<p><strong>ಚಿಕ್ಕಬಳ್ಳಾಪುರ: </strong>ಪ್ರಸಿದ್ಧ ನಂದಿಗಿರಿಧಾಮಕ್ಕೆ ಮೂರು ತಿಂಗಳ ನಂತರ ಪ್ರವಾಸಿಗರು ಭೇಟಿ ನೀಡಿದರು. ಬುಧವಾರ ಬೆಳಿಗ್ಗೆ 6ರಿಂದಲೇ ಮುಖ್ಯದ್ವಾರಕ್ಕೆ ಪ್ರವಾಸಿಗರು ಬಂದರು. ಮೊದಲದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 12ರವರೆಗೆ 500ಕ್ಕೂ ಹೆಚ್ಚು ಮಂದಿಯಷ್ಟೇ ಗಿರಿಧಾಮಕ್ಕೆ ಬಂದಿದ್ದರು.ವಾಹನ ನಿಲುಗಡೆ ಸ್ಥಳದಲ್ಲಿ ಈ ಹಿಂದಿನಂತೆ ದಟ್ಟಣೆ ಕಂಡು ಬರಲಿಲ್ಲ.</p>.<p>ಕಾರಹಳ್ಳಿ ಕ್ರಾಸ್ ಹಾಗೂ ನಂದಿಬೆಟ್ಟದ ಆಸುಪಾಸಿನಲ್ಲಿ ಹೋಟೆಲ್ಗಳು, ಅಂಗಡಿಗಳು ತೆರೆದಿದ್ದವು. ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ಸ್ಥಿತಿಯಲ್ಲಿ ಇತ್ತು.ಕಳೆದ ಮೂರು ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ಇವು ಬಾಗಿಲು ಮುಚ್ಚಿದ್ದವು.</p>.<p>ಬೆಂಗಳೂರಿನ ವಿನಿತ್, ಶಿಡ್ಲಘಟ್ಟ ತಾಲ್ಲೂಕಿನ ವಿಜಯಪುರದ ಮೋಹನ್ ಹಾಗೂ ಸ್ನೇಹಿತರು ಬೆಳ್ಳಂ ಬೆಳಿಗ್ಗೆ ಬೆಟ್ಟಕ್ಕೆ ಸೈಕ್ಲಿಂಗ್ ಬಂದಿದ್ದರು.</p>.<p>ಗಿರಿಧಾಮದಲ್ಲಿ ದಟ್ಟ ಮಂಜಿನಿಂದ ವಾತಾವರಣವಿತ್ತು. ಕಾರುಗಳ ಚಾಲಕರ ಲೈಟ್ ಹಾಕಿಕೊಂಡು ಸಾಗುತ್ತಿದ್ದರು.ಬೆಟ್ಟಕ್ಕೆ ಬಂದ ಪ್ರವಾಸಿಗರು ಭೂಕುಸಿತವಾದ ಸ್ಥಳವನ್ನು ನೋಡಿ ಅಬ್ಬಾ! ಎಷ್ಟೊಂದು ಭೂ ಕುಸಿತವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕುಸಿತವಾದ ಸ್ಥಳದಲ್ಲಿ ಕ್ಷಣ ಹೊತ್ತು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.</p>.<p>ಮೊದಲ ದಿನವೇ ಯುವ ಪ್ರೇಮಿಗಳು ಬೆಟ್ಟದಲ್ಲಿ ಕಂಡು ಬಂದರು. ಪರಸ್ಪರ ಕೈಹಿಡಿದು, ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸಿದರು. ಬಹಳಷ್ಟು ಮಂದಿ ಕುಟುಂಬ ಸಮೇತರಾಗಿ ಚಿಕ್ಕಮಕ್ಕಳ ಜತೆ ಗಿರಿಧಾಮಕ್ಕೆ ಬಂದಿದ್ದರು.</p>.<p>‘ಹಂತ ಹಂತವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಬಹಳಷ್ಟು ಜನರಿಗೆ ನಂದಿ ಪ್ರವೇಶಕ್ಕೆ ಅವಕಾಶವಿದೆ ಎನ್ನುವುದು ತಿಳಿದಿಲ್ಲ. ಮಾಧ್ಯಮಗಳಲ್ಲಿ ಪ್ರಚಾರವಾದ ನಂತರ ಮತ್ತಷ್ಟು ಜನರು ಭೇಟಿ ನೀಡುವರು. ಫೋಟೊ ಶೂಟ್ಗೂ ಅವಕಾಶ ನೀಡಲಾಗಿದೆ’ ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಪ್ರಸಿದ್ಧ ನಂದಿಗಿರಿಧಾಮಕ್ಕೆ ಮೂರು ತಿಂಗಳ ನಂತರ ಪ್ರವಾಸಿಗರು ಭೇಟಿ ನೀಡಿದರು. ಬುಧವಾರ ಬೆಳಿಗ್ಗೆ 6ರಿಂದಲೇ ಮುಖ್ಯದ್ವಾರಕ್ಕೆ ಪ್ರವಾಸಿಗರು ಬಂದರು. ಮೊದಲದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 12ರವರೆಗೆ 500ಕ್ಕೂ ಹೆಚ್ಚು ಮಂದಿಯಷ್ಟೇ ಗಿರಿಧಾಮಕ್ಕೆ ಬಂದಿದ್ದರು.ವಾಹನ ನಿಲುಗಡೆ ಸ್ಥಳದಲ್ಲಿ ಈ ಹಿಂದಿನಂತೆ ದಟ್ಟಣೆ ಕಂಡು ಬರಲಿಲ್ಲ.</p>.<p>ಕಾರಹಳ್ಳಿ ಕ್ರಾಸ್ ಹಾಗೂ ನಂದಿಬೆಟ್ಟದ ಆಸುಪಾಸಿನಲ್ಲಿ ಹೋಟೆಲ್ಗಳು, ಅಂಗಡಿಗಳು ತೆರೆದಿದ್ದವು. ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ಸ್ಥಿತಿಯಲ್ಲಿ ಇತ್ತು.ಕಳೆದ ಮೂರು ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ಇವು ಬಾಗಿಲು ಮುಚ್ಚಿದ್ದವು.</p>.<p>ಬೆಂಗಳೂರಿನ ವಿನಿತ್, ಶಿಡ್ಲಘಟ್ಟ ತಾಲ್ಲೂಕಿನ ವಿಜಯಪುರದ ಮೋಹನ್ ಹಾಗೂ ಸ್ನೇಹಿತರು ಬೆಳ್ಳಂ ಬೆಳಿಗ್ಗೆ ಬೆಟ್ಟಕ್ಕೆ ಸೈಕ್ಲಿಂಗ್ ಬಂದಿದ್ದರು.</p>.<p>ಗಿರಿಧಾಮದಲ್ಲಿ ದಟ್ಟ ಮಂಜಿನಿಂದ ವಾತಾವರಣವಿತ್ತು. ಕಾರುಗಳ ಚಾಲಕರ ಲೈಟ್ ಹಾಕಿಕೊಂಡು ಸಾಗುತ್ತಿದ್ದರು.ಬೆಟ್ಟಕ್ಕೆ ಬಂದ ಪ್ರವಾಸಿಗರು ಭೂಕುಸಿತವಾದ ಸ್ಥಳವನ್ನು ನೋಡಿ ಅಬ್ಬಾ! ಎಷ್ಟೊಂದು ಭೂ ಕುಸಿತವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕುಸಿತವಾದ ಸ್ಥಳದಲ್ಲಿ ಕ್ಷಣ ಹೊತ್ತು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.</p>.<p>ಮೊದಲ ದಿನವೇ ಯುವ ಪ್ರೇಮಿಗಳು ಬೆಟ್ಟದಲ್ಲಿ ಕಂಡು ಬಂದರು. ಪರಸ್ಪರ ಕೈಹಿಡಿದು, ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸಿದರು. ಬಹಳಷ್ಟು ಮಂದಿ ಕುಟುಂಬ ಸಮೇತರಾಗಿ ಚಿಕ್ಕಮಕ್ಕಳ ಜತೆ ಗಿರಿಧಾಮಕ್ಕೆ ಬಂದಿದ್ದರು.</p>.<p>‘ಹಂತ ಹಂತವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಬಹಳಷ್ಟು ಜನರಿಗೆ ನಂದಿ ಪ್ರವೇಶಕ್ಕೆ ಅವಕಾಶವಿದೆ ಎನ್ನುವುದು ತಿಳಿದಿಲ್ಲ. ಮಾಧ್ಯಮಗಳಲ್ಲಿ ಪ್ರಚಾರವಾದ ನಂತರ ಮತ್ತಷ್ಟು ಜನರು ಭೇಟಿ ನೀಡುವರು. ಫೋಟೊ ಶೂಟ್ಗೂ ಅವಕಾಶ ನೀಡಲಾಗಿದೆ’ ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>