<p><strong>ಶಿಡ್ಲಘಟ್ಟ</strong>: ಕಳೆದ ವಾರದಿಂದ ಬೆಳಗ್ಗೆ ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದ ಮಳೆಯು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೈಗೆ ಬಂದ ಹೂವಿನ ಫಸಲು ರೈತರ ಕೈಗೆ ಸಿಗದಂತಾಗಿದೆ. </p>.<p>ಮಾರುಕಟ್ಟೆಯಲ್ಲಿ ಹೂವಿಗೆ ಅಷ್ಟೇನೂ ದರವಿರಲಿಲ್ಲ. ಇದರಿಂದಾಗಿ ಗ್ರಾಹಕರು ನಿರಾಳವಾಗಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. </p>.<p>ತಾಲ್ಲೂಕಿನಾದ್ಯಂತ ಕತ್ತಲಲ್ಲೂ ಬೆಳಕು ಸೂಸುವ ದೀಪ, ಪಟಾಕಿಗಳ ಸದ್ದು, ಕೈಗೆ ನೋಮುದಾರ ಕಟ್ಟಿಕೊಂಡು ರುಚಿಯಾದ ಕಜ್ಜಾಯದ ಸವಿ ಸವಿಯುತ್ತಾ ಹಬ್ಬದಾಚರಣೆ ಮಾಡಲಾಯಿತು. </p>.<p>ಮನೆ ಮುಂದೆ ಸಾರಿಸಿ ರಂಗೋಲೆ ಹಾಕಿ ತಾವೂ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಬಿಸಿ ಕಜ್ಜಾಯ ಸೇರಿದಂತೆ ನಾನಾ ಅಡುಗೆಗಳನ್ನು ಮಾಡಲಾಗಿತ್ತು. ದೇವಾಲಯಕ್ಕೆ ತೆರಳಿ ದೇವರಿಗೆ ಕಜ್ಜಾಯದ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.</p>.<p>ಹೆಂಗೆಳೆಯರು, ಮುತ್ತೈದೆಯರು ಕಳಶ ಹೊತ್ತು ಶುಭದ ಸಂಕೇತ ವೀಳ್ಯದ ಎಲೆ ಬಟ್ಟಲು, ಅಡಿಕೆ ಹಾಗೂ ನೋಮುದಾರವನ್ನು ಭಗವಂತನ ಪಾದದ ಬಳಿ ಇಟ್ಟು ಪೂಜೆ ಸಲ್ಲಿಸಿ, ಕಜ್ಜಾಯವನ್ನು ಪ್ರಸಾದವಾಗಿ ಹಂಚಲಾಯಿತು. </p>.<p>ನಂತರ ಮನೆಗೆ ವಾಪಸ್ಸಾಗಿ ನೋಮುದಾರಗಳನ್ನು ಮನೆ ಮಂದಿಯ ಕೈ ತೋಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ಹೊಸದಾಗಿ ಮದುವೆಯಾದ ನವವಧು, ವರರು ಅರ್ಧ ದಿನ ಹೆಣ್ಣಿನ ತವರು ಮನೆಯಲ್ಲೂ ಇನ್ನರ್ಧ ದಿನ ಗಂಡನ ಮನೆಯಲ್ಲಿ ಕಾಲಿರಿಸಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದರು.</p>.<p>ಮನೆಗಳಲ್ಲಿ ಮಣ್ಣಿನ ಎಣ್ಣೆ ದೀಪಗಳನ್ನು ಬೆಳಗಿಸಲಾಯಿತು. ಪೇಟೆಯಲ್ಲಿ ಖರೀದಿಸಿದ ವಿವಿದ ಬಗೆಯ ಪಟಾಕಿ ಸಿಡಿಮದ್ದು, ರಾಕೆಟ್ ಹೂ ಮಳೆ, ಸುರುಸುರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.</p>.<p>ಅಮಾವಾಸ್ಯೆ ಕಾರಣ ಕೆಲವು ಮಂದಿ ಸೋಮವಾರ ಹಬ್ಬದಾಚರಣೆ ಮಾಡಿದರೆ, ಮಂಗಳವಾರ ಬಹಳಷ್ಟು ಮಂದಿ ಹಬ್ಬ ಆಚರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ</strong>: ಕಳೆದ ವಾರದಿಂದ ಬೆಳಗ್ಗೆ ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದ ಮಳೆಯು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೈಗೆ ಬಂದ ಹೂವಿನ ಫಸಲು ರೈತರ ಕೈಗೆ ಸಿಗದಂತಾಗಿದೆ. </p>.<p>ಮಾರುಕಟ್ಟೆಯಲ್ಲಿ ಹೂವಿಗೆ ಅಷ್ಟೇನೂ ದರವಿರಲಿಲ್ಲ. ಇದರಿಂದಾಗಿ ಗ್ರಾಹಕರು ನಿರಾಳವಾಗಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. </p>.<p>ತಾಲ್ಲೂಕಿನಾದ್ಯಂತ ಕತ್ತಲಲ್ಲೂ ಬೆಳಕು ಸೂಸುವ ದೀಪ, ಪಟಾಕಿಗಳ ಸದ್ದು, ಕೈಗೆ ನೋಮುದಾರ ಕಟ್ಟಿಕೊಂಡು ರುಚಿಯಾದ ಕಜ್ಜಾಯದ ಸವಿ ಸವಿಯುತ್ತಾ ಹಬ್ಬದಾಚರಣೆ ಮಾಡಲಾಯಿತು. </p>.<p>ಮನೆ ಮುಂದೆ ಸಾರಿಸಿ ರಂಗೋಲೆ ಹಾಕಿ ತಾವೂ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಬಿಸಿ ಕಜ್ಜಾಯ ಸೇರಿದಂತೆ ನಾನಾ ಅಡುಗೆಗಳನ್ನು ಮಾಡಲಾಗಿತ್ತು. ದೇವಾಲಯಕ್ಕೆ ತೆರಳಿ ದೇವರಿಗೆ ಕಜ್ಜಾಯದ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.</p>.<p>ಹೆಂಗೆಳೆಯರು, ಮುತ್ತೈದೆಯರು ಕಳಶ ಹೊತ್ತು ಶುಭದ ಸಂಕೇತ ವೀಳ್ಯದ ಎಲೆ ಬಟ್ಟಲು, ಅಡಿಕೆ ಹಾಗೂ ನೋಮುದಾರವನ್ನು ಭಗವಂತನ ಪಾದದ ಬಳಿ ಇಟ್ಟು ಪೂಜೆ ಸಲ್ಲಿಸಿ, ಕಜ್ಜಾಯವನ್ನು ಪ್ರಸಾದವಾಗಿ ಹಂಚಲಾಯಿತು. </p>.<p>ನಂತರ ಮನೆಗೆ ವಾಪಸ್ಸಾಗಿ ನೋಮುದಾರಗಳನ್ನು ಮನೆ ಮಂದಿಯ ಕೈ ತೋಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ಹೊಸದಾಗಿ ಮದುವೆಯಾದ ನವವಧು, ವರರು ಅರ್ಧ ದಿನ ಹೆಣ್ಣಿನ ತವರು ಮನೆಯಲ್ಲೂ ಇನ್ನರ್ಧ ದಿನ ಗಂಡನ ಮನೆಯಲ್ಲಿ ಕಾಲಿರಿಸಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದರು.</p>.<p>ಮನೆಗಳಲ್ಲಿ ಮಣ್ಣಿನ ಎಣ್ಣೆ ದೀಪಗಳನ್ನು ಬೆಳಗಿಸಲಾಯಿತು. ಪೇಟೆಯಲ್ಲಿ ಖರೀದಿಸಿದ ವಿವಿದ ಬಗೆಯ ಪಟಾಕಿ ಸಿಡಿಮದ್ದು, ರಾಕೆಟ್ ಹೂ ಮಳೆ, ಸುರುಸುರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.</p>.<p>ಅಮಾವಾಸ್ಯೆ ಕಾರಣ ಕೆಲವು ಮಂದಿ ಸೋಮವಾರ ಹಬ್ಬದಾಚರಣೆ ಮಾಡಿದರೆ, ಮಂಗಳವಾರ ಬಹಳಷ್ಟು ಮಂದಿ ಹಬ್ಬ ಆಚರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>