ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಸ್ತಬ್ಧಚಿತ್ರವಾಗಲಿದೆಯೇ ಗಾಂಧಿ ‘ನಂದಿ’ ಭೇಟಿ?

ಅ.2ರ ಗಾಂಧಿ ಜಯಂತಿ ದಿನವೇ ನಾಡಹಬ್ಬ ದಸರಾ ಜಂಬೂಸವಾರಿ
Published : 3 ಸೆಪ್ಟೆಂಬರ್ 2025, 5:44 IST
Last Updated : 3 ಸೆಪ್ಟೆಂಬರ್ 2025, 5:44 IST
ಫಾಲೋ ಮಾಡಿ
Comments
ಡೋಲಿಯಲ್ಲಿ ನಂದಿಬೆಟ್ಟಕ್ಕೆ
ಮೊದಲ ಬಾರಿಯ ಭೇಟಿಯಲ್ಲಿ ಗಾಂಧೀಜಿ ಕಸ್ತೂರ ಬಾ ಮತ್ತು ಹಂಜಾ ಹುಸೇನ್ ಅವರನ್ನು ಡೋಲಿಗಳಲ್ಲಿ ಕೂರಿಸಿ ಗಿರಿಧಾಮಕ್ಕೆ ಕರೆದೊಯ್ಯಲಾಗುತ್ತದೆ. ಎರಡೂವರೆ ಮೈಲಿ ದೂರದ 1775 ಮೆಟ್ಟಿಲುಗಳನ್ನು ಖಾದಿ ಬಟ್ಟೆ ಧರಿಸಿದ್ದ ಸ್ವಯಂ ಸೇವಕರು ಮತ್ತು ಸುಲ್ತಾನ್ ಪೇಟೆ ಯುವಕರು ‘ಮಹಾತ್ಮ ಗಾಂಧೀಜಿ ಕೀ ಜೈ’ ಎಂದು ಜಯಘೋಷ ಮೊಳಗಿಸುತ್ತ ಬೆಟ್ಟ ಏರಿದ್ದರು. ಗಾಂಧೀಜಿ ಜೂನ್ 5 ರಂದು ಬೆಟ್ಟದಿಂದ ನಿರ್ಗಮಿಸಿದ್ದರು.
ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದರು!
1936ರ ಮೇ ತಿಂಗಳಲ್ಲಿ ಮದರಾಸ್‌ ಪ್ರವಾಸದಲ್ಲಿದ್ದ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ವೇಳೆ ಕೂಡ ಮಹಾತ್ಮರ ವಿಶ್ರಾಂತಿಗೆ ನಂದಿ ಗಿರಿಧಾಮವೇ ಸೂಕ್ತ ಎಂದು ಅವರ ಪರಿವಾರದವರು ನಿರ್ಧರಿಸಿದರು. ಗಾಂಧೀಜಿ ಅವರು 1936ರ ಮೇ 10 ರಂದು ಬೆಂಗಳೂರಿಗೆ ಬಂದು ಕುಮಾರಕೃಪಾ ಭವನದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಬಳಿಕ ಎರಡನೇ ಬಾರಿಗೆ ನಂದಿ ಬೆಟ್ಟದತ್ತ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಗಾಂಧೀಜಿ ಅವರನ್ನು ಡೋಲಿ ಮೂಲಕ ಬೆಟ್ಟದ ಮೇಲೆ ಕರೆದೊಯ್ಯಲು ಸುಲ್ತಾನ್ ಪೇಟೆಯಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಕಾಯುತ್ತಿರುತ್ತಾರೆ. ಆದರೆ ಗಾಂಧೀಜಿ ಅವರು ಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಕುಡುವತಿ ಗ್ರಾಮದ ಬಳಿ ಇದ್ದ ಮಣ್ಣಿನ ರಸ್ತೆ ಮೂಲಕ ಅನಾರೋಗ್ಯದ ನಡುವೆಯೇ ಕಾಲ್ನಡಿಗೆಯಲ್ಲೇ 1478 ಮೀಟರ್ ಎತ್ತರದ ಬೆಟ್ಟ ಏರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT