ಪಟ್ಟಣದ ಪೊಲೀಸ್ ವಸತಿಗೃಹ, ಕಾನ್ಸ್ಟೆಬಲ್ ಮನೆ ಹಾಗೂ ಯಂಡ್ರಕಾಯಲಪಲ್ಲಿ ಗ್ರಾಮದ ಸೋಂಕಿತರ ಕುಟುಂಬದ ಮನೆ ಸುತ್ತಲೂ ಸೀಲ್ಡೌನ್ ಮಾಡಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಸಿ.ಎನ್.ಸತ್ಯನಾರಾಯಣರೆಡ್ಡಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ್ ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ, ಗಂಟಲುಸ್ರಾವಪರೀಕ್ಷೆ ಮಾಡಿಸುವಂತೆ ಕುಟುಂಬದವರಿಗೆ ಹಾಗೂ ಸಂಪರ್ಕಿತರಿಗೆ ತಿಳಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ ರೆಡ್ಡಿ ತಿಳಿಸಿದ್ದಾರೆ.