<p><strong>ಬಾಗೇಪಲ್ಲಿ:</strong> ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಹುತಾತ್ಮ ರೈತರ ಸ್ಮಾರಕದ ಬಳಿ ಸಿಪಿಎಂ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಹುತಾತ್ಮ ರೈತರ ದಿನ ಹಮ್ಮಿಕೊಳ್ಳಲಾಯಿತು. </p>.<p>1980ರಲ್ಲಿ ನರಗುಂದ, ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ, ಪಟ್ಟಣದಲ್ಲಿ ನಡೆದ ಕಮ್ಯೂನಿಸ್ಟರ ನಾಯಕತ್ವದಲ್ಲಿ ಪ್ರತಿಭಟನ ಮೆರವಣಿ ನಡೆಯಿತು. ಈ ಘಟನೆಯಲ್ಲಿ ತಾಲ್ಲೂಕಿನ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರು ಹುತಾತ್ಮರಾದರು. ರೈತರ ಹುತಾತ್ಮ ಸ್ಮಾರಕಕ್ಕೆ ಹೂವಿನ ಹಾರ ಹಾಕಿ ಕೆಂಪು ವಂದನೆಯ ಘೋಷಣೆ ಕೂಗಲಾಯಿತು. </p>.<p>ಪ್ರಜಾನಾಟ್ಯ ಕಲಾ ಮಂಡಲಿಯ ಪಿ.ಓಬಳರಾಜು, ಚನ್ನರಾಯಪ್ಪ, ಗೊಲ್ಲಪಲ್ಲಿ ಮಂಜುನಾಥ್ ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.</p>.<p>ಕಮ್ಯೂನಿಸ್ಟ್ ಹೋರಾಟಗಾರ ಪುತ್ರ ಚಂದ್ರಶೇಖರ್ ಮಾತನಾಡಿ, ‘1980ರಲ್ಲಿ ನಮ್ಮ ತಂದೆ ಎನ್.ವಿ.ನಾಗಭೂಷಣಾಚಾರಿ, ಎಚ್.ಎಸ್.ರಾಮರಾವ್, ಜಯರಾಮರೆಡ್ಡಿ ಸೇರಿದಂತೆ 36 ಮಂದಿ ಕಮ್ಯೂನಿಸ್ಟ್ ನಾಯಕರು ಪ್ರತಿಭಟನಾ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ 10 ಸಾವಿರ ರೈತರು ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಹೋರಾಟ ದಮನ ಮಾಡಲು, ಅಂದಿನ ಕಾಂಗ್ರೆಸ್ ಸರ್ಕಾರವು ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಗೋಲಿಬಾರ್ ಮಾಡಿತು’ ಎಂದು ಹೇಳಿದರು.</p>.<p>ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಕ್ಷೇತ್ರದಲ್ಲಿ ಕುಡಿಯುವ ನೀರು, ಮನೆ, ನಿವೇಶನ ಹಂಚಿಕೆ, ಉಳುವವನಿಗೆ ಭೂಮಿ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ 1970ರ ದಶಕದಿಂದ ಹೋರಾಟ ಮಾಡಲಾಗುತ್ತಿದೆ. ಆ ಹೋರಾಟಗಳನ್ನು ಕಾಂಗ್ರೆಸ್ ದಮನ ಮಾಡಿಕೊಂಡು ಬಂದಿದೆ ಎಂದರು. </p>.<p>ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ, ಜನರಿಗೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ದೂರಿದರು.</p>.<p>ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿದರು,</p>.<p>ಸಿಪಿಎಐ(ಎಂ) ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್, ಅಶ್ವಥ್ಥಪ್ಪ, ಜಯರಾಮರೆಡ್ಡಿ, ಎಂ.ಎನ್.ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಜಿ.ಮುಸ್ತಾಫ, ಪಿ.ಒಬಳರಾಜು, ಎಚ್.ಎ.ರಾಮಲಿಂಗಪ್ಪ, ಗೊಲ್ಲಪಲ್ಲಿಮಂಜುನಾಥ್, ಜಿ.ಕೃಷ್ಣಪ್ಪ, ಜಹೀರ್ ಬೇಗ್, ಬೈರೆಡ್ಡಿ, ರಾಮಾಂಜಿ, ಲಕ್ಷ್ಮಣರೆಡ್ಡಿ, ರಶೀದ್, ಬಿ.ಎಚ್.ರಫೀಕ್, ಸೋಮಶೇಖರ್, ಈಶ್ವರರೆಡ್ಡಿ, ರವಣಪ್ಪ, ರವಣ, ನೆರಸಿಂಹರೆಡ್ಡಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong> ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಹುತಾತ್ಮ ರೈತರ ಸ್ಮಾರಕದ ಬಳಿ ಸಿಪಿಎಂ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಹುತಾತ್ಮ ರೈತರ ದಿನ ಹಮ್ಮಿಕೊಳ್ಳಲಾಯಿತು. </p>.<p>1980ರಲ್ಲಿ ನರಗುಂದ, ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ, ಪಟ್ಟಣದಲ್ಲಿ ನಡೆದ ಕಮ್ಯೂನಿಸ್ಟರ ನಾಯಕತ್ವದಲ್ಲಿ ಪ್ರತಿಭಟನ ಮೆರವಣಿ ನಡೆಯಿತು. ಈ ಘಟನೆಯಲ್ಲಿ ತಾಲ್ಲೂಕಿನ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರು ಹುತಾತ್ಮರಾದರು. ರೈತರ ಹುತಾತ್ಮ ಸ್ಮಾರಕಕ್ಕೆ ಹೂವಿನ ಹಾರ ಹಾಕಿ ಕೆಂಪು ವಂದನೆಯ ಘೋಷಣೆ ಕೂಗಲಾಯಿತು. </p>.<p>ಪ್ರಜಾನಾಟ್ಯ ಕಲಾ ಮಂಡಲಿಯ ಪಿ.ಓಬಳರಾಜು, ಚನ್ನರಾಯಪ್ಪ, ಗೊಲ್ಲಪಲ್ಲಿ ಮಂಜುನಾಥ್ ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.</p>.<p>ಕಮ್ಯೂನಿಸ್ಟ್ ಹೋರಾಟಗಾರ ಪುತ್ರ ಚಂದ್ರಶೇಖರ್ ಮಾತನಾಡಿ, ‘1980ರಲ್ಲಿ ನಮ್ಮ ತಂದೆ ಎನ್.ವಿ.ನಾಗಭೂಷಣಾಚಾರಿ, ಎಚ್.ಎಸ್.ರಾಮರಾವ್, ಜಯರಾಮರೆಡ್ಡಿ ಸೇರಿದಂತೆ 36 ಮಂದಿ ಕಮ್ಯೂನಿಸ್ಟ್ ನಾಯಕರು ಪ್ರತಿಭಟನಾ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ 10 ಸಾವಿರ ರೈತರು ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಹೋರಾಟ ದಮನ ಮಾಡಲು, ಅಂದಿನ ಕಾಂಗ್ರೆಸ್ ಸರ್ಕಾರವು ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಗೋಲಿಬಾರ್ ಮಾಡಿತು’ ಎಂದು ಹೇಳಿದರು.</p>.<p>ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಕ್ಷೇತ್ರದಲ್ಲಿ ಕುಡಿಯುವ ನೀರು, ಮನೆ, ನಿವೇಶನ ಹಂಚಿಕೆ, ಉಳುವವನಿಗೆ ಭೂಮಿ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ 1970ರ ದಶಕದಿಂದ ಹೋರಾಟ ಮಾಡಲಾಗುತ್ತಿದೆ. ಆ ಹೋರಾಟಗಳನ್ನು ಕಾಂಗ್ರೆಸ್ ದಮನ ಮಾಡಿಕೊಂಡು ಬಂದಿದೆ ಎಂದರು. </p>.<p>ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ, ಜನರಿಗೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ದೂರಿದರು.</p>.<p>ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿದರು,</p>.<p>ಸಿಪಿಎಐ(ಎಂ) ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್, ಅಶ್ವಥ್ಥಪ್ಪ, ಜಯರಾಮರೆಡ್ಡಿ, ಎಂ.ಎನ್.ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಜಿ.ಮುಸ್ತಾಫ, ಪಿ.ಒಬಳರಾಜು, ಎಚ್.ಎ.ರಾಮಲಿಂಗಪ್ಪ, ಗೊಲ್ಲಪಲ್ಲಿಮಂಜುನಾಥ್, ಜಿ.ಕೃಷ್ಣಪ್ಪ, ಜಹೀರ್ ಬೇಗ್, ಬೈರೆಡ್ಡಿ, ರಾಮಾಂಜಿ, ಲಕ್ಷ್ಮಣರೆಡ್ಡಿ, ರಶೀದ್, ಬಿ.ಎಚ್.ರಫೀಕ್, ಸೋಮಶೇಖರ್, ಈಶ್ವರರೆಡ್ಡಿ, ರವಣಪ್ಪ, ರವಣ, ನೆರಸಿಂಹರೆಡ್ಡಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>