ದಾಖಲಾತಿ ಇದೆ. ಯಾವ ಮಕ್ಕಳೂ ಖಾಸಗಿ ಶಾಲೆಗೆ ಹೋಗುವುದಿಲ್ಲ</blockquote><span class="attribution">ನಾಗರತ್ನಮ್ಮ.ಎನ್, ಮುಖ್ಯ ಶಿಕ್ಷಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>