ಶಿಡ್ಲಘಟ್ಟದ ಗೌಡನ ಕೆರೆಯಲ್ಲಿ ಸುರಿಯುತ್ತಿರುವ ನಗರದಲ್ಲಿ ಕೆಡವುವ ಹಳೆ ಮನೆಗಳ ತ್ಯಾಜ್ಯ
ಅರಣ್ಯ ಇಲಾಖೆಗೆ ಸೇರಿದ ಕೆರೆ ಎಚ್.ಎನ್. ವ್ಯಾಲಿ ನೀರು ಹರಿದು ಬರುವ ನಮ್ಮ ತಾಲ್ಲೂಕಿನ ಅಮ್ಮನ ಕೆರೆ ಮತ್ತು ಭದ್ರನ ಕೆರೆಯಲ್ಲಿ ಜಾಲಿ ಮರಗಳನ್ನು ತೆರವು ಮಾಡಲು ಮುಂದಾದಾಗ ಅರಣ್ಯ ಇಲಾಖೆಯವರು ತಡೆಯೊಡ್ಡಿ ಕೇಸ್ ದಾಖಲಿಸಿದ್ದಾರೆ. ಗೌಡನ ಕೆರೆಯು ಡೀಮ್ಡ್ ಅರಣ್ಯಕ್ಕೆ ಸೇರಿರುವುದರಿಂದ ಜಾಲಿ ಮರಗಳನ್ನು ತೆರವು ಮಾಡಲು ಆಗುತ್ತಿಲ್ಲ.
ಭಕ್ತರಹಳ್ಳಿ ಬೈರೇಗೌಡ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ
ಒತ್ತುವರಿ ತೆರವು ಮಾಡುತ್ತಿಲ್ಲ ಶಿಡ್ಲಘಟ್ಟ ತಾಲ್ಲೂಕಿನ ಭದ್ರನ ಕೆರೆಯನ್ನು ಹಲವು ವರ್ಷಗಳ ಹಿಂದೆಯೇ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಒತ್ತುವರಿ ತೆರವು ಮಾಡಿದ್ದರು. ಆದರೆ ನಗರಕ್ಕೆ ಅಂಟಿಕೊಂಡಂತಿರುವ ಗೌಡನ ಕೆರೆಯ ಒತ್ತುವರಿ ಮಾತ್ರ ತೆರವುಗೊಳಿಸಿಲ್ಲ. ಗೌಡನ ಕೆರೆಯನ್ನು ಹಲವಾರು ಮಂದಿ ಪ್ರಮುಖರೇ ಒತ್ತುವರಿ ಮಾಡಿಕೊಂಡಿದ್ದಾರೆ. ನಗರದ ಅಂಚಿನಲ್ಲಿರುವುದರಿಂದ ಇಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ತಹಶೀಲ್ದಾರ್ಗೆ ರೈತ ಸಂಘದಿಂದ ಮನವಿ ಸಲ್ಲಿಸಿದ್ದರೂ ಒತ್ತುವರಿ ತೆರವು ಮಾಡುತ್ತಿಲ್ಲ.
ರವಿಪ್ರಕಾಶ್ ರೈತ ಸಂಘ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ
ಜಾನುವಾರುಗಳಿಗೆ ಕಂಟಕ ನಾನು 8 ಹಸುಗಳನ್ನು ಸಾಕಿದ್ದು ಪ್ರತಿದಿನವೂ ಮೇಯಿಸಲೆಂದು ಗೌಡನಕೆರೆಯೊಳಗೆ ಕರೆದುಕೊಂಡು ಹೋಗುತ್ತೇನೆ. ನನ್ನೊಂದಿಗೆ ದೇಶದಪೇಟೆಯ ಕುಮಾರ್ 4 ಹಸುಗಳನ್ನು ತರುತ್ತಾರೆ. ಆನೂರಿನ ರೈತರೊಬ್ಬರು ಹತ್ತು ಹಸುಗಳನ್ನು ಕರೆತರುತ್ತಾರೆ. ಉಲ್ಲೂರುಪೇಟೆಯ ಅನಿಲ್ 20 ಕುರಿ ಮೇಕೆಗಳನ್ನು ಹೊಡೆದುಕೊಂಡು ಬರುತ್ತಾರೆ. ಇಲ್ಲಿ ಸುರಿಯುವ ತ್ಯಾಜ್ಯ ಕೆರೆಗಷ್ಟೇ ಅಲ್ಲ ನಮ್ಮ ಜಾನುವಾರುಗಳ ಪ್ರಾಣ ಕೂಡ ತೆಗೆಯುತ್ತಿದೆ