ವಿದ್ಯಾರ್ಥಿಯ ದೆಸೆಯಿಂದಲೇ ವಿದ್ಯಾರ್ಥಿ ಸಂಘಟನೆ ಮೂಲಕ ವಿದ್ಯಾರ್ಥಿಗಳ, ಜನಸಾಮಾನ್ಯರ, ಕೃಷಿ ಕೂಲಿಕಾರ್ಮಿಕರ, ಕೋಮುವಾದದ ವಿರುದ್ಧ ಬೀದಿಗಿಳಿದು ಮುನಿವೆಂಕಟಪ್ಪ ಹೋರಾಟ ನಡೆಸಿದ್ದಾರೆ. ಮಾಜಿ ಶಾಸಕ ದಿ.ಜಿ.ವಿ.ಶ್ರೀರಾಮರೆಡ್ಡಿ ಗರಡಿಯಲ್ಲಿ ಉಳುವವನಿಗೆ ಭೂಮಿ, ಶಾಶ್ವತ ನೀರಾವರಿ, ಭೂ ಮಾಲೀಕರಿಂದ ಬಡವರಿಗೆ ಭೂಮಿ ಕೊಡಿಸಲು ಹೋರಾಟ ಮಾಡಿದ್ದಾರೆ.