<p><strong>ಶಿಡ್ಲಘಟ್ಟ: </strong>ಕಣ್ಣು ಕಾಣದವರೂ ಚಿತ್ರ ಮಂದಿರದಲ್ಲಿ ಕುಳಿತು ಕೇಳಿಸಿಕೊಂಡು ಚಿತ್ರವನ್ನು ಆನಂದಿಸಿದ ಸಂಗತಿ ಪಟ್ಟಣದ ಚಿತ್ರಮಂದಿರದಲ್ಲಿ ಸೋಮ ವಾರ ನಡೆದಿದೆ.<br /> <br /> ಪಟ್ಟಣದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಮ ವಾರದ ದಿನ ವಿಶಿಷ್ಟ ವಾಗಿತ್ತು. ಮಯೂರ ಚಿತ್ರಮಂದಿರ ದಲ್ಲಿ ಪ್ರದರ್ಶಿತ ವಾಗುತ್ತಿರುವ ತಾಲ್ಲೂಕಿನ ಬೆಳ್ಳೂಟಿಯ ಎನ್. ವೀರೇಂದ್ರಬಾಬು ನಟಿಸಿರುವ `ಸ್ವಯಂಕೃಷಿ~ ಚಲನಚಿತ್ರಕ್ಕೆ 60 ಮಂದಿ ಅಂಧ ಮಕ್ಕಳು ಆಗಮಿಸಿದ್ದರು. ಕೆಲ ಮಕ್ಕಳಿಗೆ ಭಾಗಶಃ ಅಂಧತ್ವ ವಿದ್ದರೆ, ಕೆಲವರಿಗೆ ಏನೂ ಕಾಣಿಸದು. ಆದರೂ ಅವರೆಲ್ಲ ಕೇಳಿಸಿಕೊಂಡು ಪಕ್ಕದವರಿಂದ ಹೇಳಿಸಿಕೊಳ್ಳುತ್ತಾ ಚಲನಚಿತ್ರವನ್ನು ಆನಂದಿಸಿದರು.<br /> <br /> `ಎನ್.ವೀರೇಂದ್ರಬಾಬು ಅವರ ಜನ್ಮದಿನವನ್ನು ಅವರ ಪತ್ನಿ ಚಂದ್ರಿಕಾ ಅವರು ಆಶಾಕಿರಣ ಅಂಧಮಕ್ಕಳ ಶಾಲೆ ಯಲ್ಲಿ ಆಚರಿಸಿದ್ದರು. ಆಗ ಮಕ್ಕಳೆಲ್ಲ ನಾವೂ ಚಿತ್ರವನ್ನು ನೋಡ ಬೇಕೆಂದು ಹೇಳಿಕೊಂಡಿದ್ದರು. <br /> <br /> ನಾವಿಲ್ಲಿ ರೇಡಿಯೋ ಮತ್ತು ದೂರದರ್ಶನದಲ್ಲಿ ಬರುವುದನ್ನು ಕೇಳಿಸಿಕೊಳ್ಳುತ್ತೇವೆ. ಅದೇ ರೀತಿ ಚಲನಚಿತ್ರವನ್ನೂ ಕೇಳಿಸಿಕೊಳ್ಳು ತ್ತೇವೆಂದು ಹೇಳಿದ್ದರು. ಹಾಗಾಗಿ ನಾವು ಕೆಲವು ಸ್ನೇಹಿತರು ಹಣವನ್ನು ಒಟ್ಟು ಮಾಡಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತಂದಿದ್ದೇವೆ~ ಎಂದು ಅಪ್ಪೇಗೌಡನಹಳ್ಳಿಯ ಶ್ರಿರಾಮ ಯುವಕಸಂಘದ ಎ.ಎಂ. ತ್ಯಾಗರಾಜ ತಿಳಿಸಿದರು.<br /> <br /> `ನಾವು ಎಂದೂ ಚಿತ್ರಮಂದಿರಕ್ಕೆ ಹೋಗಿರಲಿಲ್ಲ. ಈ ಅಣ್ಣಂದಿರಿಂದಾಗಿ ಸ್ವಯಂ ಕೃಷಿ ಚಿತ್ರಕ್ಕೆ ಬಂದೆವು. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಸಂದೇಶವಿದೆ. ಹಾಡುಗಳು ಇಂಪಾ ಗಿವೆ, ನಮಗೆಲ್ಲಾ ಹೊಸ ಅನುಭವ ವಾಯಿತು ಎಂದು ಅಂಧ ಮಕ್ಕಳು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ಕಣ್ಣು ಕಾಣದವರೂ ಚಿತ್ರ ಮಂದಿರದಲ್ಲಿ ಕುಳಿತು ಕೇಳಿಸಿಕೊಂಡು ಚಿತ್ರವನ್ನು ಆನಂದಿಸಿದ ಸಂಗತಿ ಪಟ್ಟಣದ ಚಿತ್ರಮಂದಿರದಲ್ಲಿ ಸೋಮ ವಾರ ನಡೆದಿದೆ.<br /> <br /> ಪಟ್ಟಣದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಮ ವಾರದ ದಿನ ವಿಶಿಷ್ಟ ವಾಗಿತ್ತು. ಮಯೂರ ಚಿತ್ರಮಂದಿರ ದಲ್ಲಿ ಪ್ರದರ್ಶಿತ ವಾಗುತ್ತಿರುವ ತಾಲ್ಲೂಕಿನ ಬೆಳ್ಳೂಟಿಯ ಎನ್. ವೀರೇಂದ್ರಬಾಬು ನಟಿಸಿರುವ `ಸ್ವಯಂಕೃಷಿ~ ಚಲನಚಿತ್ರಕ್ಕೆ 60 ಮಂದಿ ಅಂಧ ಮಕ್ಕಳು ಆಗಮಿಸಿದ್ದರು. ಕೆಲ ಮಕ್ಕಳಿಗೆ ಭಾಗಶಃ ಅಂಧತ್ವ ವಿದ್ದರೆ, ಕೆಲವರಿಗೆ ಏನೂ ಕಾಣಿಸದು. ಆದರೂ ಅವರೆಲ್ಲ ಕೇಳಿಸಿಕೊಂಡು ಪಕ್ಕದವರಿಂದ ಹೇಳಿಸಿಕೊಳ್ಳುತ್ತಾ ಚಲನಚಿತ್ರವನ್ನು ಆನಂದಿಸಿದರು.<br /> <br /> `ಎನ್.ವೀರೇಂದ್ರಬಾಬು ಅವರ ಜನ್ಮದಿನವನ್ನು ಅವರ ಪತ್ನಿ ಚಂದ್ರಿಕಾ ಅವರು ಆಶಾಕಿರಣ ಅಂಧಮಕ್ಕಳ ಶಾಲೆ ಯಲ್ಲಿ ಆಚರಿಸಿದ್ದರು. ಆಗ ಮಕ್ಕಳೆಲ್ಲ ನಾವೂ ಚಿತ್ರವನ್ನು ನೋಡ ಬೇಕೆಂದು ಹೇಳಿಕೊಂಡಿದ್ದರು. <br /> <br /> ನಾವಿಲ್ಲಿ ರೇಡಿಯೋ ಮತ್ತು ದೂರದರ್ಶನದಲ್ಲಿ ಬರುವುದನ್ನು ಕೇಳಿಸಿಕೊಳ್ಳುತ್ತೇವೆ. ಅದೇ ರೀತಿ ಚಲನಚಿತ್ರವನ್ನೂ ಕೇಳಿಸಿಕೊಳ್ಳು ತ್ತೇವೆಂದು ಹೇಳಿದ್ದರು. ಹಾಗಾಗಿ ನಾವು ಕೆಲವು ಸ್ನೇಹಿತರು ಹಣವನ್ನು ಒಟ್ಟು ಮಾಡಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತಂದಿದ್ದೇವೆ~ ಎಂದು ಅಪ್ಪೇಗೌಡನಹಳ್ಳಿಯ ಶ್ರಿರಾಮ ಯುವಕಸಂಘದ ಎ.ಎಂ. ತ್ಯಾಗರಾಜ ತಿಳಿಸಿದರು.<br /> <br /> `ನಾವು ಎಂದೂ ಚಿತ್ರಮಂದಿರಕ್ಕೆ ಹೋಗಿರಲಿಲ್ಲ. ಈ ಅಣ್ಣಂದಿರಿಂದಾಗಿ ಸ್ವಯಂ ಕೃಷಿ ಚಿತ್ರಕ್ಕೆ ಬಂದೆವು. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಸಂದೇಶವಿದೆ. ಹಾಡುಗಳು ಇಂಪಾ ಗಿವೆ, ನಮಗೆಲ್ಲಾ ಹೊಸ ಅನುಭವ ವಾಯಿತು ಎಂದು ಅಂಧ ಮಕ್ಕಳು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>