<p><strong>ಬೀರೂರು</strong>: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಕ್ಕೆ ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಪೂರೈಸುವ ‘ಅಮೃತ್ ಜ್ಯೋತಿ’ ಯೋಜನೆಗೆ ಬೀರೂರು ಉಪವಿಭಾಗದಲ್ಲಿ 678 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೆಸ್ಕಾಂ ಕಿರಿಯ ಎಂಜಿನಿಯರ್ ಜೆ.ಟಿ.ರಮೇಶ್ ತಿಳಿಸಿದರು.</p>.<p>ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಇದೆ. ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಕಡು ಬಡವರಿಗೆ ಉಚಿತ ಸಂಪರ್ಕ ಕಲ್ಪಿಸುವ ‘ಬೆಳಕು’ ಯೋಜನೆಯಡಿ 102 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ದಾಖಲೆ ಸರಿ ಇರದ 4 ಅರ್ಜಿಗಳು ತಿರಸ್ಕೃತವಾಗಿವೆ ಎಂದರು.</p>.<p>ಒಂದೇ ಪರಿವರ್ತಕದಿಂದ 28 ಕೊಳವೆ ಬಾವಿಗಳಿಗೆ ಸಂಪರ್ಕ ನೀಡಿದ್ದು, ಸಮರ್ಪಕ ವಿದ್ಯುತ್ ಲಭಿಸುತ್ತಿಲ್ಲ ಎಂದುಮುಗಳಿಕಟ್ಟೆಯ ಗ್ರಾಹಕ ಪಾರ್ಥಸಾರಥಿ ಹಾಗೂ ಜೋಡಿ ತಿಮ್ಮಾಪುರದ ಓಂಕಾರಪ್ಪ ಅಳಲು ತೋಡಿಕೊಂಡರು.</p>.<p>ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಂತರ, ಪರಿಹಾರ ನೀಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.</p>.<p>ವಿದ್ಯುತ್ ಕಂಬ ವಾಲಿದ್ದು, ಸರಿಪಡಿಸಬೇಕು. ಪಂಪ್ಸೆಟ್ಗೆ ಸಂಪರ್ಕ ಕಲ್ಪಿಸಬೇಕು ಎಂದು ಜೋಡಿತಿಮ್ಮಾಪುರದ ಶೇಷಪ್ಪ ಮನವಿ ಮಾಡಿದರು.</p>.<p>ಗ್ರಾಮಕ್ಕೆ ನಿರಂತರ ಜ್ಯೋತಿ ಪರಿವರ್ತಕದಿಂದ ವಿದ್ಯುತ್ ಸರಬರಾಜು ಮಾಡುವಂತೆ ಗಾಳಿಹಳ್ಳಿ ಗ್ರಾಮದ ಹಾಲಪ್ಪ ಕೋರಿದರೆ, ತಮ್ಮ ಜಮೀನಿನಲ್ಲಿ ಹಾಕಿರುವ ಕಂಬಗಳನ್ನು ಸ್ಥಳಾಂತರಿಸುವಂತೆ ಷಡಕ್ಷರಪ್ಪ ಹೇಳಿದರು.</p>.<p>ರಮೇಶ್ ಉತ್ತರಿಸಿ, ಗಾಳಿಹಳ್ಳಿದಲ್ಲಿ ಸಮರ್ಪಕವಾಗಿಯೇ ವಿದ್ಯುತ್ ಪೂರೈಸಲಾಗುತ್ತಿದೆ. ಸ್ಥಳ ಪರಿಶೀಲಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಗಿರಿಯಾಪುರ ಗ್ರಾಮದಲ್ಲಿ ಕಂಬಗಳಿಂದ ಸಮಸ್ಯೆ ಉದ್ಭವಿಸಿಲ್ಲ. ಜಮೀನಿನ ಬದುವಿನಲ್ಲಿ ಕಂಬ ಅಳವಡಿಸಲಾಗಿದೆ’ ಎಂದರು.</p>.<p>ಯಗಟಿ ಪ್ರಭಾರ ಸಹಾಯಕ ಎಂಜಿನಿಯರ್ ರಮೇಶ್, ಹಿರೇನಲ್ಲೂರು ಸಹಾಯಕ ಎಂಜಿನಿಯರ್ ಕಿಶೋರ್, ಬೀರೂರು ಕಂದಾಯ ಶಾಖೆಯ ಪ್ರಭಾಕರ್, ಸುಧಾ ಹಾಗೂ ಗ್ರಾಹಕರಾದ ನವೀನ್, ರವಿಕುಮಾರ್, ಹರೀಶ್, ಬಿ.ಟಿ.ಚಂದ್ರಶೇಖರ್, ಜಗದೀಶ್, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು</strong>: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಕ್ಕೆ ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಪೂರೈಸುವ ‘ಅಮೃತ್ ಜ್ಯೋತಿ’ ಯೋಜನೆಗೆ ಬೀರೂರು ಉಪವಿಭಾಗದಲ್ಲಿ 678 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೆಸ್ಕಾಂ ಕಿರಿಯ ಎಂಜಿನಿಯರ್ ಜೆ.ಟಿ.ರಮೇಶ್ ತಿಳಿಸಿದರು.</p>.<p>ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಇದೆ. ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಕಡು ಬಡವರಿಗೆ ಉಚಿತ ಸಂಪರ್ಕ ಕಲ್ಪಿಸುವ ‘ಬೆಳಕು’ ಯೋಜನೆಯಡಿ 102 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ದಾಖಲೆ ಸರಿ ಇರದ 4 ಅರ್ಜಿಗಳು ತಿರಸ್ಕೃತವಾಗಿವೆ ಎಂದರು.</p>.<p>ಒಂದೇ ಪರಿವರ್ತಕದಿಂದ 28 ಕೊಳವೆ ಬಾವಿಗಳಿಗೆ ಸಂಪರ್ಕ ನೀಡಿದ್ದು, ಸಮರ್ಪಕ ವಿದ್ಯುತ್ ಲಭಿಸುತ್ತಿಲ್ಲ ಎಂದುಮುಗಳಿಕಟ್ಟೆಯ ಗ್ರಾಹಕ ಪಾರ್ಥಸಾರಥಿ ಹಾಗೂ ಜೋಡಿ ತಿಮ್ಮಾಪುರದ ಓಂಕಾರಪ್ಪ ಅಳಲು ತೋಡಿಕೊಂಡರು.</p>.<p>ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಂತರ, ಪರಿಹಾರ ನೀಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.</p>.<p>ವಿದ್ಯುತ್ ಕಂಬ ವಾಲಿದ್ದು, ಸರಿಪಡಿಸಬೇಕು. ಪಂಪ್ಸೆಟ್ಗೆ ಸಂಪರ್ಕ ಕಲ್ಪಿಸಬೇಕು ಎಂದು ಜೋಡಿತಿಮ್ಮಾಪುರದ ಶೇಷಪ್ಪ ಮನವಿ ಮಾಡಿದರು.</p>.<p>ಗ್ರಾಮಕ್ಕೆ ನಿರಂತರ ಜ್ಯೋತಿ ಪರಿವರ್ತಕದಿಂದ ವಿದ್ಯುತ್ ಸರಬರಾಜು ಮಾಡುವಂತೆ ಗಾಳಿಹಳ್ಳಿ ಗ್ರಾಮದ ಹಾಲಪ್ಪ ಕೋರಿದರೆ, ತಮ್ಮ ಜಮೀನಿನಲ್ಲಿ ಹಾಕಿರುವ ಕಂಬಗಳನ್ನು ಸ್ಥಳಾಂತರಿಸುವಂತೆ ಷಡಕ್ಷರಪ್ಪ ಹೇಳಿದರು.</p>.<p>ರಮೇಶ್ ಉತ್ತರಿಸಿ, ಗಾಳಿಹಳ್ಳಿದಲ್ಲಿ ಸಮರ್ಪಕವಾಗಿಯೇ ವಿದ್ಯುತ್ ಪೂರೈಸಲಾಗುತ್ತಿದೆ. ಸ್ಥಳ ಪರಿಶೀಲಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಗಿರಿಯಾಪುರ ಗ್ರಾಮದಲ್ಲಿ ಕಂಬಗಳಿಂದ ಸಮಸ್ಯೆ ಉದ್ಭವಿಸಿಲ್ಲ. ಜಮೀನಿನ ಬದುವಿನಲ್ಲಿ ಕಂಬ ಅಳವಡಿಸಲಾಗಿದೆ’ ಎಂದರು.</p>.<p>ಯಗಟಿ ಪ್ರಭಾರ ಸಹಾಯಕ ಎಂಜಿನಿಯರ್ ರಮೇಶ್, ಹಿರೇನಲ್ಲೂರು ಸಹಾಯಕ ಎಂಜಿನಿಯರ್ ಕಿಶೋರ್, ಬೀರೂರು ಕಂದಾಯ ಶಾಖೆಯ ಪ್ರಭಾಕರ್, ಸುಧಾ ಹಾಗೂ ಗ್ರಾಹಕರಾದ ನವೀನ್, ರವಿಕುಮಾರ್, ಹರೀಶ್, ಬಿ.ಟಿ.ಚಂದ್ರಶೇಖರ್, ಜಗದೀಶ್, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>