<p><strong>ಚಿಕ್ಕಮಗಳೂರು: </strong>ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್ ಬಾಕ್ಸ್ (ಸುರಂಗ) ಅಳವಡಿಕೆ ಕಾರ್ಯವನ್ನು ಬುಧವಾರ ಮುಗಿಸಿ, ದ್ವಿಪಥದಲ್ಲಿ ರೈಲು<br />ಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.</p>.<p>ಅಜ್ಜಂಪುರ ಮತ್ತು ಶಿವನಿ ರೈಲು ನಿಲ್ದಾಣ ನಡುವೆ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್ ಬಾಕ್ಸ್ ತೂರಿಸುವ ಕಾರ್ಯವನ್ನು ರೈಲ್ವೆ ಎಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿತ್ತು.</p>.<p>‘ಅವಳಿಕಿಂಡಿಯ ಕಾಂಕ್ರಿಟ್ ಬಾಕ್ಸ್ ಅನ್ನು ಮಾರ್ಗದ ಕೆಳಗೆ ತೂರಿಸಲಾಗಿದೆ. 26 ದಿನಗಳಲ್ಲಿ ಈ ಕಾರ್ಯ ಮುಗಿಸಲಾಗಿದೆ. ಈ ಬಾಕ್ಸ್ 42 ಮೀಟರ್ ಉದ್ದ, ಅಗಲ 14 ಮೀಟರ್ ಹಾಗೂ ಎತ್ತರ 7 ಮೀಟರ್ ಇದೆ. ಸುಮಾರು 40 ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟು ಕಾರ್ಯನಿರ್ವಹಿಸಿ, ಅತ್ಯಂತ ವೇಗವಾಗಿ ಕೆಲಸ ಮುಗಿಸಿದ್ದಾರೆ’ ಎಂದು ಮೈಸೂರು ರೈಲ್ವೆ ವಿಭಾಗದ ಎಂಜಿನಿಯರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಾಕ್ಸ್ ಅಳವಡಿಕೆ ಬಹಳ ಸವಾಲಿನ ಕೆಲಸ ಇದಾಗಿತ್ತು. ನಿತ್ಯ 25ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದವು. ಅತ್ಯಾಧುನಿಕ ತಂತ್ರಜ್ಞಾನ, ವಿಧಾನಗಳನ್ನು ಬಳಸಿ ತ್ವರಿತವಾಗಿ ಮುಗಿಸಿದ್ದೇವೆ. ಕೋವಿಡ್ ತಲ್ಲಣದ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಹೇಳಿದರು.</p>.<p>‘ರೈಲ್ವೆಯವರು ಅವರ ಬಾಬ್ತಿನ ಕೆಲಸ ಪೂರೈಸಿದ್ದಾರೆ. ಇನ್ನು ರಕ್ಷಣಾ ಗೋಡೆ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸಗಳಿವೆ. ಇನ್ನು 15 ದಿನಗಳಲ್ಲಿ ಅದು ಮುಗಿಯಲಿದೆ’ ಎಂದು ಎಂದು ಭದ್ರಾ ಮೇಲ್ಡಂಡೆ ಅಜ್ಜಂಪುರ ವಿಭಾಗದ ಕಿರಿಯ ಎಂಜಿನಿಯರ್ ರಾಕೇಶ್ ಆನಂದ್ ತಿಳಿಸಿದರು.</p>.<p>ಕಾಮಗಾರಿ ನಿಟ್ಟಿನಲ್ಲಿ ದ್ವಿಪಥ ಮಾರ್ಗದಲ್ಲಿ (ಅಜ್ಜಂಪುರ– ಶಿವನಿವರೆಗೆ) ಏಕಪಥ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲಾಗಿತ್ತು. ಬಾಕ್ಸ್ ತೂರಿಸುವ ಒಂದು ಪಥದ ಹಳಿಗಳನ್ನು ತೆಗೆಯಲಾಗಿತ್ತು. ಈಗ ಮತ್ತೆ ಅಳವಡಿಸಲಾಗಿದೆ.</p>.<p>ರೈಲು ಮಾರ್ಗದ ಕೆಳಗೆ ಬಾಕ್ಸ್ ಅಳವಡಿಸಬೇಕಿದ್ದ ಸ್ಥಳಕ್ಕೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರು ಈಚೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಾಮಗಾರಿ ವೇಗವಾಗಿ ಮಾಡಿಸಿಕೊಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್ ಬಾಕ್ಸ್ (ಸುರಂಗ) ಅಳವಡಿಕೆ ಕಾರ್ಯವನ್ನು ಬುಧವಾರ ಮುಗಿಸಿ, ದ್ವಿಪಥದಲ್ಲಿ ರೈಲು<br />ಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.</p>.<p>ಅಜ್ಜಂಪುರ ಮತ್ತು ಶಿವನಿ ರೈಲು ನಿಲ್ದಾಣ ನಡುವೆ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್ ಬಾಕ್ಸ್ ತೂರಿಸುವ ಕಾರ್ಯವನ್ನು ರೈಲ್ವೆ ಎಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿತ್ತು.</p>.<p>‘ಅವಳಿಕಿಂಡಿಯ ಕಾಂಕ್ರಿಟ್ ಬಾಕ್ಸ್ ಅನ್ನು ಮಾರ್ಗದ ಕೆಳಗೆ ತೂರಿಸಲಾಗಿದೆ. 26 ದಿನಗಳಲ್ಲಿ ಈ ಕಾರ್ಯ ಮುಗಿಸಲಾಗಿದೆ. ಈ ಬಾಕ್ಸ್ 42 ಮೀಟರ್ ಉದ್ದ, ಅಗಲ 14 ಮೀಟರ್ ಹಾಗೂ ಎತ್ತರ 7 ಮೀಟರ್ ಇದೆ. ಸುಮಾರು 40 ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟು ಕಾರ್ಯನಿರ್ವಹಿಸಿ, ಅತ್ಯಂತ ವೇಗವಾಗಿ ಕೆಲಸ ಮುಗಿಸಿದ್ದಾರೆ’ ಎಂದು ಮೈಸೂರು ರೈಲ್ವೆ ವಿಭಾಗದ ಎಂಜಿನಿಯರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಾಕ್ಸ್ ಅಳವಡಿಕೆ ಬಹಳ ಸವಾಲಿನ ಕೆಲಸ ಇದಾಗಿತ್ತು. ನಿತ್ಯ 25ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದವು. ಅತ್ಯಾಧುನಿಕ ತಂತ್ರಜ್ಞಾನ, ವಿಧಾನಗಳನ್ನು ಬಳಸಿ ತ್ವರಿತವಾಗಿ ಮುಗಿಸಿದ್ದೇವೆ. ಕೋವಿಡ್ ತಲ್ಲಣದ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಹೇಳಿದರು.</p>.<p>‘ರೈಲ್ವೆಯವರು ಅವರ ಬಾಬ್ತಿನ ಕೆಲಸ ಪೂರೈಸಿದ್ದಾರೆ. ಇನ್ನು ರಕ್ಷಣಾ ಗೋಡೆ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸಗಳಿವೆ. ಇನ್ನು 15 ದಿನಗಳಲ್ಲಿ ಅದು ಮುಗಿಯಲಿದೆ’ ಎಂದು ಎಂದು ಭದ್ರಾ ಮೇಲ್ಡಂಡೆ ಅಜ್ಜಂಪುರ ವಿಭಾಗದ ಕಿರಿಯ ಎಂಜಿನಿಯರ್ ರಾಕೇಶ್ ಆನಂದ್ ತಿಳಿಸಿದರು.</p>.<p>ಕಾಮಗಾರಿ ನಿಟ್ಟಿನಲ್ಲಿ ದ್ವಿಪಥ ಮಾರ್ಗದಲ್ಲಿ (ಅಜ್ಜಂಪುರ– ಶಿವನಿವರೆಗೆ) ಏಕಪಥ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲಾಗಿತ್ತು. ಬಾಕ್ಸ್ ತೂರಿಸುವ ಒಂದು ಪಥದ ಹಳಿಗಳನ್ನು ತೆಗೆಯಲಾಗಿತ್ತು. ಈಗ ಮತ್ತೆ ಅಳವಡಿಸಲಾಗಿದೆ.</p>.<p>ರೈಲು ಮಾರ್ಗದ ಕೆಳಗೆ ಬಾಕ್ಸ್ ಅಳವಡಿಸಬೇಕಿದ್ದ ಸ್ಥಳಕ್ಕೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರು ಈಚೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಾಮಗಾರಿ ವೇಗವಾಗಿ ಮಾಡಿಸಿಕೊಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>