<p><strong>ಚಿಂತಾಮಣಿ</strong>: ಡ್ರೋನ್ ಬಳಕೆಯು ರಕ್ಷಣಾ ಕ್ಷೇತ್ರ, ಮದುವೆ, ದೊಡ್ಡ ಸಮಾವೇಶಗಳಲ್ಲಿ ಮಾತ್ರ ಸೀಮಿತವಾಗಿತ್ತು. ಈ ತಂತ್ರಜ್ಞಾನವನ್ನು ಈಗ ಕೃಷಿ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳುವ ಪ್ರಯೋಗಗಳು ನಡೆಯುತ್ತಿವೆ.</p>.<p>ಡ್ರೋನ್ ಬಳಸಿಕೊಂಡು ಕೀಟನಾಶಕ ಮತ್ತು ಪೋಷಕಾಂಶಗಳನ್ನು ಸಿಂಪಡಣೆ ಮಾಡಬಹುದು. ವಿವಿಧ ಬೆಳೆಗಳ ನಾಟಿ, ಕೊಯ್ಲು, ಒಕ್ಕಲು ಮಾಡುವ ಯಂತ್ರಗಳನ್ನು ಬಾಡಿಗೆಗೆ ನೀಡುವಂತೆ ಡ್ರೋನ್ಗಳನ್ನು ಕೂಡ ಬಾಡಿಗೆ ನೀಡುವಂತಹ ಖಾಸಗಿ ಕಂಪನಿಗಳು ಈಗಾಗಲೇ ಜಿಲ್ಲೆಗೆ ಕಾಲಿಟ್ಟಿವೆ.</p>.<p>ಔಷಧಿ ಸಿಂಪಡಿಸಲು ಎಕರೆಗೆ ₹ 600 ರಿಂದ ₹ 1,250 ಬಾಡಿಗೆ ಪಡೆಯುತ್ತಾರೆ. ಡ್ರೋನ್ನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಏರಿಳಿತವಾಗುತ್ತದೆ. ಒಂದು ಡ್ರೋನ್ ಮೂಲಕ ದಿನಕ್ಕೆ ಸುಮಾರು 15ರಿಂದ 20 ಎಕರೆ ಪ್ರದೇಶದಲ್ಲಿ ಔಷಧಿ ಸಿಂಪಡಿಸಬಹುದು.</p>.<p>ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಯೋಜನೆಯಡಿ ತಾಲ್ಲೂಕಿನ ಹನುಮಯ್ಯಗಾರಹಳ್ಳಿ ಮತ್ತು ಸೋಮಕಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಟೊಮೆಟೊ, ಬದನೆ ಮತ್ತು ಬೀಟ್ರೋಟ್ ಬೆಳೆಗಳಿಗೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೆಷಲ್ ಸಿಂಪಡಿಸಲಾಯಿತು. ಮಾವು ಬೆಳೆಗೆ ಮಾವು ಸ್ಪೆಷಲ್ ಸಿಂಪಡಿಸಲಾಯಿತು.</p>.<p>‘ಒಂದು ಎಕರೆ ತರಕಾರಿ ತೋಟಕ್ಕೆ 10 ಲೀಟರ್ ದ್ರಾವಣ ಸಿಂಪಡಿಸಲು8-10 ನಿಮಿಷ ಬೇಕಾಗುತ್ತದೆ. 10 ವರ್ಷದ ಮಾವಿನ ತೋಟಕ್ಕೆ 20 ಲೀಟರ್ ದ್ರಾವಣ ಸಿಂಪಡಿಸಲು30 ನಿಮಿಷ ಬೇಕಾಗುತ್ತದೆ. ಈ ಡ್ರೋನ್ ಬಳಕೆಯಿಂದ ಶೇ 80-90ರಷ್ಟು ಸಿಂಪಡಣೆ ನೀರು ಮತ್ತು ಶೇ 35-40ರಷ್ಟು ಕೀಟನಾಶಕದ ಪ್ರಮಾಣವನ್ನು ಉಳಿತಾಯ ಮಾಡಬಹುದು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೆ.ಎಸ್. ವಿನೋದಾ.</p>.<p>‘ಇದು ಒಂದು ಹೊಸ ತಾಂತ್ರಿಕತೆಯಾಗಿದೆ. ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಡ್ರೋನ್ ಬಳಕೆಯು ಇತ್ತೀಚಿನ ದಿನಗಳಲ್ಲಿ ಕೀಟನಾಶಕಗಳು ಪೋಲಾಗುವುದನ್ನು ತಪ್ಪಿಸುವುದಲ್ಲದೇ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಈ ತಂತ್ರಜ್ಞಾನದಿಂದ ನೀಗಿಸಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ. ಪಾಪಿರೆಡ್ಡಿ ಅಭಿಪ್ರಾಯಪಟ್ಟರು.</p>.<p>ಪ್ರಾತ್ಯಕ್ಷಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ವಿಶ್ವನಾಥ್, ಡಾ.ತನ್ವೀರ್ ಅಹ್ಮದ್, ವಿ.ಕೆ. ಆನಂದ ರೈತರೊಂದಿಗೆ ಸಂವಾದ ನಡೆಸಿದರು.</p>.<p>ಡ್ರೋನ್ ಉಪಯೋಗಿಸುವುದು ಮತ್ತು ಅದರಿಂದ ಆಗುವ ಉಪಯೋಗ ಕುರಿತು ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಡ್ರೋನ್ ಬಳಕೆಯಿಂದ ಕೃಷಿ ಖರ್ಚು ಕಡಿಮೆಯಾಗುತ್ತದೆ. ಕೂಲಿಯಾಳು ಸಮಸ್ಯೆ ನಿವಾರಣೆಯಾಗುತ್ತದೆ. ಪರೋಕ್ಷವಾಗಿ ಕೃಷಿಗೆ ಲಾಭದಾಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ಡ್ರೋನ್ ಬಳಕೆಯು ರಕ್ಷಣಾ ಕ್ಷೇತ್ರ, ಮದುವೆ, ದೊಡ್ಡ ಸಮಾವೇಶಗಳಲ್ಲಿ ಮಾತ್ರ ಸೀಮಿತವಾಗಿತ್ತು. ಈ ತಂತ್ರಜ್ಞಾನವನ್ನು ಈಗ ಕೃಷಿ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳುವ ಪ್ರಯೋಗಗಳು ನಡೆಯುತ್ತಿವೆ.</p>.<p>ಡ್ರೋನ್ ಬಳಸಿಕೊಂಡು ಕೀಟನಾಶಕ ಮತ್ತು ಪೋಷಕಾಂಶಗಳನ್ನು ಸಿಂಪಡಣೆ ಮಾಡಬಹುದು. ವಿವಿಧ ಬೆಳೆಗಳ ನಾಟಿ, ಕೊಯ್ಲು, ಒಕ್ಕಲು ಮಾಡುವ ಯಂತ್ರಗಳನ್ನು ಬಾಡಿಗೆಗೆ ನೀಡುವಂತೆ ಡ್ರೋನ್ಗಳನ್ನು ಕೂಡ ಬಾಡಿಗೆ ನೀಡುವಂತಹ ಖಾಸಗಿ ಕಂಪನಿಗಳು ಈಗಾಗಲೇ ಜಿಲ್ಲೆಗೆ ಕಾಲಿಟ್ಟಿವೆ.</p>.<p>ಔಷಧಿ ಸಿಂಪಡಿಸಲು ಎಕರೆಗೆ ₹ 600 ರಿಂದ ₹ 1,250 ಬಾಡಿಗೆ ಪಡೆಯುತ್ತಾರೆ. ಡ್ರೋನ್ನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಏರಿಳಿತವಾಗುತ್ತದೆ. ಒಂದು ಡ್ರೋನ್ ಮೂಲಕ ದಿನಕ್ಕೆ ಸುಮಾರು 15ರಿಂದ 20 ಎಕರೆ ಪ್ರದೇಶದಲ್ಲಿ ಔಷಧಿ ಸಿಂಪಡಿಸಬಹುದು.</p>.<p>ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಯೋಜನೆಯಡಿ ತಾಲ್ಲೂಕಿನ ಹನುಮಯ್ಯಗಾರಹಳ್ಳಿ ಮತ್ತು ಸೋಮಕಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಟೊಮೆಟೊ, ಬದನೆ ಮತ್ತು ಬೀಟ್ರೋಟ್ ಬೆಳೆಗಳಿಗೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೆಷಲ್ ಸಿಂಪಡಿಸಲಾಯಿತು. ಮಾವು ಬೆಳೆಗೆ ಮಾವು ಸ್ಪೆಷಲ್ ಸಿಂಪಡಿಸಲಾಯಿತು.</p>.<p>‘ಒಂದು ಎಕರೆ ತರಕಾರಿ ತೋಟಕ್ಕೆ 10 ಲೀಟರ್ ದ್ರಾವಣ ಸಿಂಪಡಿಸಲು8-10 ನಿಮಿಷ ಬೇಕಾಗುತ್ತದೆ. 10 ವರ್ಷದ ಮಾವಿನ ತೋಟಕ್ಕೆ 20 ಲೀಟರ್ ದ್ರಾವಣ ಸಿಂಪಡಿಸಲು30 ನಿಮಿಷ ಬೇಕಾಗುತ್ತದೆ. ಈ ಡ್ರೋನ್ ಬಳಕೆಯಿಂದ ಶೇ 80-90ರಷ್ಟು ಸಿಂಪಡಣೆ ನೀರು ಮತ್ತು ಶೇ 35-40ರಷ್ಟು ಕೀಟನಾಶಕದ ಪ್ರಮಾಣವನ್ನು ಉಳಿತಾಯ ಮಾಡಬಹುದು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೆ.ಎಸ್. ವಿನೋದಾ.</p>.<p>‘ಇದು ಒಂದು ಹೊಸ ತಾಂತ್ರಿಕತೆಯಾಗಿದೆ. ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಡ್ರೋನ್ ಬಳಕೆಯು ಇತ್ತೀಚಿನ ದಿನಗಳಲ್ಲಿ ಕೀಟನಾಶಕಗಳು ಪೋಲಾಗುವುದನ್ನು ತಪ್ಪಿಸುವುದಲ್ಲದೇ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಈ ತಂತ್ರಜ್ಞಾನದಿಂದ ನೀಗಿಸಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ. ಪಾಪಿರೆಡ್ಡಿ ಅಭಿಪ್ರಾಯಪಟ್ಟರು.</p>.<p>ಪ್ರಾತ್ಯಕ್ಷಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ವಿಶ್ವನಾಥ್, ಡಾ.ತನ್ವೀರ್ ಅಹ್ಮದ್, ವಿ.ಕೆ. ಆನಂದ ರೈತರೊಂದಿಗೆ ಸಂವಾದ ನಡೆಸಿದರು.</p>.<p>ಡ್ರೋನ್ ಉಪಯೋಗಿಸುವುದು ಮತ್ತು ಅದರಿಂದ ಆಗುವ ಉಪಯೋಗ ಕುರಿತು ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಡ್ರೋನ್ ಬಳಕೆಯಿಂದ ಕೃಷಿ ಖರ್ಚು ಕಡಿಮೆಯಾಗುತ್ತದೆ. ಕೂಲಿಯಾಳು ಸಮಸ್ಯೆ ನಿವಾರಣೆಯಾಗುತ್ತದೆ. ಪರೋಕ್ಷವಾಗಿ ಕೃಷಿಗೆ ಲಾಭದಾಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>