<p><strong>ಶೃಂಗೇರಿ: </strong>ಬೆಟ್ಟದ ಮಲಹಾನಿಕರೇಶ್ವರ ರಥೋತ್ಸವವು ಸೋಮವಾರ ಬೆಳಿಗ್ಗೆ ಮತ್ತು ಸಂಜೆ ನಡೆಯಿತು. ಬೆಳಿಗ್ಗೆ ರಥವನ್ನು ಶಾರದಾ ಪೀಠದಿಂದ ಆರಂಭಿಸಿ ರಥಬೀದಿಯ ಮಧ್ಯದಲ್ಲಿ ನಿಲ್ಲಿಸಲಾಯಿತು. ಸಂಜೆ 6 ಗಂಟೆಗೆ ಅಲ್ಲಿಂದ ರಥವನ್ನು ಎಳೆದು ಉತ್ಸವ ನಡೆಸಲಾಯಿತು.</p>.<p>ಶಾರದಾ ಮಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ಅವರು ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿದ ಬಳಿಕ ತಾಲ್ಲೂಕಿನ ಜನರು ಉತ್ಸವಕ್ಕೆ ಚಿತ್ತೈಸಿ ಎಂದು ಯತಿವರ್ಯರನ್ನು ಪ್ರಾರ್ಥಿಸಿದ ಬಳಿಕ ವಿಧುಶೇಖರಭಾರತಿ ಸ್ವಾಮೀಜಿ ಅವರು ರಥದಲ್ಲಿರುವ ಉತ್ಸವಮೂರ್ತಿಗೆ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಶಾರದ ಮಠದ ಆಶ್ವಗಳು, ಆನೆಗಳು, ತಟ್ಟಿರಾಯಗಳು, ಛತ್ರಿ-ಚಾಮರಗಳೊಂದಿಗೆ ಉತ್ಸವ ಮುಖ್ಯಬೀದಿಯಲ್ಲಿ ಸಾಗಿ ಬಂದಿತು. ರಸ್ತೆಗಳ ಇಕ್ಕೆಲಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರ ಉತ್ಸವಕ್ಕೆ ಮೆರಗು ನೀಡಿದವು. ತಾಲ್ಲೂಕಿನ ಭಕ್ತರು ಹಾಗೂ ಶಾರದ ಮಠದ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ: </strong>ಬೆಟ್ಟದ ಮಲಹಾನಿಕರೇಶ್ವರ ರಥೋತ್ಸವವು ಸೋಮವಾರ ಬೆಳಿಗ್ಗೆ ಮತ್ತು ಸಂಜೆ ನಡೆಯಿತು. ಬೆಳಿಗ್ಗೆ ರಥವನ್ನು ಶಾರದಾ ಪೀಠದಿಂದ ಆರಂಭಿಸಿ ರಥಬೀದಿಯ ಮಧ್ಯದಲ್ಲಿ ನಿಲ್ಲಿಸಲಾಯಿತು. ಸಂಜೆ 6 ಗಂಟೆಗೆ ಅಲ್ಲಿಂದ ರಥವನ್ನು ಎಳೆದು ಉತ್ಸವ ನಡೆಸಲಾಯಿತು.</p>.<p>ಶಾರದಾ ಮಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ಅವರು ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿದ ಬಳಿಕ ತಾಲ್ಲೂಕಿನ ಜನರು ಉತ್ಸವಕ್ಕೆ ಚಿತ್ತೈಸಿ ಎಂದು ಯತಿವರ್ಯರನ್ನು ಪ್ರಾರ್ಥಿಸಿದ ಬಳಿಕ ವಿಧುಶೇಖರಭಾರತಿ ಸ್ವಾಮೀಜಿ ಅವರು ರಥದಲ್ಲಿರುವ ಉತ್ಸವಮೂರ್ತಿಗೆ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಶಾರದ ಮಠದ ಆಶ್ವಗಳು, ಆನೆಗಳು, ತಟ್ಟಿರಾಯಗಳು, ಛತ್ರಿ-ಚಾಮರಗಳೊಂದಿಗೆ ಉತ್ಸವ ಮುಖ್ಯಬೀದಿಯಲ್ಲಿ ಸಾಗಿ ಬಂದಿತು. ರಸ್ತೆಗಳ ಇಕ್ಕೆಲಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರ ಉತ್ಸವಕ್ಕೆ ಮೆರಗು ನೀಡಿದವು. ತಾಲ್ಲೂಕಿನ ಭಕ್ತರು ಹಾಗೂ ಶಾರದ ಮಠದ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>