<p><strong>ಆಲ್ದೂರು</strong>: ಪಂಚಾಯಿತಿ ವ್ಯಾಪ್ತಿಯ 15 ವ್ಯಾಪಾರ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.</p>.<p>ಮುಂಗಡವಾಗಿ ಡಿಡಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳು ಹರಾಜಿನಲ್ಲಿ ಪಾಲ್ಗೊಂಡರು. ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಉಪಾಧ್ಯಕ್ಷ ಭರತ್ ಎ.ಬಿ, ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಹರಾಜು ನಡೆಯಿತು.</p>.<p>ಪಂಚಾಯಿತಿಗೆ ಸೇರಿದ 15 ಮಳಿಗೆಗಳಿದ್ದು ಶುಕ್ರವಾರ ನಡೆದ ಹರಾಜಿನಲ್ಲಿ 13 ಮಳಿಗೆಗಳನ್ನು ವ್ಯಾಪಾರಿಗಳು ಖರೀದಿಸಿದರು.</p>.<p>‘ಹರಾಜಿನಿಂದ ಒಟ್ಟು ₹10 ಲಕ್ಷ ಸಂಗ್ರಹವಾಗಿದೆ. ಮಳಿಗೆ ಪಡೆದವರು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ತಿಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ಶಂಶೂನ್ ನಹರ್ ಮಾಹಿತಿ ನೀಡಿದರು.</p>.<p>ಪಂಚಾಯಿತಿ ಸದಸ್ಯರಾದ ಅಶೋಕ್ ಡಿ.ಬಿ, ಗಿರೀಶ್ ಹವ್ವಳ್ಳಿ, ಸರೋಜಮ್ಮ, ನವರಾಜು ಎಚ್, ನಾಗರತ್ನಾ, ಮಮತಾ, ಕಾರ್ಯದರ್ಶಿ ಸಿ.ಡಿ ಉಷಾ, ಸಿಬ್ಬಂದಿ ಮಂಜುನಾಥ್, ಪ್ರವೀಣ್, ವಾಣಿ, ಪೂರ್ಣೇಶ್, ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ದೂರು</strong>: ಪಂಚಾಯಿತಿ ವ್ಯಾಪ್ತಿಯ 15 ವ್ಯಾಪಾರ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.</p>.<p>ಮುಂಗಡವಾಗಿ ಡಿಡಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳು ಹರಾಜಿನಲ್ಲಿ ಪಾಲ್ಗೊಂಡರು. ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಉಪಾಧ್ಯಕ್ಷ ಭರತ್ ಎ.ಬಿ, ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಹರಾಜು ನಡೆಯಿತು.</p>.<p>ಪಂಚಾಯಿತಿಗೆ ಸೇರಿದ 15 ಮಳಿಗೆಗಳಿದ್ದು ಶುಕ್ರವಾರ ನಡೆದ ಹರಾಜಿನಲ್ಲಿ 13 ಮಳಿಗೆಗಳನ್ನು ವ್ಯಾಪಾರಿಗಳು ಖರೀದಿಸಿದರು.</p>.<p>‘ಹರಾಜಿನಿಂದ ಒಟ್ಟು ₹10 ಲಕ್ಷ ಸಂಗ್ರಹವಾಗಿದೆ. ಮಳಿಗೆ ಪಡೆದವರು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ತಿಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ಶಂಶೂನ್ ನಹರ್ ಮಾಹಿತಿ ನೀಡಿದರು.</p>.<p>ಪಂಚಾಯಿತಿ ಸದಸ್ಯರಾದ ಅಶೋಕ್ ಡಿ.ಬಿ, ಗಿರೀಶ್ ಹವ್ವಳ್ಳಿ, ಸರೋಜಮ್ಮ, ನವರಾಜು ಎಚ್, ನಾಗರತ್ನಾ, ಮಮತಾ, ಕಾರ್ಯದರ್ಶಿ ಸಿ.ಡಿ ಉಷಾ, ಸಿಬ್ಬಂದಿ ಮಂಜುನಾಥ್, ಪ್ರವೀಣ್, ವಾಣಿ, ಪೂರ್ಣೇಶ್, ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>