ಚಿಕ್ಕಮಗಳೂರಿನ ವಿನಯ್ಕುಮಾರ್ ಸ್ವಾಮೀಜಿ ಮಾತನಾಡಿ, ಗುರುವಿನ ಬೆಂಬಲದಿಂದ ಗುರಿಯೆಡೆಗೆ ಸಾಗುವುದೇ ದರ್ಶನ. ಮಕ್ಕಳು ಮನೆ, ಮನಸ್ಸು ಮತ್ತು ಸಮಾಜವನ್ನು ಬೆಳಗುವ ಹಣತೆಯಾಗಬೇಕು. ಪೋಷಕರು ತಮ್ಮ ಆಶಯವನ್ನು ಮಕ್ಕಳ ಮೇಲೆ ಹೇರದೇ ಅವರ ಪ್ರತಿಭೆಗೆ ಸಾಣೆ ಹಿಡಿದು ಅವರ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂದರು.