ಕಾರು ಕಡೂರು ಕಡೆಗೆ, ಬೈಕು ಚಿಕ್ಕಮಗಳೂರು ಕಡೆಗೆ ಸಂಚರಿಸುತ್ತಿತ್ತು. ಅವಘಡದಲ್ಲಿ ಕಾರು ಮತ್ತು ಬೈಕು ಜಖಂ ಗೊಂಡಿವೆ.
‘ಸಿದ್ದರಾಮಪ್ಪ ಅವರು ಇನ್ನು ಎರಡ್ಮೂರು ದಿನದಲ್ಲಿ ಎಎಸ್ಐ (ಸಹಾಯಕ ಸಬ್ ಇನ್ಸ್ಪೆಕ್ಟರ್) ಹುದ್ದೆಗೆ ಬಡ್ತಿಯಾಗುವ ನಿರೀಕ್ಷೆಯಲ್ಲಿದ್ದರು. ಚಿಕ್ಕಮಗಳೂರಿನ ಕಲ್ದೊಡ್ಡಿಯ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೂಲತಃ ಅಜ್ಜಂಪುರ ತಾಲ್ಲೂಕಿನ ತಮ್ಮಟದಹಳ್ಳಿಯವರು‘ ಎಂದು ಅವರ ಸಹಪಾಠಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.