ಸುನೀಲ್ ಮತ್ತು ದೊರೆ ಎಂಬುವರು ಪರವಾನಗಿ ಪಡೆಯದೆ ಪಿರುಮೇನಹಳ್ಳಿಯ ಸರ್ವೆ ನಂ 22 ರಲ್ಲಿ ಅನಧಿಕೃತವಾಗಿ ಗುಪ್ತವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿ ನೀಡಿದ ವರದಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಲ್ಲಿದ್ದ ರಾಘವೇಂದ್ರ ಎಂಬಾತನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಸ್ಥಳದಲ್ಲಿ ಬಂಡೆ ಸಿಡಿಸಿದ ಚೂರುಗಳ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.