‘ಸ್ನೇಹಿತರಲ್ಲಿ ವಿಷಯ ಪ್ರಸ್ತಾಪಿಸಿದಾಗ ಅವರು ನನ್ನನ್ನು ಹುರಿದುಂಬಿಸಿ ಸಹಾಯ ಮಾಡಿದ್ದಾರೆ. ಈಗ ‘ಅಂಬಾರಿ’ ಸೇವೆಯಿಂದ ಶಿಡ್ಲಘಟ್ಟ ನಗರ ಹಾಗೂ ಸುತ್ತ-ಮುತ್ತಲಿನ 5 ಕಿ.ಮೀ ನಲ್ಲಿ ತಿಂಡಿ-ತಿನಿಸು, ತರಕಾರಿಗಳು, ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ವಾಟ್ಸ್ ಆ್ಯಪ್ ಅಥವಾ ಕರೆಯ ಮೂಲಕ ಜನರು ತಮಗೆ ಬೇಕಾದ ಸಾಮಗ್ರಿ ಕಾಯ್ದಿರಿಸಿ ಹಣ ಪಾವತಿ ಮಾಡಿದರೆ ಅವರ ಮನೆಯ ಬಾಗಿಲಿಗೆ ಕಡಿಮೆ ಸಮಯದಲ್ಲಿ ತಲುಪಿಸುತ್ತಿದ್ದೇವೆ. ಈ ಸೇವೆಯಿಂದ ಕಚೇರಿಗಳಲ್ಲಿ ಕೆಲಸ ಮಾಡುವವರು, ಹಿರಿಯ ನಾಗರಿಕರು ಹಾಗೂ ಯುವಕರಿಗೆ ಉಪಯೋಗವಾಗಿದೆ’ ಎನ್ನುತ್ತಾರೆ.