<p><strong>ಚಿಕ್ಕಬಳ್ಳಾಪುರ</strong>: ‘ಒಂದು ಕೊಠಡಿಯಲ್ಲಿ ಮಲ್ಲಿಗೆ ಹೂವುಗಳನ್ನು ಇರಿಸಿ ಆ ನಂತರ ಹೂವುಗಳನ್ನು ಅಲ್ಲಿಂದ ಕೊಂಡೊಯ್ದರೂ ಕೆಲವು ಕಾಲ ಪರಿಮಳ ಇರುತ್ತದೆ. ಮಲ್ಲಿಗೆ ಹೂ ತನ್ನ ಅನುಪಸ್ಥಿತಿಯಲ್ಲಿಯೂ ಕಂಪು ಬೀರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಬದುಕು ಪರಿವರ್ತನೆ ಮಾಡಿಕೊಳ್ಳುವ ಶಿಕ್ಷಣ ಅಗತ್ಯ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. </p>.<p>ನಗರದ ಎಸ್ಜೆಸಿಐಟಿ ಆವರಣದಲ್ಲಿ ಶುಕ್ರವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ ‘ಶಿಕ್ಷಣ ಮಾನವೀಕರಣದತ್ತ ಒಂದು ಹೆಜ್ಜೆ’ ರಾಷ್ಟ್ರೀಯ ವಿಚಾರ ಸಂಕಿರಣದ ಸಾನ್ನಿಧ್ಯವಹಿಸಿ ಮಾತನಾಡಿದರು.</p>.<p>ತರಗತಿಗಳಲ್ಲಿ ಕಲಿತಿದ್ದನ್ನು ಒಂದು ಹಂತದಲ್ಲಿ ಮರೆತ ನಂತರ ನಿಮ್ಮಲ್ಲಿ ಉಳಿಯುವುದೇ ಸಾರ ವಿದ್ಯೆ. ಆ ಸಾರ ವಿದ್ಯೆಯು ಬದುಕನ್ನು ಬೆಳಗುವಂತೆ ಇರಬೇಕು. ಒಂದು ಸೆಮಿಸ್ಟರ್ನ ಕೊನೆಯಲ್ಲಿ ನಡೆಸುವ ಪರೀಕ್ಷೆ, ಅಂಕಗಳಿಕೆಯ ಹೊರತಾದ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಇದೆ ಎಂದು ಹೇಳಿದರು.</p>.<p>ಯಾರೇ ಒಬ್ಬರು ತಪ್ಪು ಮಾಡುವುದೇ ದೊಡ್ಡದಲ್ಲ. ಆದರೆ ಮಾಡಿದ ತಪ್ಪನ್ನು ಪದೇ ಪದೇ ಮಾಡುವುದು ಅಧಃಪತನ. ಒಬ್ಬ ಒಂದು ಸೂತ್ರ ಕಂಡು ಹಿಡಿದರೆ ಮತ್ತೊಬ್ಬ ಆ ಸೂತ್ರವನ್ನು ಕೊಂಡೊಯ್ಯುವನು. ಆ ಸೂತ್ರದಿಂದ ಕೆಲವರು ಜಗತ್ತನ್ನು ಬೆಳಗಿದರೆ ಮತ್ತೆ ಕೆಲವರು ಅಣುಬಾಂಬುಗಳನ್ನು ತಯಾರಿಸುವರು ಎಂದರು.</p>.<p>‘ನಾನು ಪ್ರಾಣಿ ಅಲ್ಲ ಎನ್ನುವ ವಿವೇಕ ನಮಗೆ ಇರಬೇಕು. ನಿಮ್ಮ ಉತ್ತರ ಪತ್ರಿಕೆಗಳನ್ನು ಯಾರೇ ಮೌಲ್ಯಮಾಪನ ಮಾಡಲಿ ಆದರೆ ನಿಮ್ಮನ್ನು ನೀವು ಮೌಲ್ಯ ಮಾಪನ ಮಾಡಿಕೊಳ್ಳುವುದು ಮಹತ್ವವಾದುದು. ಎರಡು ಅಂಕ ಕಡಿಮೆ ಆದರೆ ನೇಣು ಹಾಕಿಕೊಳ್ಳುವುದಲ್ಲ’ ಎಂದರು.</p>.<p>‘ನಿಮ್ಮ ಶಿಕ್ಷಣ ಪೂರ್ಣವಾದ ನಂತರ ನೀವು ಶೀಲಸಂಪನ್ನರೇ, ಮನಸ್ಸು, ಬುದ್ದಿ ಎತ್ತರದಲ್ಲಿ ಇದೆಯೇ, ಅಧ್ಯಾತ್ಮಕವಾಗಿ ವಿಕಾಸವಾಗಿದೆಯೇ...ಹೀಗೆ ನಾನಾ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಅವುಗಳಿಗೆ ಅಂಕ ಕೊಟ್ಟುಕೊಳ್ಳಬೇಕು. ಆಗ 100 ಅಂಕಗಳು ನಿಮಗೆ ಬಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ತೋರುತ್ತದೆ’ ಎಂದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಬಗ್ಗೆ ಹೇಳುತ್ತೇವೆ. ಆದರೆ ಉನ್ನತ ಶಿಕ್ಷಣದಲ್ಲಿ ಇದಕ್ಕೆ ವಿರುದ್ಧವಾದ ನಡೆಗಳು ಇವೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.</p>.<p>ಕಾಲೇಜುಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡುವುದರ ಜೊತೆಗೆ ಹೃದಯವಂತರು, ಮಾನವೀಯ ಗುಣವುಳ್ಳವರನ್ನಾಗಿ ಮಾಡಬೇಕು. ಕಾಲೇಜುಗಳು ಒಳ್ಳೆಯ ಮನುಷ್ಯರನ್ನು ಸೃಷ್ಟಿಸಬೇಕು ಎಂದರು.</p>.<p>ದೇಶದ ಭವಿಷ್ಯ ನಿಂತಿರುವುದು ಶಿಕ್ಷಕರ ಮೇಲೆ. ಆ ಶಿಕ್ಷಕರನ್ನು ಮಾನವೀಯ ಗೊಳಿಸಿದರೆ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಮಾನವೀಯಗೊಳಿಸುವರು ಎಂದು ಹೇಳಿದರು.</p>.<p>‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು’ ಎನ್ನುವ ಅನುಭೂತಿಯನ್ನು ಶಿಕ್ಷಣದಲ್ಲಿ ರೂಢಿಸಿಕೊಳ್ಳಬೇಕು. ಶಿಕ್ಷಣ ಮಾನವೀಯಕರಣವಾಗದಿದ್ದರೆ ವಿಶ್ವಕ್ಕೆ ಮುಂದಿನ ದಿನಗಳಲ್ಲಿ ಅಪಾಯ ಖಚಿತ. ಶಿಕ್ಷಣದಲ್ಲಿ ಮಾನವೀಯ ವಿಚಾರಗಳನ್ನು ಸೇರಿಸದಿದ್ದರೆ ಜಗತ್ತು ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು. </p>.<p>‘ಮಾನವೀಯ ಮೌಲ್ಯಗಳು ಮತ್ತು ಅವುಗಳ ಪ್ರಸ್ತುತತೆ’ ಕುರಿತು ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ, ‘ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಹೇಗೆ’ ಕುರಿತು ಪ್ರೊ.ಮೀನಾಕ್ಷಿ ಬಿಸ್ವಾಲ್, ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆಯ ಸವಾಲುಗಳು ಕುರಿತು ಪ್ರೊ.ಅಶೋಕ ಎಸ್.ಆಲೂರ ಮಾಹಿತಿ ಹಂಚಿಕೊಂಡರು. </p>.<p>ಅರ್ಬಾಜ್ ಪಾಷ, ಸಹನಾ, ಗೋಪಾಲಗೌಡ, ನಿರೂಪ್, ಕುಲಸಚಿವರಾದ ಸಿ.ಎನ್.ಶ್ರೀಧರ್, ಎನ್.ಲೋಕನಾಥ್, ವಿದ್ಯಾಧಿಕಾರಿ ವಸಂತಕುಮಾರ್, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಹುಬಲಿ ಜಿ.ಪಿ., ನಿವತ್ತ ಪ್ರಾಂಶುಪಾಲ ಪ್ರೊ.ಕೋಡಿ ರಂಗಪ್ಪ, ನರೇಂದ್ರ ಬಾಬು ಮತ್ತಿತರರು ಪಾಲ್ಗೊಂಡಿದ್ದರು.</p>.<p> ಮೆಟಾಫಿಸಿಕಲ್ ಕೋರ್ಸ್ ಆರಂಭಕ್ಕೆ ಸಲಹೆ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಯಲ್ಲಿ ಮೆಟಾಫಿಸಿಕಲ್ ಕೋರ್ಸ್ ಆರಂಭಿಸಲಾಗಿದೆ. ಇದರಿಂದ ನಾನೇನು ಎನ್ನುವುದು ವಿದ್ಯಾರ್ಥಿ ತಿಳಿಯಲು ಸಾಧ್ಯವಾಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಈ ಕೋರ್ಸ್ ಆರಂಭಕ್ಕೆ ಕ್ರಮವಹಿಸಲಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. </p>.<p>ಮಾನವೀಯ ಮೌಲ್ಯ; ವಿದ್ಯಾರ್ಥಿಗೆ ಪದಕ ಮುದ್ದೇನಹಳ್ಳಿಯ ಸತ್ಯಸಾಯಿ ವಿಶ್ವವಿದ್ಯಾಲಯವು ಮಾನವೀಯ ಶಿಕ್ಷಣದ ವಿಚಾರವಾಗಿ 7 ವಿವಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಅದರಲ್ಲಿ ನಮ್ಮ ವಿಶ್ವವಿದ್ಯಾಲಯವೂ ಇದೆ ಎಂದು ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು. ಉತ್ತರ ವಿವಿಯಡಿ 280 ಕಾಲೇಜುಗಳಿದ್ದು ಆಗಾಗ್ಗೆ ಈ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಪ್ರತಿ ವಿವಿಗೆ ಇಬ್ಬರು ಶಿಕ್ಷಕರನ್ನು ಸತ್ಯಸಾಯಿ ವಿವಿ ನೇಮಿಸಿದೆ. ಹೆಚ್ಚು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗೆ ಬಂಗಾರದ ಪದಕ ನೀಡುವರು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ‘ಒಂದು ಕೊಠಡಿಯಲ್ಲಿ ಮಲ್ಲಿಗೆ ಹೂವುಗಳನ್ನು ಇರಿಸಿ ಆ ನಂತರ ಹೂವುಗಳನ್ನು ಅಲ್ಲಿಂದ ಕೊಂಡೊಯ್ದರೂ ಕೆಲವು ಕಾಲ ಪರಿಮಳ ಇರುತ್ತದೆ. ಮಲ್ಲಿಗೆ ಹೂ ತನ್ನ ಅನುಪಸ್ಥಿತಿಯಲ್ಲಿಯೂ ಕಂಪು ಬೀರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಬದುಕು ಪರಿವರ್ತನೆ ಮಾಡಿಕೊಳ್ಳುವ ಶಿಕ್ಷಣ ಅಗತ್ಯ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. </p>.<p>ನಗರದ ಎಸ್ಜೆಸಿಐಟಿ ಆವರಣದಲ್ಲಿ ಶುಕ್ರವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ ‘ಶಿಕ್ಷಣ ಮಾನವೀಕರಣದತ್ತ ಒಂದು ಹೆಜ್ಜೆ’ ರಾಷ್ಟ್ರೀಯ ವಿಚಾರ ಸಂಕಿರಣದ ಸಾನ್ನಿಧ್ಯವಹಿಸಿ ಮಾತನಾಡಿದರು.</p>.<p>ತರಗತಿಗಳಲ್ಲಿ ಕಲಿತಿದ್ದನ್ನು ಒಂದು ಹಂತದಲ್ಲಿ ಮರೆತ ನಂತರ ನಿಮ್ಮಲ್ಲಿ ಉಳಿಯುವುದೇ ಸಾರ ವಿದ್ಯೆ. ಆ ಸಾರ ವಿದ್ಯೆಯು ಬದುಕನ್ನು ಬೆಳಗುವಂತೆ ಇರಬೇಕು. ಒಂದು ಸೆಮಿಸ್ಟರ್ನ ಕೊನೆಯಲ್ಲಿ ನಡೆಸುವ ಪರೀಕ್ಷೆ, ಅಂಕಗಳಿಕೆಯ ಹೊರತಾದ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಇದೆ ಎಂದು ಹೇಳಿದರು.</p>.<p>ಯಾರೇ ಒಬ್ಬರು ತಪ್ಪು ಮಾಡುವುದೇ ದೊಡ್ಡದಲ್ಲ. ಆದರೆ ಮಾಡಿದ ತಪ್ಪನ್ನು ಪದೇ ಪದೇ ಮಾಡುವುದು ಅಧಃಪತನ. ಒಬ್ಬ ಒಂದು ಸೂತ್ರ ಕಂಡು ಹಿಡಿದರೆ ಮತ್ತೊಬ್ಬ ಆ ಸೂತ್ರವನ್ನು ಕೊಂಡೊಯ್ಯುವನು. ಆ ಸೂತ್ರದಿಂದ ಕೆಲವರು ಜಗತ್ತನ್ನು ಬೆಳಗಿದರೆ ಮತ್ತೆ ಕೆಲವರು ಅಣುಬಾಂಬುಗಳನ್ನು ತಯಾರಿಸುವರು ಎಂದರು.</p>.<p>‘ನಾನು ಪ್ರಾಣಿ ಅಲ್ಲ ಎನ್ನುವ ವಿವೇಕ ನಮಗೆ ಇರಬೇಕು. ನಿಮ್ಮ ಉತ್ತರ ಪತ್ರಿಕೆಗಳನ್ನು ಯಾರೇ ಮೌಲ್ಯಮಾಪನ ಮಾಡಲಿ ಆದರೆ ನಿಮ್ಮನ್ನು ನೀವು ಮೌಲ್ಯ ಮಾಪನ ಮಾಡಿಕೊಳ್ಳುವುದು ಮಹತ್ವವಾದುದು. ಎರಡು ಅಂಕ ಕಡಿಮೆ ಆದರೆ ನೇಣು ಹಾಕಿಕೊಳ್ಳುವುದಲ್ಲ’ ಎಂದರು.</p>.<p>‘ನಿಮ್ಮ ಶಿಕ್ಷಣ ಪೂರ್ಣವಾದ ನಂತರ ನೀವು ಶೀಲಸಂಪನ್ನರೇ, ಮನಸ್ಸು, ಬುದ್ದಿ ಎತ್ತರದಲ್ಲಿ ಇದೆಯೇ, ಅಧ್ಯಾತ್ಮಕವಾಗಿ ವಿಕಾಸವಾಗಿದೆಯೇ...ಹೀಗೆ ನಾನಾ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಅವುಗಳಿಗೆ ಅಂಕ ಕೊಟ್ಟುಕೊಳ್ಳಬೇಕು. ಆಗ 100 ಅಂಕಗಳು ನಿಮಗೆ ಬಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ತೋರುತ್ತದೆ’ ಎಂದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಬಗ್ಗೆ ಹೇಳುತ್ತೇವೆ. ಆದರೆ ಉನ್ನತ ಶಿಕ್ಷಣದಲ್ಲಿ ಇದಕ್ಕೆ ವಿರುದ್ಧವಾದ ನಡೆಗಳು ಇವೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.</p>.<p>ಕಾಲೇಜುಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡುವುದರ ಜೊತೆಗೆ ಹೃದಯವಂತರು, ಮಾನವೀಯ ಗುಣವುಳ್ಳವರನ್ನಾಗಿ ಮಾಡಬೇಕು. ಕಾಲೇಜುಗಳು ಒಳ್ಳೆಯ ಮನುಷ್ಯರನ್ನು ಸೃಷ್ಟಿಸಬೇಕು ಎಂದರು.</p>.<p>ದೇಶದ ಭವಿಷ್ಯ ನಿಂತಿರುವುದು ಶಿಕ್ಷಕರ ಮೇಲೆ. ಆ ಶಿಕ್ಷಕರನ್ನು ಮಾನವೀಯ ಗೊಳಿಸಿದರೆ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಮಾನವೀಯಗೊಳಿಸುವರು ಎಂದು ಹೇಳಿದರು.</p>.<p>‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು’ ಎನ್ನುವ ಅನುಭೂತಿಯನ್ನು ಶಿಕ್ಷಣದಲ್ಲಿ ರೂಢಿಸಿಕೊಳ್ಳಬೇಕು. ಶಿಕ್ಷಣ ಮಾನವೀಯಕರಣವಾಗದಿದ್ದರೆ ವಿಶ್ವಕ್ಕೆ ಮುಂದಿನ ದಿನಗಳಲ್ಲಿ ಅಪಾಯ ಖಚಿತ. ಶಿಕ್ಷಣದಲ್ಲಿ ಮಾನವೀಯ ವಿಚಾರಗಳನ್ನು ಸೇರಿಸದಿದ್ದರೆ ಜಗತ್ತು ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು. </p>.<p>‘ಮಾನವೀಯ ಮೌಲ್ಯಗಳು ಮತ್ತು ಅವುಗಳ ಪ್ರಸ್ತುತತೆ’ ಕುರಿತು ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ, ‘ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಹೇಗೆ’ ಕುರಿತು ಪ್ರೊ.ಮೀನಾಕ್ಷಿ ಬಿಸ್ವಾಲ್, ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆಯ ಸವಾಲುಗಳು ಕುರಿತು ಪ್ರೊ.ಅಶೋಕ ಎಸ್.ಆಲೂರ ಮಾಹಿತಿ ಹಂಚಿಕೊಂಡರು. </p>.<p>ಅರ್ಬಾಜ್ ಪಾಷ, ಸಹನಾ, ಗೋಪಾಲಗೌಡ, ನಿರೂಪ್, ಕುಲಸಚಿವರಾದ ಸಿ.ಎನ್.ಶ್ರೀಧರ್, ಎನ್.ಲೋಕನಾಥ್, ವಿದ್ಯಾಧಿಕಾರಿ ವಸಂತಕುಮಾರ್, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಹುಬಲಿ ಜಿ.ಪಿ., ನಿವತ್ತ ಪ್ರಾಂಶುಪಾಲ ಪ್ರೊ.ಕೋಡಿ ರಂಗಪ್ಪ, ನರೇಂದ್ರ ಬಾಬು ಮತ್ತಿತರರು ಪಾಲ್ಗೊಂಡಿದ್ದರು.</p>.<p> ಮೆಟಾಫಿಸಿಕಲ್ ಕೋರ್ಸ್ ಆರಂಭಕ್ಕೆ ಸಲಹೆ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಯಲ್ಲಿ ಮೆಟಾಫಿಸಿಕಲ್ ಕೋರ್ಸ್ ಆರಂಭಿಸಲಾಗಿದೆ. ಇದರಿಂದ ನಾನೇನು ಎನ್ನುವುದು ವಿದ್ಯಾರ್ಥಿ ತಿಳಿಯಲು ಸಾಧ್ಯವಾಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಈ ಕೋರ್ಸ್ ಆರಂಭಕ್ಕೆ ಕ್ರಮವಹಿಸಲಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. </p>.<p>ಮಾನವೀಯ ಮೌಲ್ಯ; ವಿದ್ಯಾರ್ಥಿಗೆ ಪದಕ ಮುದ್ದೇನಹಳ್ಳಿಯ ಸತ್ಯಸಾಯಿ ವಿಶ್ವವಿದ್ಯಾಲಯವು ಮಾನವೀಯ ಶಿಕ್ಷಣದ ವಿಚಾರವಾಗಿ 7 ವಿವಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಅದರಲ್ಲಿ ನಮ್ಮ ವಿಶ್ವವಿದ್ಯಾಲಯವೂ ಇದೆ ಎಂದು ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು. ಉತ್ತರ ವಿವಿಯಡಿ 280 ಕಾಲೇಜುಗಳಿದ್ದು ಆಗಾಗ್ಗೆ ಈ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಪ್ರತಿ ವಿವಿಗೆ ಇಬ್ಬರು ಶಿಕ್ಷಕರನ್ನು ಸತ್ಯಸಾಯಿ ವಿವಿ ನೇಮಿಸಿದೆ. ಹೆಚ್ಚು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗೆ ಬಂಗಾರದ ಪದಕ ನೀಡುವರು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>