ಈ ಸುದ್ದಿ ತಿಳಿದು ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ್, ಎಸ್ಐ ಚಂದ್ರಕಲಾ, ಮುಖಂಡ ಪಿ.ಆರ್.ಚಲಂ, ಎರಡನೇ ಪತ್ನಿ ಸಂಬಂಧಿಕರು ಸದ್ಯ ಅಂತ್ಯಕ್ರಿಯೆ ನೆರವೇರಿಸಿ ಬರುವ ಬುಧವಾರ ನ್ಯಾಯಪಂಚಾಯಿತಿ ನಡೆಸಿ ಮಾತನಾಡೋಣ ಎಂದು ಪ್ರತಿಭಟನಾನಿರತರ ಮನವೊಲಿಸುವ ಕೆಲಸ ಮಾಡಿದರು. ಮಧ್ಯಾಹ್ನದ ಬಳಿಕ ಪಟ್ಟು ಸಡಿಲಿಸಿದ ಸರೋಜಮ್ಮ ಅವರ ಮಕ್ಕಳು ಶುಕ್ರವಾರ ಸಂಜೆ 4ರ ಸುಮಾರಿಗೆ ಶವವನ್ನು ನಿಮ್ಮಕಾಯಲಪಲ್ಲಿ ತೆಗೆದುಕೊಂಡು ಅತ್ಯಕ್ರಿಯೆ ನೆರವೇರಿಸಿದರು. ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.