ಚಿಕ್ಕಬಳ್ಳಾಪುರ:‘ನುಗ್ಗೆ ಕೃಷಿ ಮಾಡುತ್ತೇನೆ ಎಂದಾಗ ಕೆಲವರು ನಕ್ಕಿದ್ದರು. ಆದರೆ ಈಗ ಜನರೇ ಮಾದರಿಯ ತೋಟ ಎನ್ನುತ್ತಿದ್ದಾರೆ’–ಹೀಗೆ ಹೇಳುವಾಗ ಗೌರಿಬಿದನೂರು ತಾಲ್ಲೂಕಿನಅಲಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯರೇಖಲಹಳ್ಳಿಯ ನಂಜುಂಡ ಗೌಡ ಅವರ ಮುಖದಲ್ಲಿ ಸಂಭ್ರಮದ ಅರಳುತ್ತದೆ.
ನಂಜುಂಡ ಗೌಡ ಅವರದ್ದು ಕೃಷಿ ಕುಟುಂಬ. ಬಡತನದ ಕಾರಣದಿಂದ 4ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಕೆಲವು ವರ್ಷ ಮನೆಯವರ ಜತೆ ಜಮೀನಿನಲ್ಲಿ ಕೆಲಸ ಮಾಡಿದರು. ನಂತರ ತಮ್ಮ 4 ಎಕರೆ ಜಮೀನಿನಲ್ಲಿ ಸಣ್ಣ ಪುಟ್ಟ ಬೆಳೆ ಮತ್ತು ರಾಗಿ, ಜೋಳ ಬೆಳೆಯುತ್ತಿದ್ದರು. ಹೀಗೆ ಕೃಷಿ ಮಾಡಿಕೊಂಡಿದ್ದವರ ಬದುಕಿಗೆ ಬಲ ನೀಡಿದ್ದು ನರೇಗಾ ಯೋಜನೆ.