‘ಹಿರಣ್ಣಯ್ಯ ಅವರ ಹಾಸ್ಯ ಪ್ರಜ್ಞೆಗೆ ಅವರಿಗೆ ಅವರೇ ಸಾಟಿ. ಮೊನಚು ಮಾತುಗಳಿಂದ ಸಮಾಜಕ್ಕೆ ತಿವಿಯುತ್ತಿದ್ದ ಅವರು, ಭ್ರಷ್ಟಾಚಾರದ ವಿರುದ್ಧ ಜನರನ್ನು ಜಾಗೃತಗೊಳಿಸುತ್ತಿದ್ದರು. ಅದರ ಭಾಗವಾಗಿಯೇ ಗುಂಡೂರಾವ್, ನಿಜಲಿಂಗಪ್ಪ, ಬಂಗಾರಪ್ಪ ಸೇರಿದಂತೆ ಯಡಿಯೂರಪ್ಪ ಆದಿಯಾಗಿ ಅನೇಕ ಮುಖ್ಯಮಂತ್ರಿಗಳ ವಿರುದ್ಧ ನಾಟಕಗಳಲ್ಲಿ ಪರೋಕ್ಷವಾಗಿ ವಾಗ್ದಾಳಿ ಮಾಡುತ್ತ ತಮ್ಮೊಳಗಿನ ಹೋರಾಟದ ಕಿಚ್ಚನ್ನು ಇತರರಿಗೆ ಪಸರಿಸುವ ಕೆಲಸ ಮಾಡುತ್ತಿದ್ದರು’ ಎಂದು ಸ್ಮರಿಸಿಕೊಂಡರು.