<p>ಚಿಂತಾಮಣಿ: ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಘದ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು. </p>.<p>ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ, ‘ಸರ್ವೆಪಲ್ಲಿ ಎಸ್.ರಾಧಾಕೃಷ್ಣನ್ ಒಬ್ಬ ವ್ಯಕ್ತಿ ಆಗಿರದೆ, ಜ್ಞಾನದ ಸಂಕೇತವಾಗಿದ್ದರು. ವಿಶ್ವಕ್ಕೆ ಮಹಾನ್ ತತ್ವಜ್ಞಾನಿ ಶಿಕ್ಷಕ ರಾಧಾಕೃಷ್ಣನ್’ ಎಂದು ಅಭಿಪ್ರಾಯಪಟ್ಟರು.</p>.<p>ಶಿಕ್ಷಣ ಸಮುದಾಯಕ್ಕೆ ರಾಧಾಕೃಷ್ಣನ್ ಆದರ್ಶಪ್ರಾಯರಾಗಿದ್ದರು. ಆದರ್ಶ, ಪ್ರಾಮಾಣಿಕ ಶಿಕ್ಷಕರನ್ನು ಸಮಾಜ ಗುರುತಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ಸಮುದಾಯ ಜ್ಞಾನ ಬೆಳೆಸಿಕೊಳ್ಳಬೇಕು. ಆಳವಾದ ಅಧ್ಯಯನ ಮಾಡಿ ಆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಬೇಕು. ಉತ್ತಮ ಶಿಕ್ಷಕರಾಗಿದ್ದವರನ್ನು ಸಮಾಜ ಗುರುತಿಸಲಿದೆ ಎಂದರು.</p>.<p>ಶಿಕ್ಷಕರು ಕಲ್ಲಿನ ಹೃದಯದ ವಿದ್ಯಾರ್ಥಿಗಳನ್ನು ಕರಗಿಸಿ, ಪ್ರೀತಿ, ವಿಶ್ವಾಸ ಮೂಡಿಸಬೇಕು. ಶಿಕ್ಷಕರು ಕೇವಲ ಬಿಲ್ ಮತ್ತು ಬೆಲ್ಗಾಗಿ ಕೆಲಸ ಮಾಡಬಾರದು. ಸಮಾಜಕ್ಕಾಗಿ, ದೇಶ ಕಟ್ಟುವ ಶಿಲ್ಪಿಗಳನ್ನು ತಯಾರು ಮಾಡಿದರೆ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆ. ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.</p>.<p>ಸಾಮಾನ್ಯ ಶಿಕ್ಷಕ ಕೇವಲ ಬೋಧನೆ ಮಾಡುತ್ತಾನೆ. ಅತ್ಯುತ್ತಮ ಶಿಕ್ಷಕ ಮಕ್ಕಳಿಗೆ ಸ್ಫೂರ್ತಿ ತುಂಬಿಸಬೇಕು. ವಿದ್ಯಾರ್ಥಿಗಳ ಹೃದಯ ಗೆಲ್ಲಬೇಕು. ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಬೇಕು. ರಾಧಾಕೃಷ್ಣನ್ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ತಮ್ಮ ಜೀವನವನ್ನು ಮಾದರಿಯಾಗಿ ರೂಪಿಸಿಕೊಳ್ಳಬೇಕು ಎಂದರು. </p>.<p>ಸಂಘದ ಮಾಜಿ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಮಾತನಾಡಿ, ಸರ್ವೆಪಲ್ಲಿ ರಾಧಾಕೃಷ್ಣನ್ ಶಿಕ್ಷರಿಗೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತಿಹಾಸಪುಟಗಳಲ್ಲಿ ಸೇರಿದಂತಹ ಅನೇಕ ಮಹನೀಯರಿದ್ದಾರೆ. ಅವರಿಗೆ ನಮಿಸುವ ದಿನವಾಗಿದೆ ಎಂದು ನುಡಿದರು.</p>.<p>ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಲಂಚ ಪಡೆಯುವುದಿಲ್ಲ ಎಂದು ನಾಮಫಲಕ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಉಪನೋಂದಣಾಧಿಕಾರಿ ನಾರಾಯಣಪ್ಪ ಮತ್ತು ಉಪಖಜಾನೆಯ ಸುಬ್ಬಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಅಶೋಕ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ರವಣಪ್ಪ, ಗಂಗುಲಪ್ಪ, ಪ್ರಕಾಶರೆಡ್ಡಿ, ಎಂ.ಸಂಪಂಗಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ನೌಕರರು, ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಘದ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು. </p>.<p>ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ, ‘ಸರ್ವೆಪಲ್ಲಿ ಎಸ್.ರಾಧಾಕೃಷ್ಣನ್ ಒಬ್ಬ ವ್ಯಕ್ತಿ ಆಗಿರದೆ, ಜ್ಞಾನದ ಸಂಕೇತವಾಗಿದ್ದರು. ವಿಶ್ವಕ್ಕೆ ಮಹಾನ್ ತತ್ವಜ್ಞಾನಿ ಶಿಕ್ಷಕ ರಾಧಾಕೃಷ್ಣನ್’ ಎಂದು ಅಭಿಪ್ರಾಯಪಟ್ಟರು.</p>.<p>ಶಿಕ್ಷಣ ಸಮುದಾಯಕ್ಕೆ ರಾಧಾಕೃಷ್ಣನ್ ಆದರ್ಶಪ್ರಾಯರಾಗಿದ್ದರು. ಆದರ್ಶ, ಪ್ರಾಮಾಣಿಕ ಶಿಕ್ಷಕರನ್ನು ಸಮಾಜ ಗುರುತಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ಸಮುದಾಯ ಜ್ಞಾನ ಬೆಳೆಸಿಕೊಳ್ಳಬೇಕು. ಆಳವಾದ ಅಧ್ಯಯನ ಮಾಡಿ ಆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಬೇಕು. ಉತ್ತಮ ಶಿಕ್ಷಕರಾಗಿದ್ದವರನ್ನು ಸಮಾಜ ಗುರುತಿಸಲಿದೆ ಎಂದರು.</p>.<p>ಶಿಕ್ಷಕರು ಕಲ್ಲಿನ ಹೃದಯದ ವಿದ್ಯಾರ್ಥಿಗಳನ್ನು ಕರಗಿಸಿ, ಪ್ರೀತಿ, ವಿಶ್ವಾಸ ಮೂಡಿಸಬೇಕು. ಶಿಕ್ಷಕರು ಕೇವಲ ಬಿಲ್ ಮತ್ತು ಬೆಲ್ಗಾಗಿ ಕೆಲಸ ಮಾಡಬಾರದು. ಸಮಾಜಕ್ಕಾಗಿ, ದೇಶ ಕಟ್ಟುವ ಶಿಲ್ಪಿಗಳನ್ನು ತಯಾರು ಮಾಡಿದರೆ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆ. ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.</p>.<p>ಸಾಮಾನ್ಯ ಶಿಕ್ಷಕ ಕೇವಲ ಬೋಧನೆ ಮಾಡುತ್ತಾನೆ. ಅತ್ಯುತ್ತಮ ಶಿಕ್ಷಕ ಮಕ್ಕಳಿಗೆ ಸ್ಫೂರ್ತಿ ತುಂಬಿಸಬೇಕು. ವಿದ್ಯಾರ್ಥಿಗಳ ಹೃದಯ ಗೆಲ್ಲಬೇಕು. ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಬೇಕು. ರಾಧಾಕೃಷ್ಣನ್ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ತಮ್ಮ ಜೀವನವನ್ನು ಮಾದರಿಯಾಗಿ ರೂಪಿಸಿಕೊಳ್ಳಬೇಕು ಎಂದರು. </p>.<p>ಸಂಘದ ಮಾಜಿ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಮಾತನಾಡಿ, ಸರ್ವೆಪಲ್ಲಿ ರಾಧಾಕೃಷ್ಣನ್ ಶಿಕ್ಷರಿಗೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತಿಹಾಸಪುಟಗಳಲ್ಲಿ ಸೇರಿದಂತಹ ಅನೇಕ ಮಹನೀಯರಿದ್ದಾರೆ. ಅವರಿಗೆ ನಮಿಸುವ ದಿನವಾಗಿದೆ ಎಂದು ನುಡಿದರು.</p>.<p>ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಲಂಚ ಪಡೆಯುವುದಿಲ್ಲ ಎಂದು ನಾಮಫಲಕ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಉಪನೋಂದಣಾಧಿಕಾರಿ ನಾರಾಯಣಪ್ಪ ಮತ್ತು ಉಪಖಜಾನೆಯ ಸುಬ್ಬಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಅಶೋಕ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ರವಣಪ್ಪ, ಗಂಗುಲಪ್ಪ, ಪ್ರಕಾಶರೆಡ್ಡಿ, ಎಂ.ಸಂಪಂಗಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ನೌಕರರು, ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>