ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಂಬ ಸಮೇತ ಹೊರನಾಡಿನಲ್ಲಿ ನವಚಂಡಿಕಾ ಹೋಮ ನಡೆಸಿದರು.
ಇಬ್ಬರು ನಾಯಕರು ಕುಟುಂಬ ಸಮೇತ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಶನಿವಾರ ಸಂಜೆಯೇ ಬಂದಿಳಿದರು. ರಾತ್ರಿ ಪಾರಾಯಣ ನಡೆಸಿ ಬೆಳಿಗ್ಗೆ ಚಂಡಿಕಾ ಹೋಮದಲ್ಲಿ ಭಾಗಿಯಾದರು.
9 ಋತ್ವಿಜರ ನೇತೃತ್ವದಲ್ಲಿ ಯಾಗ ನಡೆಯಿತು.