ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೋಮವಾರ 46 ಮಂದಿಗೆ ಕೋವಿಡ್ ದೃಢಪಟ್ಟಿದೆ. 53 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 27, ಕಡೂರು ಮತ್ತು ತರೀಕೆರೆ ತಲಾ 6, ಕೊಪ್ಪ–3, ಶೃಂಗೇರಿ–2 ಹಾಗೂ ಎನ್.ಆರ್.ಪುರ ಹಾಗೂ ಅಜ್ಜಂಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 607 ಸಕ್ರಿಯ ಪ್ರಕರಣಗಳು ಇವೆ. 451 ಮಂದಿ ಗುಣಮುಖರಾಗಿದ್ದಾರೆ. ಈವರೆಗಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1133ಕ್ಕೆ ತಲುಪಿದೆ. ಜಿಲ್ಲೆಯ ವಿವಿಧೆಡೆ 433 ನಿಯಂತ್ರಿತ ವಲಯ (ಕಂಟೈನ್ಮೆಂಟ್ ಝೋನ್) ಇವೆ. ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಈವರೆಗೆ 24 ಮಂದಿ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಎರಡು ಪ್ರಕರಣ ಸಹಿತ) ಸಾವಿಗೀಡಾಗಿದ್ದಾರೆ.
ಪಟ್ಟಿ
ಜಿಲ್ಲೆಯಲ್ಲಿ ಒಟ್ಟು: 1133
ದಿನದ ಏರಿಕೆ: 46
ಸಕ್ರಿಯ ಪ್ರಕರಣ: 607
ದಿನದ ಏರಿಕೆ: 00
ಗುಣಮುಖ: 451
ದಿನದ ಏರಿಕೆ: 53
ಸಾವು: 24 (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ 2 ಪ್ರಕರಣ ಸಹಿತ)