ಬೇಸಾಯಶಾಸ್ತ್ರ ವಿಜ್ಞಾನಿ ವಿಶ್ವನಾಥ್ ಮಾತನಾಡಿ, ಹಿಪ್ಪುನೇರಳೆಯಲ್ಲಿ ಕಳೆ ನಿಯಂತ್ರಣ ಮಾಡಿ ತೋಟಗಳನ್ನು ಸ್ವಚ್ಛವಾಗಿಡಬೇಕು. ಆಸರೆ ಸಸ್ಯಗಳನ್ನು ನಾಶಪಡಿಸಬೇಕು. ಅಂತರ ಬೆಳೆಯಾಗಿ ಚೆಂಡು, ಸಾಸಿವೆಯಂತಹ ಶತ್ರು ಸಸ್ಯಗಳನ್ನು ವರ್ಷಕ್ಕೊಮ್ಮೆ ಬೆಳೆಸುವುದರಿಂದಲೂ ಜಂತು ನಿಯಂತ್ರಣ ಮಾಡಬಹುದು. ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ ಹುಳುಗಳಿಗೆ ಗುಣಮಟ್ಟದ ಸೊಪ್ಪನ್ನು ನೀಡಿದರೆ ಗುಣಮಟ್ಟದ ಗೂಡನ್ನು ಪಡೆದು ಹೆಚ್ಚಿನ ದರ ಪಡೆಯಬಹುದು ಎಂದರು.