ಗುರುವಾರ ಈ ಇಬ್ಬರು ಚಾಲಕರು ಪೊಲೀಸ್ ಬಂದೋಬಸ್ತಿನಲ್ಲಿ ಬಸ್ಗಳನ್ನು ಚಲಾಯಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಿಕ್ಕಬಳ್ಳಾಪುರ ಘಟಕದ ಸಿಬ್ಬಂದಿ ಜೆ.ಎಸ್.ಚಂದ್ರು, ರಾಮಾಂಜಿ ಮತ್ತು ರಮೇಶ್ ‘ಕೆಎಸ್ಆರ್ಟಿಸಿ ಸಿಬಿಪಿ’ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಎಚ್.ವಿ.ಸತ್ಯನಾರಾಯಣರಾವ್ ಮತ್ತು ಬಿ.ವಿ.ಕೆ.ಮೂರ್ತಿ ಅವರ ಭಾವಚಿತ್ರದ ಮೇಲೆ ಶ್ರದ್ಧಾಂಜಲಿ ಎಂದು ಬರೆದು, ಆಕ್ಷೇಪಾರ್ಹ ಬರಹದೊಂದಿಗೆ ಹಿನ್ನೆಲೆಯಲ್ಲಿ ಶೋಕಗೀತೆ ಅಳವಡಿಸಿ ವಿಡಿಯೊ ಸಹ ಮಾಡಿದ್ದಾರೆ. ನಂತರ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.