<p><strong>ಗುಡಿಬಂಡೆ</strong>: ದಂಪತಿ ಮಧ್ಯೆ ಶುಕ್ರವಾರ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ.</p><p>ಪಟ್ಟಣದ ಜಾಮಿಯಾ ಮಸೀದಿಯ ತರಕಾರಿ ಮಾರುಕಟ್ಟೆ ಬಳಿ ವಾಸವಾಗಿದ್ದ ರಮೀಜಾಬಿ (35) ಕೊಲೆಯಾದ ಮಹಿಳೆ.</p><p>ಆಕೆಯ ಪತಿ ಬಾಬಾಜಾನ್ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p><p>ಗಂಡ, ಹೆಂಡತಿ ಮಧ್ಯೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮೇಲೆ ಗಂಡ ಮಚ್ಚಿನಿಂದ ತಲೆಗೆ ಹೊಡೆದ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.</p><p>ರಮೀಜಾಬಿ ಮತ್ತು ಬಾಬಾಜಾನ್ ಗುಜರಿ ವ್ಯಾಪಾರ ಮಾಡುತ್ತಿದ್ದು, 3 ವರ್ಷಗಳಿಂದ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದರು. ದಂಪತಿ ಮಧ್ಯೆ ಹಣಕಾಸಿನ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ.</p><p>ರಮೀಜಾಬಿ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಮೂಲದವರು. ಬಾಬಾಜಾನ್ ಚಿಕ್ಕಬಳ್ಳಾಪುರ ಕಂದವಾರ ನಿವಾಸಿ. ರಮೀಜಾಬಿಗೆ ಈ ಮೊದಲೇ ಮುಳಬಾಗಿಲಿನ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾಗಿ ಮಕ್ಕಳು ಇದ್ದವು. ಮೊದಲ ಪತಿಯನ್ನು ಬಿಟ್ಟು ಬಾಬಾಜಾನ್ ಜೊತೆ ಎರಡನೇ ಮದುವೆ ಯಾಗಿದ್ದಾರೆ. ಬಾಬಾಜಾನ್ಗೂ ಸಹ ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರು. ಮೊದಲ ಪತ್ನಿಯನ್ನು ಆತ ಬಿಟ್ಟಿದ್ದ.</p><p>ಶುಕ್ರವಾರ ಮಧ್ಯಾಹ್ನದಿಂದ ರಮೀಜಾಬಿ ಮತ್ತು ಬಾಬಾಜಾನ್ ಮಧ್ಯೆಜಗಳವಾಗಿತ್ತು. ಅಕ್ಕಪಕ್ಕದ ಜನರು ಜಗಳ ಬಿಡಿಸಿದ್ದರು. ಸಂಜೆ ಬಾಬಾಜಾನ್ ಕುಡಿದು ಬಂದು ರಮೀಜಾಬಿ ಮೇಲೆ ಮಚ್ಚಿನಿಂದ ಹಲ್ಲೆ ನಡೆ ಸಿದ್ದಾನೆ. </p><p>ಸ್ಥಳಿಯರು ಆರೋಪಿಯನ್ನು ಮನೆ ಒಳಗೆ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ</strong>: ದಂಪತಿ ಮಧ್ಯೆ ಶುಕ್ರವಾರ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ.</p><p>ಪಟ್ಟಣದ ಜಾಮಿಯಾ ಮಸೀದಿಯ ತರಕಾರಿ ಮಾರುಕಟ್ಟೆ ಬಳಿ ವಾಸವಾಗಿದ್ದ ರಮೀಜಾಬಿ (35) ಕೊಲೆಯಾದ ಮಹಿಳೆ.</p><p>ಆಕೆಯ ಪತಿ ಬಾಬಾಜಾನ್ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p><p>ಗಂಡ, ಹೆಂಡತಿ ಮಧ್ಯೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮೇಲೆ ಗಂಡ ಮಚ್ಚಿನಿಂದ ತಲೆಗೆ ಹೊಡೆದ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.</p><p>ರಮೀಜಾಬಿ ಮತ್ತು ಬಾಬಾಜಾನ್ ಗುಜರಿ ವ್ಯಾಪಾರ ಮಾಡುತ್ತಿದ್ದು, 3 ವರ್ಷಗಳಿಂದ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದರು. ದಂಪತಿ ಮಧ್ಯೆ ಹಣಕಾಸಿನ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ.</p><p>ರಮೀಜಾಬಿ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಮೂಲದವರು. ಬಾಬಾಜಾನ್ ಚಿಕ್ಕಬಳ್ಳಾಪುರ ಕಂದವಾರ ನಿವಾಸಿ. ರಮೀಜಾಬಿಗೆ ಈ ಮೊದಲೇ ಮುಳಬಾಗಿಲಿನ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾಗಿ ಮಕ್ಕಳು ಇದ್ದವು. ಮೊದಲ ಪತಿಯನ್ನು ಬಿಟ್ಟು ಬಾಬಾಜಾನ್ ಜೊತೆ ಎರಡನೇ ಮದುವೆ ಯಾಗಿದ್ದಾರೆ. ಬಾಬಾಜಾನ್ಗೂ ಸಹ ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರು. ಮೊದಲ ಪತ್ನಿಯನ್ನು ಆತ ಬಿಟ್ಟಿದ್ದ.</p><p>ಶುಕ್ರವಾರ ಮಧ್ಯಾಹ್ನದಿಂದ ರಮೀಜಾಬಿ ಮತ್ತು ಬಾಬಾಜಾನ್ ಮಧ್ಯೆಜಗಳವಾಗಿತ್ತು. ಅಕ್ಕಪಕ್ಕದ ಜನರು ಜಗಳ ಬಿಡಿಸಿದ್ದರು. ಸಂಜೆ ಬಾಬಾಜಾನ್ ಕುಡಿದು ಬಂದು ರಮೀಜಾಬಿ ಮೇಲೆ ಮಚ್ಚಿನಿಂದ ಹಲ್ಲೆ ನಡೆ ಸಿದ್ದಾನೆ. </p><p>ಸ್ಥಳಿಯರು ಆರೋಪಿಯನ್ನು ಮನೆ ಒಳಗೆ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>