'ಕೆರೆಯ ಬಳಿ ಯಾರೋ ಅನಧಿಕೃತವಾಗಿ ಮೋಟಾರು ಪಂಪ್ ಬಳಸಿ ಒಳಚರಂಡಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಆಯುಕ್ತರ ಮೌಖಿಕ ಸೂಚನೆಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ದೂರುಗಳು ನಿಜವಾಗಿದ್ದವು. ಯಾರೋ ಅನಧಿಕೃತ ವ್ಯಕ್ತಿಗಳು ಮ್ಯಾನ್ ಹೋಲ್ ಗಳನ್ನು ಒಡೆದು ಸದರಿ ಕೊಳಚೆ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಇದರಿಂದ ನಗರಸಭೆಗೂ ನಷ್ಟವಾಗುತ್ತಿದೆ. ಕೊಳಚೆ ನೀರು ಹಾಯಿಸಿ ಬೆಳೆ ಬೆಳೆಯುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ದುಶ್ಪರಿಣಾಮ ಬೀರುತ್ತದೆ. ಮ್ಯಾನ್ ಹೋಲ್ ಗಳನ್ನು ಒಡೆದು ಕೊಳಚೆ ನೀಎನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಸುತ್ತಿರುವುದು ಆಸಂಜ್ಞೆಯ ಅಪರಾಧವಾಗಿದೆ. ಆರೋಪಿಗಳ ವಿರುದ್ಧ 427 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಅನುಮತಿಯನ್ನು ಪಡೆಯಲಾಗಿದೆ‘ ಎಂದು ಹೇಳಿದ್ದಾರೆ.