<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಬಿತ್ತನೆಯ ಗುರಿ ಹೆಚ್ಚಿದೆ. 2024ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5,422 ಹೆಕ್ಟೇರ್ ಹಿಂಗಾರು ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಬಾರಿ 8,937 ಹೆಕ್ಟೇರ್ಗೆ ಹೆಚ್ಚಿದೆ.</p>.<p>5,850 ಹೆಕ್ಟೇರ್ ನೀರಾವರಿ ಜಮೀನು ಮತ್ತು 3087 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಮಳೆ ಕೊರತೆಯ ಕಾರಣದಿಂದ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಬಿತ್ತನೆ ನಿಗದಿತ ಗುರಿ ಮುಟ್ಟಿರಲಿಲ್ಲ. ಮುಂಗಾರು ಅವಧಿಯಲ್ಲಿ ಶೇ 89.95ರಷ್ಟು ಬಿತ್ತನೆಯಾಗಿತ್ತು.</p>.<p>ನೆಲಗಡಲೆ ಮತ್ತು ಮುಸುಕಿನ ಜೋಳವು ಹಿಂಗಾರು ಅವಧಿಯ ಪ್ರಮುಖ ಬೆಳೆ. ಈ ಬಾರಿಯ ಮುಂಗಾರಿನಲ್ಲಿ ನೆಲಗಡಲೆ ಜಿಲ್ಲೆಯಲ್ಲಿ ನೆಲಕಚ್ಚಿತ್ತು. ಈ ಕಾರಣದಿಂದ ಚೇಳೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ವಿಮೆ ಮಾಡಿಸಿದ ಶೇಂಗಾವನ್ನು ಬಿತ್ತದ ರೈತರಿಗೂ ವಿಮೆ ಹಣ ದೊರಕಿಸಿಕೊಡಲಾಗಿದೆ. </p>.<p>2025ರ ಬಿತ್ತನೆ ಗುರಿ ಮತ್ತು ಈ ಹಿಂದಿನ ವರ್ಷಗಳ ಹಿಂಗಾರು ಬಿತ್ತನೆಯ ಗುರಿಗೆ ಹೋಲಿಸಿದರೆ ಈ ಬಾರಿ ಗುರಿ ಹೆಚ್ಚಳವಾಗಿದೆ. </p>.<p>ಗೌರಿಬಿದನೂರು ತಾಲ್ಲೂಕಿನಲ್ಲಿ ಗಣನೀಯ ಹೆಚ್ಚಳ: ಜಿಲ್ಲೆಯಲ್ಲಿ 2,759 ಹೆಕ್ಟೇರ್ ಬಿತ್ತನೆ ಗುರಿಯೊಂದಿಗೆ ಗೌರಿಬಿದನೂರು ತಾಲ್ಲೂಕು ಮೊದಲ ಸ್ಥಾನದಲ್ಲಿ ಇದೆ. ಕಳೆದ ವರ್ಷ ಈ ತಾಲ್ಲೂಕಿನಲ್ಲಿ 996 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಈ ಬಾರಿ ಮೂರು ಪಟ್ಟು ಗುರಿ ಹೆಚ್ಚಳವಾಗಿದೆ. </p>.<p>ಕೈ ಹಿಡಿಯುವುದೇ ಬಿತ್ತನೆ: ಜಿಲ್ಲೆಯಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಆರಂಭವಾಗಿದೆ. ಪ್ರಸಕ್ತ ವರ್ಷ ಹಿಂಗಾರು ರೈತರ ಕೈ ಹಿಡಿಯುವುದೇ ಎನ್ನುವ ಲೆಕ್ಕಾಚಾರವೂ ಜೋರಾಗಿದೆ.</p>.<p>2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೇವಲ ಶೇ 39.93 ರಷ್ಟು ಗುರಿ ಸಾಧನೆ ಆಗಿತ್ತು. ಆ ವರ್ಷ ರೈತರ ಪಾಲಿಗೆ ಮುಂಗಾರಿನಂತೆ ಹಿಂಗಾರು ಮಳೆ ಕೂಡ ಕೈ ಕೊಟ್ಟ ಕಾರಣ ಬಿತ್ತನೆಗೆ ಹಿನ್ನಡೆ ಆಗಿತ್ತು. ಜಿಲ್ಲೆಯಲ್ಲಿ ಹಿಂಗಾರು ಉತ್ತಮ ಮಳೆಯೊಂದಿಗೆ ಆರಂಭವಾಗಿದೆ. ಈ ಕಾರಣದಿಂದ ಬಿತ್ತನೆಯ ಬಗ್ಗೆಯೂ ಕೃಷಿ ಇಲಾಖೆ ಆಶಾಭಾವ ಹೊಂದಿದೆ.</p>.<p>‘ಹಿಂಗಾರಿನಲ್ಲಿ ನೆಲಗಡಲೆ, ಮುಸುಕಿನ ಜೋಳ, ಸೂರ್ಯಕಾಂತಿಯು ಪ್ರಮುಖ ಬೆಳೆಯಾಗಿದೆ. ಹಿಂಗಾರು ಬೆಳೆಗಳಿಗೆ ದೊಡ್ಡ ಮಳೆಯ ಅಗತ್ಯವಿಲ್ಲ. ಸಣ್ಣ ಮಳೆಯಾದರೂ ಸಾಕು. ಇಬ್ಬನಿ ವಾತಾವರಣದಲ್ಲಿಯೇ ಈ ಬೆಳೆಗಳು ಬೆಳೆಯುತ್ತವೆ. ಹಿಂಗಾರು ಬಿತ್ತನೆ ಈ ಬಾರಿ ಉತ್ತಮವಾಗುವ ಲಕ್ಷಣಗಳು ಇವೆ’ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಬಿತ್ತನೆಯ ಗುರಿ ಹೆಚ್ಚಿದೆ. 2024ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5,422 ಹೆಕ್ಟೇರ್ ಹಿಂಗಾರು ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಬಾರಿ 8,937 ಹೆಕ್ಟೇರ್ಗೆ ಹೆಚ್ಚಿದೆ.</p>.<p>5,850 ಹೆಕ್ಟೇರ್ ನೀರಾವರಿ ಜಮೀನು ಮತ್ತು 3087 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಮಳೆ ಕೊರತೆಯ ಕಾರಣದಿಂದ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಬಿತ್ತನೆ ನಿಗದಿತ ಗುರಿ ಮುಟ್ಟಿರಲಿಲ್ಲ. ಮುಂಗಾರು ಅವಧಿಯಲ್ಲಿ ಶೇ 89.95ರಷ್ಟು ಬಿತ್ತನೆಯಾಗಿತ್ತು.</p>.<p>ನೆಲಗಡಲೆ ಮತ್ತು ಮುಸುಕಿನ ಜೋಳವು ಹಿಂಗಾರು ಅವಧಿಯ ಪ್ರಮುಖ ಬೆಳೆ. ಈ ಬಾರಿಯ ಮುಂಗಾರಿನಲ್ಲಿ ನೆಲಗಡಲೆ ಜಿಲ್ಲೆಯಲ್ಲಿ ನೆಲಕಚ್ಚಿತ್ತು. ಈ ಕಾರಣದಿಂದ ಚೇಳೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ವಿಮೆ ಮಾಡಿಸಿದ ಶೇಂಗಾವನ್ನು ಬಿತ್ತದ ರೈತರಿಗೂ ವಿಮೆ ಹಣ ದೊರಕಿಸಿಕೊಡಲಾಗಿದೆ. </p>.<p>2025ರ ಬಿತ್ತನೆ ಗುರಿ ಮತ್ತು ಈ ಹಿಂದಿನ ವರ್ಷಗಳ ಹಿಂಗಾರು ಬಿತ್ತನೆಯ ಗುರಿಗೆ ಹೋಲಿಸಿದರೆ ಈ ಬಾರಿ ಗುರಿ ಹೆಚ್ಚಳವಾಗಿದೆ. </p>.<p>ಗೌರಿಬಿದನೂರು ತಾಲ್ಲೂಕಿನಲ್ಲಿ ಗಣನೀಯ ಹೆಚ್ಚಳ: ಜಿಲ್ಲೆಯಲ್ಲಿ 2,759 ಹೆಕ್ಟೇರ್ ಬಿತ್ತನೆ ಗುರಿಯೊಂದಿಗೆ ಗೌರಿಬಿದನೂರು ತಾಲ್ಲೂಕು ಮೊದಲ ಸ್ಥಾನದಲ್ಲಿ ಇದೆ. ಕಳೆದ ವರ್ಷ ಈ ತಾಲ್ಲೂಕಿನಲ್ಲಿ 996 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಈ ಬಾರಿ ಮೂರು ಪಟ್ಟು ಗುರಿ ಹೆಚ್ಚಳವಾಗಿದೆ. </p>.<p>ಕೈ ಹಿಡಿಯುವುದೇ ಬಿತ್ತನೆ: ಜಿಲ್ಲೆಯಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಆರಂಭವಾಗಿದೆ. ಪ್ರಸಕ್ತ ವರ್ಷ ಹಿಂಗಾರು ರೈತರ ಕೈ ಹಿಡಿಯುವುದೇ ಎನ್ನುವ ಲೆಕ್ಕಾಚಾರವೂ ಜೋರಾಗಿದೆ.</p>.<p>2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೇವಲ ಶೇ 39.93 ರಷ್ಟು ಗುರಿ ಸಾಧನೆ ಆಗಿತ್ತು. ಆ ವರ್ಷ ರೈತರ ಪಾಲಿಗೆ ಮುಂಗಾರಿನಂತೆ ಹಿಂಗಾರು ಮಳೆ ಕೂಡ ಕೈ ಕೊಟ್ಟ ಕಾರಣ ಬಿತ್ತನೆಗೆ ಹಿನ್ನಡೆ ಆಗಿತ್ತು. ಜಿಲ್ಲೆಯಲ್ಲಿ ಹಿಂಗಾರು ಉತ್ತಮ ಮಳೆಯೊಂದಿಗೆ ಆರಂಭವಾಗಿದೆ. ಈ ಕಾರಣದಿಂದ ಬಿತ್ತನೆಯ ಬಗ್ಗೆಯೂ ಕೃಷಿ ಇಲಾಖೆ ಆಶಾಭಾವ ಹೊಂದಿದೆ.</p>.<p>‘ಹಿಂಗಾರಿನಲ್ಲಿ ನೆಲಗಡಲೆ, ಮುಸುಕಿನ ಜೋಳ, ಸೂರ್ಯಕಾಂತಿಯು ಪ್ರಮುಖ ಬೆಳೆಯಾಗಿದೆ. ಹಿಂಗಾರು ಬೆಳೆಗಳಿಗೆ ದೊಡ್ಡ ಮಳೆಯ ಅಗತ್ಯವಿಲ್ಲ. ಸಣ್ಣ ಮಳೆಯಾದರೂ ಸಾಕು. ಇಬ್ಬನಿ ವಾತಾವರಣದಲ್ಲಿಯೇ ಈ ಬೆಳೆಗಳು ಬೆಳೆಯುತ್ತವೆ. ಹಿಂಗಾರು ಬಿತ್ತನೆ ಈ ಬಾರಿ ಉತ್ತಮವಾಗುವ ಲಕ್ಷಣಗಳು ಇವೆ’ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>