‘ನಗರಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಬರುತ್ತಾರೆ ಎಂದು ಪೊಲೀಸರು ಪಟ್ಟಣದ ಮುಖ್ಯರಸ್ತೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಿ, ಜೀರೊ ಟ್ರಾಫಿಕ್ ಮಾಡಿದ್ದರು. ಆದರೆ, ನಿತ್ಯ ಮುಖ್ಯರಸ್ತೆಯಲ್ಲಿನ ವಾಹನ ದಟ್ಟಣೆ ಸಮಸ್ಯೆ ಬಗ್ಗೆ ಮಾತ್ರ ಪೊಲೀಸರು ಗಮನ ಹರಿಸುವುದಿಲ್ಲ. ಪಾದಚಾರಿ ಮಾರ್ಗ ಒತ್ತುವರಿ, ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ರಸ್ತೆ ಮಧ್ಯೆ ಜನರು ಸಂಚರಿಸುತ್ತಿದ್ದರೂ ಪೊಲೀಸರು ಗಮನ ಹರಿಸುವುದಿಲ್ಲ’ ಎಂದು ಹಿರಿಯ ನಾಗರಿಕ ಕಾರಕೂರಪ್ಪ ದೂರುತ್ತಾರೆ.