<p><strong>ಗೌರಿಬಿದನೂರು: </strong>ತಾಲ್ಲೂಕಿನವಿದುರಾಶ್ವತ್ಥದ ವೀರಸೌಧದ ಚಿತ್ರಪಟ ಗ್ಯಾಲರಿಯಲ್ಲಿರುವ ಚಿತ್ರಗಳು ಈಗ ಆರ್ಎಸ್ಎಸ್ ಮತ್ತು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ನಡುವೆ ಜಟಾಪಟಿಗೆ ಕಾರಣವಾಗಿದೆ.</p>.<p>ಆರ್ಎಸ್ಎಸ್, ಬಜರಂಗದಳ ಮತ್ತು ವಿಎಚ್ಪಿ ಮುಖಂಡರು ಪದೇ ಪದೇ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ‘ವಿದುರಾಶ್ವತ್ಥಕ್ಕೆ ರಕ್ಷಣೆ ಕೊಡಿ’ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ಗಂಗಾಧರಮೂರ್ತಿ ಹಾಗೂ ಸದಸ್ಯರು ಮನವಿ ನೀಡಿದ್ದಾರೆ.</p>.<p>ಇಲ್ಲಿನ ವೀರಸೌಧದದಲ್ಲಿ ಚಿತ್ರಪಟ ಗ್ಯಾಲರಿ ಇದೆ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಮೆಲುಕು ಹಾಕುವ ಚಿತ್ರಗಳು ಗ್ಯಾಲರಿಯಲ್ಲಿವೆ. ‘ಬಲಪಂಥೀಯ ರಾಜಕಾರಣ; ಹಿಂದೂ ಕೋಮುವಾದ; ಹಿಂದೂ ಮಹಾಸಭಾ; ಆರ್ಎಸ್ಎಸ್’ ಎನ್ನುವ ಚಿತ್ರವಿದೆ. ಗಾಂಧಿ ಹತ್ಯೆ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಚಿತ್ರಗಳನ್ನು ಗ್ಯಾಲರಿಯಲ್ಲಿ ಕಾಣಬಹುದು. ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಇವರು ಚಿತ್ರಗಳಲ್ಲಿ ಸಾರ್ವಕರ್ ಅವರ ಚಿತ್ರವೂ ಇದೆ.</p>.<p>ಹಿಂದೂ ಕೋಮುವಾದಕ್ಕೆ ಸಂಬಂಧಿಸಿದ ಇರುವ ಚಿತ್ರದಿಂದ ಆರ್ಎಸ್ಎಸ್ಹೆಸರು ತೆಗೆಯಬೇಕು ಮತ್ತು ಸ್ವಾತಂತ್ರ್ಯ ಹೋರಾಟ ಸಂಬಂಧ ಸಾವರ್ಕರ್ ಚಿತ್ರಗಳನ್ನು ಗ್ಯಾಲರಿಯಲ್ಲಿ ಅಳವಡಿಬೇಕು ಎಂದು ಆರ್ಎಸ್ಎಸ್ ಆಗ್ರಹಿಸುತ್ತಿದೆ.</p>.<p>20 ದಿನಗಳಲ್ಲಿ ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ನಾಲ್ಕು ಬಾರಿ ಗ್ಯಾಲರಿಗೆ ಭೇಟಿ ನೀಡಿ ಈ ಒತ್ತಡ ಹೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು: </strong>ತಾಲ್ಲೂಕಿನವಿದುರಾಶ್ವತ್ಥದ ವೀರಸೌಧದ ಚಿತ್ರಪಟ ಗ್ಯಾಲರಿಯಲ್ಲಿರುವ ಚಿತ್ರಗಳು ಈಗ ಆರ್ಎಸ್ಎಸ್ ಮತ್ತು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ನಡುವೆ ಜಟಾಪಟಿಗೆ ಕಾರಣವಾಗಿದೆ.</p>.<p>ಆರ್ಎಸ್ಎಸ್, ಬಜರಂಗದಳ ಮತ್ತು ವಿಎಚ್ಪಿ ಮುಖಂಡರು ಪದೇ ಪದೇ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ‘ವಿದುರಾಶ್ವತ್ಥಕ್ಕೆ ರಕ್ಷಣೆ ಕೊಡಿ’ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ಗಂಗಾಧರಮೂರ್ತಿ ಹಾಗೂ ಸದಸ್ಯರು ಮನವಿ ನೀಡಿದ್ದಾರೆ.</p>.<p>ಇಲ್ಲಿನ ವೀರಸೌಧದದಲ್ಲಿ ಚಿತ್ರಪಟ ಗ್ಯಾಲರಿ ಇದೆ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಮೆಲುಕು ಹಾಕುವ ಚಿತ್ರಗಳು ಗ್ಯಾಲರಿಯಲ್ಲಿವೆ. ‘ಬಲಪಂಥೀಯ ರಾಜಕಾರಣ; ಹಿಂದೂ ಕೋಮುವಾದ; ಹಿಂದೂ ಮಹಾಸಭಾ; ಆರ್ಎಸ್ಎಸ್’ ಎನ್ನುವ ಚಿತ್ರವಿದೆ. ಗಾಂಧಿ ಹತ್ಯೆ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಚಿತ್ರಗಳನ್ನು ಗ್ಯಾಲರಿಯಲ್ಲಿ ಕಾಣಬಹುದು. ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಇವರು ಚಿತ್ರಗಳಲ್ಲಿ ಸಾರ್ವಕರ್ ಅವರ ಚಿತ್ರವೂ ಇದೆ.</p>.<p>ಹಿಂದೂ ಕೋಮುವಾದಕ್ಕೆ ಸಂಬಂಧಿಸಿದ ಇರುವ ಚಿತ್ರದಿಂದ ಆರ್ಎಸ್ಎಸ್ಹೆಸರು ತೆಗೆಯಬೇಕು ಮತ್ತು ಸ್ವಾತಂತ್ರ್ಯ ಹೋರಾಟ ಸಂಬಂಧ ಸಾವರ್ಕರ್ ಚಿತ್ರಗಳನ್ನು ಗ್ಯಾಲರಿಯಲ್ಲಿ ಅಳವಡಿಬೇಕು ಎಂದು ಆರ್ಎಸ್ಎಸ್ ಆಗ್ರಹಿಸುತ್ತಿದೆ.</p>.<p>20 ದಿನಗಳಲ್ಲಿ ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ನಾಲ್ಕು ಬಾರಿ ಗ್ಯಾಲರಿಗೆ ಭೇಟಿ ನೀಡಿ ಈ ಒತ್ತಡ ಹೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>