‘ಕೊರೊನಾ ಸಂಕಷ್ಟದಿಂದಾಗಿ ಗ್ರಾಮೀಣ ಭಾಗದ ಯುವ ಜನತೆ ಅದರಲ್ಲಿಯೂ ಪದವೀಧರರು ಉದ್ಯೋಗ ಮಾಡುತ್ತಿದ್ದವರು ಹಳ್ಳಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಆದ್ದರಿಂದ, ಸಂಕಷ್ಟ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ ತಲಾ ₹7,500 ರಂತೆ ಕನಿಷ್ಠ 6 ತಿಂಗಳು ನೀಡಬೇಕು. ನರೇಗಾ ಕೂಲಿಯನ್ನು ₹600ಕ್ಕೆ ಏರಿಕೆ ಮಾಡಬೇಕು‘ ಎಂದು ಆಗ್ರಹಿಸಿದರು.